ಅಹಮದಾಬಾದ್ : ಸಾಮಾಜಿಕ ಜಾಲತಾಣದ ಮೂಲಕ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಅಹಮದಾಬಾದ್ ನ ಶೆಲಾದಲ್ಲಿ ನಡೆದಿದೆ. ಚಾಲಾಕಿ ಮಹಿಳೆಯು ಉದ್ಯಮಿಯಿಂದ ರೂ. 2.54 ಲಕ್ಷ ದೋಚಿದ್ದಾರೆ. ಪೂಜಾ ಪ್ರಜಾಪತಿ ಎಂಬ ಹೆಸರಿನ ಪ್ರೊಫೈಲ್‍ ನಿಂದ ಫೇಸ್‍ ಬುಕ್ ನಲ್ಲಿ ಬಂದಿರುವ ಫ್ರೆಂಡ್ ರಿಕ್ವೆಸ್ಟ್ ಅನ್ನು ಉದ್ಯಮಿ ಕಲ್ಪೇಶ್ ಸ್ವೀಕರಿಸಿದ್ದರು. ಸ್ವಲ್ಪ ಸಮಯದವರೆಗೆ ಚಾಟ್ ಮಾಡಿದ ನಂತರ ಪೂಜಾ, ಉದ್ಯಮಿಯನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ. 

ಹೀಗಾಗಿ ಇಬ್ಬರೂ ಅ. 19ರಂದು ಅವರ ವಿರಾಮಗಂ ನಿವಾಸದಲ್ಲಿ ಭೇಟಿಯಾಗಿದ್ದರು. ಆಗ ಪೂಜಾ, ತನಗೆ ಸ್ವಲ್ಪ ನೀರು ಕೇಳಿದ್ದಾಳೆ. ಆಗ ಉದ್ಯಮಿ ನೀರು ತರಲು ಒಳಗೆ ಹೋಗಿದ್ದಾರೆ. ಆಗ ಪೂಜಾ ಕಡೆಯ ನಾಲ್ಕಾರು ಜನರು ಒಳಗೆ ಬಂದು ಕಲ್ಪೇಶ್‍ ನನ್ನು ಹೊಡೆದಿದ್ದಾರೆ. 

ಆ ನಾಲ್ವರು ಅತ್ಯಾಚಾರ ಪ್ರಕರಣದಲ್ಲಿ ಕಲ್ಪೇಶ್ ನ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆಗ ಕಲ್ಪೇಶ್ ನನ್ನು ಹೊರ ವಲಯಕ್ಕೆ ಕರೆದುಕೊಂಡು ಹೋಗಿ ರೂ. 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಭಯಗೊಂಡ ಕಲ್ಪೇಶ್ ಅವರಿಗೆ ರೂ. 2.45 ಲಕ್ಷ ನಗದು ಮತ್ತು ರೂ. 3.5 ಲಕ್ಷ ರೂ.ಗಳ ಮೂರು ಚೆಕ್ ನೀಡಿದ್ದಾನೆ. ಸದ್ಯ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಪೂಜಾ ಹಾಗೂ ಆರು ಜನರ ವಿರುದ್ಧ ವಿರಾಮಗಂ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದ್ದಾರೆ. ಪೊಲೀಸರು ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ : ಶಿವನ ಸನ್ನಿಧಿಯಲ್ಲಿ ಜನಸಾಗರ ವೈಭವ..!
ದೇವಲಾಪುರ ಬಸವ ಉದ್ಯಾನದಲ್ಲಿ ಬ್ರಹತ್ ಈಶ್ವರನ ಮೂತಿ೯ ವೀಕ್ಷಿಸಿದ ಭಕ್ತರು

ವರದಿ : ಗುಲಾಬಚಂದ ಜಾಧವಆಲಮಟ್ಟಿ : ಹಿಂದು ಸಂಪ್ರದಾಯದ ಅತ್ಯಂತ ಪವಿತ್ರ ಹಬ್ಬ ಮಹಾ ಶಿವರಾತ್ರಿ…

ಹಿಂದೂ ಅಂತ ಭಾರತೀಯ ಭಾಷೆಯಲ್ಲಿ ಇಲ್ಲ: ಸಾಹಿತಿ ಸೂಳಿಭಾವಿ

ಉತ್ತರಪ್ರಭ ಸುದ್ದಿಗದಗ: ಹಿಂದು ಪದ ಭಾರತೀಯದ್ದಲ್ಲ ಅದು ಪರ್ಷಿಯನ್ ನಿಂದ ಬಂದಿದೆ. ಪರ್ಷಿಯನ್ ಹಾಗೂ ಇಸ್ಲಾಂದಲ್ಲಿ…

ಮುಳುಗದ ರವಿ‌ ಬೆಳಗು

ಪತ್ರಕರ್ತ, ಕವಿ, ಕತೆಗಾರ, ಅನುವಾದಕ, ವಿವಾದಾತ್ಮಕ ಬರಹಗಾರ ರವಿ ಬೆಳಗೆರೆ ನಿರೀಕ್ಷಿತವಾಗಿ ದೈಹಿಕವಾಗಿ ಹೋಗಿದ್ದಾರೆ. ಕುಡಿತ, ಸಿಗರೇಟ್, ರಸಿಕತೆ ರವಿಯನ್ನು ಬಲಿ ತೆಗೆದುಕೊಂಡಿದೆ. ಯಾವತ್ತಾದರೂ ಒಂದು ದಿನ ಸಾಯೋದೇ, ಹ್ಯಾಗ ಬದುಕಿದರೆ ಏನು? ಎಂಬ ಉಡಾಫೆಯೂ ಇತ್ತಲ್ಲ! ಆದರೆ ರವಿ very very colourful ಕನಸುಗಾರ. ಬದುಕಿನ ರಹಸ್ಯಗಳನ್ನು ಬಿಚ್ಚಿಟ್ಟ ಎದೆಗಾರ. ತುಂಬಾ ಕಾಡಿ ಕನಲಿದ ಹುಟ್ಟಿನ ರಹಸ್ಯ ಬಿಚ್ಚಿಟ್ಟು ನಿರಾಳವಾದ ಹೊತ್ತಲ್ಲಿ ಜೀವ ಬಿಟ್ಟ ಜಾದೂಗಾರ.

ಕೊರೊನಾ ಎಫೆಕ್ಟ್: ಎಂಜನೀಯರಿಂಗ್, ಡಿಪ್ಲೋಮಾ, ಎಂಬಿಎ, ಐಟಿಐ ಉದ್ಯೋಗಿಗಳು ನರೆಗಾ ಕೆಲಸಕ್ಕೆ..!

ಉನ್ನತ ಶಿಕ್ಷಣ ಪಡೆದು ತಿಂಗಳಾದರೆ ಸಾಕು ಕೈತುಂಬ ಸಂಬಳ ಎಣಿಸುತ್ತಿದ್ದವರು ಬದುಕಿನ ಅನಿವಾರ್ಯತೆಗೆ ನರೇಗಾ ಕೂಲಿ ಕೆಲಸಕ್ಕೆ ಹೊರಟಿದ್ದಾರೆ.