ವರದಿ : ಗುಲಾಬಚಂದ ಜಾಧವ
ಆಲಮಟ್ಟಿ : ಹಿಂದು ಸಂಪ್ರದಾಯದ ಅತ್ಯಂತ ಪವಿತ್ರ ಹಬ್ಬ ಮಹಾ ಶಿವರಾತ್ರಿ ನಿಮಿತ್ಯ ಇಲ್ಲಿನ ರಾಮಲಿಂಗೇಶ್ನರ ದೇಗುಲದಲ್ಲಿ ಪೂಜಾ ಕೈಂಕರ್ಯಗಳು ಭಕ್ತಿಪೂರ್ವಕವಾಗಿ ಶನಿವಾರ ನಡೆದವು. ಹಾಗೂ ಸಮೀಪದ ದೇವಲಾಪುರ ಬಳಿ ಕೃಷ್ಣಾ ಭಾಗ್ಯ ಜಲ ನಿಗಮ ಅರಣ್ಯ ಇಲಾಖೆ ವತಿಯಿಂದ ನಿಮಿ೯ಸಿರುವ ಸತ್ಯಂ ಶಿವಂ ಸುಂದರಂ ಬಸವ ಉದ್ಯಾನಕ್ಕೆ (ನಿಡಗುಂದಿ ಪೋಲೀಸ್ ಠಾಣೆ ಎದುರು) ಜನ ಬೆಳಿಗ್ಗೆಯಿಂದಲೇ ಲಗ್ಗೆಯಿರಿಸಿ ಗಾರ್ಡನ್‌ ದಲ್ಲಿನ ಬ್ರಹತ್ ಶಿವನ ಮೂತಿ೯ಯ ದರ್ಶನ ಪಡೆದರು. ಉದ್ಯಾನದಲ್ಲಿನ ಶಿವನ ಮೂತಿ೯ವೀಕ್ಷಿಸಲು ವಿವಿಧೆಡೆಯಿಂದ ಸಾವಿರಾರು ಜನ ಆಗಮಿಸಿದ್ದರು. ಶಿವನ ಮೂತಿ೯ಗೆ ಕೈಮುಗಿದು ನಮಿಸಿ ಧನ್ಯತೆ ಮೆರೆದರು.

ಆಲಮಟ್ಟಿ ಸಮೀಪದ ದೇವಲಾಪುರ ಬಳಿ ಕೃಷ್ಣಾ ಭಾಗ್ಯ ಜಲನಿಗಮ ಅರಣ್ಯ ವಿಭಾಗದ ವತಿಯಿಂದ ನಿಮಾ೯ಣಗೊಂಡಿರುವ ಉದ್ಯಾನಕ್ಕೆ ಭೇಟಿ ನೀಡಿ ಶಿವನ ಸನ್ನಿಧಿಯಲ್ಲಿ ಸೇರಿರುವ ಅಪಾರ ಜನಸಾಗರ.

ಅಪಾರ ಭಕ್ತರು ಈ ಉದ್ಯಾನಕ್ಕೆ ಭೇಟಿ ನೀಡಿ ಮಹಾದೇವನ ಕೃಪೆಗೆ ಪಾತ್ರರಾದರು. ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿವನ ಮೂತಿ೯ಯ ಸನ್ನಿಧಿಯಲ್ಲಿ ಸೇರಿದ್ದರು. ಸಂಜೆ ವೇಳೆ ಭಕ್ತರ ಆಗಮನ ಹೆಚ್ಚಳವಾಯಿತು. ಶಿವನ ಸ್ಮರಣೆಯಲ್ಲಿ ಭಕ್ತಗಣ ಮಿಂದೆದ್ದಿತ್ತು.ವಿಶೇಷ ಪೂಜೆ,ಪುರಸ್ಕಾರದಲ್ಲಿ ತನ್ಮಯರಾಗಿದ್ದರು. ಮಹಾ ಶಿವರಾತ್ರಿ ಸಡಗರ ಇಲ್ಲಿ ಮನೆ ಮಾಡಿತ್ತು. ಹಲವಾರು ಜನ ದಿನವಿಡಿ ಆಹಾರ ಸೇವಿಸದೇ ಉಪವಾಸ ವೃತ ಆಚರಿಸಿದರು. ಶಿವ ಧ್ಯಾನದಲ್ಲಿಂದು ಹೆಚ್ಚು ಕಡಿಮೆ ಜನತೆ ಮೊಳಗಿದ್ದರು. ಪವಿತ್ರ ಭಾವದಿಂದ ಈಶ್ವರನನ್ನು ಆರಾಧಿಸಿ ಪೂನೀತಭಾವ ತಾಳಿದರು.


ಆತ್ಮ ಪರಿಶುದ್ಧಿಗಾಗಿ, ಮನಸ್ಸಿನ ಕೊಳೆ ತೊಲಗಿಸಿಕೊಳ್ಳುವ ನಿಟ್ಟಿನಲ್ಲಿ ಶಿವರಾತ್ರಿ ಸಮಯದಲ್ಲಿ ಶಿವನನ್ನು ಆರಾಧಿಸಿ ಆ ಮೂಲಕ ಭಗವಂತನ ಅನುಗ್ರಹ ಪಡೆಯುತ್ತಾರೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಐತಿಹ್ಯವುಳ್ಳ ಪ್ರತೀತ ಹಿನ್ನೆಲೆಯಲ್ಲಿ ಶಿವನ ಸ್ಮರಣೆಯಲ್ಲಿ ಅಸಂಖ್ಯ ಜನತೆ ತನ್ಮಯರಾಗಿ ಏಕಾಗ್ರತೆಯಿಂದ ನೀಲಕಂಠನನ್ನು ಪೂಜಿಸುತ್ತಾರೆ.ಆ ನಿಟ್ಟಿನಲ್ಲಿ ಶಾಂತ ಮನಸ್ಸನ್ನು ಇರಿಸಿಕೊಳ್ಳಲು ಜನಸ್ತೋಮ ಬಯಸುತ್ತಾರೆ ಎಂದು ಯೋಗಪಟು ಗಂಗಾಧರ ಹಿರೇಮಠ ನುಡಿದರು.

Leave a Reply

Your email address will not be published. Required fields are marked *

You May Also Like

ವರ್ಷಕ್ಕೆ ಒಬ್ಬ ಮನುಷ್ಯ 50 ಕಿಲೋ ಅಹಾರ ವ್ಯರ್ಥ ಮಾಡುತ್ತಾನೆ

ನವದೆಹಲಿ: ದೇಶದಲ್ಲಿ ಒಬ್ಬ ಮನುಷ್ಯ ಮಂದು ವಷ೵ಕ್ಕೆ 50 ಕಿಲೋ ಗ್ರಾಂ ಅಹಾರ ವ್ಯಥ೵ ಮಾಡುತ್ತಾನೆ…

ಮುಂದಿನ ದಿನಗಳಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಂತೆ

ಮುಂದಿನ ದಿನಗಳಲ್ಲಿ ಒಂದಿಷ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಸಮಸ್ಯೆ ಎದುರಿಸಲು ಸರಕಾರ ಸಂಪೂರ್ಣ ಸಜ್ಜಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿದರು.

ಚರಂಡಿ ಹೂಳು ಎತ್ತಿಸಿ ಸ್ವಚ್ಛತೆ : ಗ್ರಾ.ಪಂ ಸದಸ್ಯನ ಕಾರ್ಯಕ್ಕೆ ಪ್ರಶಂಸೆ

ಕಲ್ಲೂರ ಗ್ರಾಮದ 2ನೇ ವಾರ್ಡಿನ ಯಳವತ್ತಿ ರಸ್ತೆಯ ಚರಂಡಿಯಲ್ಲಿ ಸುಮಾರು ವರ್ಷಗಳಿಂದ ತುಂಬಿಕೊಂಡಿದ್ದ ಹೂಳು ಎತ್ತಿಸಿ ಸ್ವಚ್ಛತೆ ಕೈಗೊಂಡ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ರಾಮರಡ್ಡಿ ಅವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.

ಅಟ್ಲಾಂಟಾ ಫಿಲಂ ಫೆಸ್ಟಿವಲ್ ಗೆ ಬರಗೂರರ ಅಮೃತಮತಿ ಆಯ್ಕೆ

ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‌ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ ಅಟ್ಲಾಂಟಾ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.