ಗದಗ: ಶಾಂತಿ, ಕೋಮು ಸೌಹಾರ್ಧತೆಗೆ ಜಿಲ್ಲೆ ಹೆಸರುವಾಸಿಯಾಗಿದೆ. ಇಂತಹ ಸೌಹಾರ್ಧ ತಾಣದಲ್ಲಿ ದೀಪಾವಳಿ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸೋಣ. ಹೀಗಾಗಿ ಚರ್ಚ್, ದರ್ಗಾ ಮಸೀದಿಗಳಲ್ಲಿ ದೀಪ ಬೆಳಗಿಸುವ ಮೂಲಕ ನಾಡಿನಲ್ಲಿ ಕೋಮು ಸೌಹಾರ್ದತೆ ಬಲಪಡಿಸಲು ಮುಂದಾಗೋಣ ಎಂದು ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಗದುಗಿನ ಐತಿಹಾಸಿಕ ವೀರ ನಾರಾಯಣ, ತ್ರಿಕುಟೇಶ್ವರ ದೇವಸ್ಥಾನ ಹಾಗೂ ಜುಮ್ಮಾ ಮಸಿದಿಗಳನ್ನು ಒಳಗೊಂಡAತೆ ಒಂದೇ ಒಂದು ಟ್ರಸ್ಟ್ ಕಮೀಟಿ ಇದೆ. ಹಿಂದೂ ದೇವಾಲಯ ಮುಸ್ಲಿಂಮರ ಮಸಿದಿಗೆ ಈ ತರಹದ ಟ್ರಸ್ಟ್ ಇರುವುದು ದೇಶದಲ್ಲಿ ಇದು ಒಂದೇಯಾಗಿದೆ ಎಂದು ಹೇಳಿದರು.
ಜ. ತೊಂಟದಾರ್ಯ ಮಠ, ವಿರೇಶ್ವರ ಪುಣ್ಯಾಶ್ರಮಗಳು ನಾಡಿನ ಕೊಮು ಸೌಹಾರ್ದತೆಗೆ ದೇಶದಲ್ಲಿಯೇ ಮಾದರಿಯಾಗಿವೆ. ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಮೊಹರಂ ಹಬ್ಬದ ನಿಮಿತ್ಯ ಸೊರಟೂರಿನ ಅನ್ನದಾನೇಶ್ವರ ಮಠದಲ್ಲಿ ಯುಗಾದಿಗೆ, ಕುರ್ತಕೊಟಿ ಗ್ರಾಮದ ಶರಣ ಬಸವೇಶ್ವರ ಜಾತ್ರಾ ಸಮಯದಲ್ಲಿ ನಡೆಯುವ ಪುರಾಣಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ನಾಡಿನ ಕೋಮು ಸೌಹಾರ್ದತೆ ಮತ್ತೊಂದು ಉದಾಹರಣೆಯಾಗಿದೆ.
ಹೀಗಾಗಿ ಈ ವರ್ಷದ ದೀಪಾವಳಿ ಹಬ್ಬದಂದು ಮಸೀದಿ, ದರ್ಗಾ ಚರ್ಚ್ಗಳಲ್ಲಿ ದೀಪ ಬೆಳಗುವ ಮೂಲಕ ಕೋಮು ಸೌಹಾರ್ಧತೆಯನ್ನು ನಾಡಿಗೆ ಸಾರಬೇಕು ಎಂದರು. ಬೆಳಗಾವಿ ವಿಭಾಗದ ಸಂಘಟನಾ ಕಾರ್ಯಾದರ್ಶಿ ಗಣೇಶ ಸಿಂತ್ರೆ, ಜಿಲ್ಲಾಧ್ಯಕ್ಷ ಮಹೇಶ ಕುರ್ತಕೋಟಿ, ಶಿವಯೋಗಿ ಹಿರೇಮಠ, ನಾಗರಾಜ ಗಡಿಯಪ್ಪ, ಮಾಂತೇಶ ಪಾಟೀಲ, ಅನೀಲ ಮುಳ್ಳಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು