ಲಕ್ಷ್ಮೇಶ್ವರ: ಬಿಜೆಪಿ ರಾಜಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಬಹಿರಂಗವಾಗಿ ಹೇಳಿರುವ ಸದಾಶಿವ ಆಯೋಗದ ಬಗೆಗಿನ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಬಂಜಾರ ಸಮಾಜದ ಕ್ಷಮೆಯಾಚಿಸಬೇಕೆಂದು ಲಕ್ಷ್ಮೇಶ್ವರ ಘಟಕದ ಬಂಜಾರ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ಬಂಜಾರ ಯುವ ಸೇನೆ ಅಧ್ಯಕ್ಷ ಅರ್ಜುನ ಕಾರಬಾರಿ ಮಾತನಾಡಿ ಪರಿಶಿಷ್ಟ ವರ್ಗದ ಕೊರಮ, ಕೊರಚ, ಭೋವಿ, ಸುಡಗಾಡ ಸಿದ್ದರು, ಮತ್ತು ಇತರರನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಪರೋಕ್ಷ ಹೇಳಿಕೆ ನೀಡಿದ್ದಾರೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ಶಿರಾ ಉಪಚುನಾವಣೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿರುವುದನ್ನು ಬಂಜಾರ ಹಾಗೂ ಇತರೆ ಪರಿಶಿಷ್ಟ ಜಾತಿಯ ಜನಾಂಗದವರು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಟೀಲ್ ವಿರುದ್ಧ ಕಿಡಿಕಾರಿದ್ರು.

ಮಹೇಶ ಅಕ್ಕಿಗುಂದ ಮಾತನಾಡಿ ನಳಿನಕುಮಾರ ಈ ಹೇಳಿಕೆ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ನ್ಯಾ.ಸದಾಶಿವ ವರದಿಯ ಬಗ್ಗೆ ಸರಕಾರದಲ್ಲಿ ವಾದವಿವಾದಗಳು ನಡೆಯುತ್ತಿವೆ. ಈ ಬಗ್ಗೆ ಬಹಿರಂಗ ಚರ್ಚೆಯಲ್ಲಿ ಆಗಿಲ್ಲ. ಆದರೆ ಕಟೀಲ್ ಅವರು ಸದಾಶಿವ ವರದಿಯ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲದೇ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪರಮೇಶ ಲಮಾಣಿ, ರಮೇಶ ಲಮಾಣಿ, ನಾಗೇಶ ಲಮಾಣಿ, ಗಣೇಶ ನಾಯಕ, ಸೋಮು ಲಮಾಣಿ, ಕಿರಣ ಲಮಾಣಿ, ಟಿ.ಸಿ.ಪೂಜಾರ ಕೃಷ್ಣ ಲಮಾಣಿ, ಅಶೋಕ ಲಮಾಣಿ, ವಿಠ್ಠಲ ನಾಯಕ, ಶಂಕರ ಕಾರಬಾರಿ, ಮಾಂತೇಶ ಲಮಾಣಿ, ನಾನಪ್ಪ ಲಮಾಣಿ, ಗಣೇಶ ಲಮಾಣಿ, ಶಿವಪ್ಪ ಲಮಾಣಿ, ಗೋಪಿ ಲಮಾಣಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಮತ್ತೊಮ್ಮೆ ರೈತರಿಂದ ಬಂದ್ ಕರೆ

ಬೆಂಗಳೂರು: ಡಿ.5 ರಂದಷ್ಟೆ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆ ನೀಡಿದ ಬಂದ್ ಕರೆ ಬೆನ್ನಲ್ಲೆ, ಡಿ.8 ಕ್ಕೆ ರೈತಪರ ಸಂಘಟನೆಗಳು ರಾಜ್ಯ ಬಂದ್ ಕರೆ ನೀಡಿವೆ. ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ರಾಜ್ಯದ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.

ಎಮ್.ಎಲ್.ಎ ಸಾಹೇಬರೆ ಮಾಸ್ಕ್ ಹಾಕ್ಕೊಳ್ಳಿ ಪ್ಲೀಸ್..!

ಶಾಸಕರಾಗಿ ಜನರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದರಲ್ಲ ಎನ್ನುವುದು ನಿಜವಾಗಿಯೂ ಪ್ರಶಂಸನೀಯವೇ. ಆದರೆ ಯಾವುದನ್ನು ಪಾಲನೆ ಮಾಡುವ ಕುರಿತು ಶಾಸಕರು ಮಾತನಾಡುತ್ತಿದ್ದರೋ ಅದನ್ನೇ ಶಾಸಕರು ಮರೆತಿದ್ದರು.

ಕತ್ತಿ ವರಸೆಗೆ ಶಾಕ್ ಕೊಟ್ರು ಸಿಎಂ..!

ಇತ್ತೀಗಷ್ಟೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಶಾಸಕ ಉಮೇಶ್ ಕತ್ತಿ, ಡಿನ್ನರ್ ಪಾಲಿಟಿಕ್ಸ್ ನಡೆಸಿದ್ರು. ಇದರಲ್ಲಿ ಕೆಲವು ಅತೃಪ್ತ ಶಾಸಕರು ಭಾಗವಹಿಸಿದ್ದು ಬಿಜೆಪಿಯಲ್ಲಿ ಕುಚ್… ಕುಚ್ ಹೋ ರಹಾ ಹೈ ಎಂಬ ಚರ್ಚೆಗೆ ಮುನ್ನುಡಿ ಬರೆದಿತ್ತು. ಉಮೇಶ್ ಕತ್ತಿ ಮನೆಯಲ್ಲಿ ಶೀಕರಣಿ ಊಟದ ರಾಜಕಾರಣದ ಬೆನ್ನಲ್ಲೆ ಸಿಎಂ ಬಿಎಸ್ವೈ ಪರ ಹಾಗೂ ವಿರೋಧ ಚರ್ಚೆಗಳು ನಡೆದವು. ಇದು ಸ್ವತ: ಸಿಎಂ ಯಡಿಯೂರಪ್ಪ ಅವರಿಗೂ ಮುಜುಗುರ ತಂದಿರಬಹುದು. ಆದರೆ ಬಿಎಸ್ವೈ ಹೈಕಮಾಂಡ್ ಮಟ್ಟದಲ್ಲಿ ಇನ್ನು ಪವರ್ ಫುಲ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೇ ಸಾಕ್ಷಿಯಾಗಿದೆ.

ರೋಣ ತಾಲೂಕಿನಲ್ಲಿ ವಿಸ್ಟೇನ್ ಕಂಪನಿ ಕಾರ್ಯಕ್ಕೆ ಮೆಚ್ಚುಗೆ

ವಿಸ್ಟೇನ್ ಟೆಕ್ನಿಕಲ್ ಆಂಡ್ ಸರ್ವಿಸಸ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಇಂಡಿಯಾ ವತಿಯಿಂದ ಶನಿವಾರ ತಾಲೂಕು ಮಾಡಲಗೇರಿ ಗ್ರಾಮದಲ್ಲಿ ಜಿಲ್ಲೆಯ 25 ಜನರಿಗ ಕೃತಕ ಕಾಲು, ಕೃತಕ ಕೈ, ವೀಲ್ ಚೇರ್, ವಾಕಿಂಗ್ ಸ್ಟಾಂಡ್, ವಾಕಿಂಗ್ ಸ್ಟಿಕ್, ಕಾಲಿಪರ್, ಶೂಸ್, ನೀ ಕ್ಯಾಪ್ ಇತ್ಯಾದಿ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.