ಬೆಂಗಳೂರು : ಈರುಳ್ಳಿ ಬೆಲೆ ಗಗನಕ್ಕೆ ಹೋಗಿದೆ. ಹೀಗಾಗಿ ಈರುಳ್ಳಿಯನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಹೊಟೇಲ್, ಡಾಬಾ, ರೆಸ್ಟೋರೆಂಟ್ ಗಳು ಸೇರಿದಂತೆ ಆಹಾರ ಪದಾರ್ಥ ತಯಾರಿಕಾ ಉದ್ಯಮಗಳಲ್ಲಿ ಈರುಳ್ಳಿ ಬಳಕೆಯನ್ನು ಮಿತಿಗೊಳಿಸಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ರುಚಿ ಇಲ್ಲದಂತಾಗಿದೆ.

ಕಳೆದ ವರ್ಷ ಡಿಸೆಂಬರ್‌ ನಲ್ಲಿ ಕೂಡ ಈರುಳ್ಳಿಯ ಬೆಲೆ ಇದೇ ರೀತಿ ಗಗನಕ್ಕೆ ಏರಿಕೆ ಕಂಡಿತ್ತು. ಆ ಸಂದರ್ಭದಲ್ಲಿ ಈರುಳ್ಳಿಯ ಬೇಲೆ ರೂ. 150-180 ಇತ್ತು. ಸದ್ಯ ಇದರ ಬೆಲೆ ರೂ. 100ರ ಆಸುಪಾಲಿಗೆ ಬಂದಿದೆ. ಆದರೆ, ಸದ್ಯ ಕೊರೊನಾ ಹಾವಳಿಯಿಂದ ಪ್ರತಿಯೊಬ್ಬರೂ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಜನರು ಈರುಳ್ಳಿ ಸಹವಾಸ ಬೇಡ ಎನ್ನುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಪ್ರತಿ ಕೆಜಿಗೆ ರೂ. 100ರಷ್ಟಾಗಿದೆ. ಅಲ್ಲದೇ, ಉತ್ತಮ ಗಡ್ಡೆಗಳು ಅದಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಹೀಗಾಗಿ ಗ್ರಾಹಕರು ಈರುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈರುಳ್ಳಿ ದೋಸೆ, ಬೋಂಡ, ವಡೆಗಳಿಗೆ ಈರುಳ್ಳಿ ಬಳಕೆ ಕಡಿಮೆಯಾಗಿದೆ.

ದೇಶಕ್ಕೆ ಅವಶ್ಯವಿರುವ ಶೇ. 50ರಷ್ಟು ಈರುಳ್ಳಿ ಬೆಳೆಯನ್ನು ಮಹಾರಾಷ್ಟ್ರದಲ್ಲಿಯೇ ಬೆಳೆಯಲಾಗುತ್ತದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ನೆಲಕಚ್ಚಿದೆ. ಪರಿಣಾಮವಾಗಿ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಇದರ ಉಪಯೋಗವೇ ಅರ್ಧದಷ್ಟಕ್ಕೆ ನಿಂತಿದೆ.

Leave a Reply

Your email address will not be published. Required fields are marked *

You May Also Like

ಅಭಿಮಾನಕ್ಕಾಗಿ ನನ್ನ ಕಣ್ಣಾಲೆಗಳು ತುಂಬಿಕೊಂಡ ಕ್ಷಣ ಅದು..

ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಬಗೆಗೆ ನೀವೆಲ್ಲ ತೋರಿಸುತ್ತಿರುವ ಅಕ್ಕರೆ, ಅಭಿಮಾನ ನಮ್ಮ ಉತ್ಸಾಹ ಹೆಚ್ಚಿಸಿದೆ. ಇನ್ನು ಕೆಲ ದಿನಗಳಲ್ಲಿಯೇ ಪತ್ರಿಕೆಯನ್ನು ಆರಂಭಿಸುವ ನಮ್ಮ ಕನಸಿಗೆ ನಿಮ್ಮ ಅಭಿಮಾನ ಬಣ್ಣ ತುಂಬಿದೆ

ಬೆಳಗಾವಿಯಲ್ಲಿ ಕೊಳಚೆ ಕಲ್ಲಿನ ರಾಜಕಾರಣದ ರಹಸ್ಯೆವೇನು?: ಹೆಬ್ಬಾಳ್ಕರ್-ಜಾರಕಿಹೊಳಿ ಚಾಲೇಂಜಿಂಗ್ ಪಾಲಿಟಿಕ್ಸ್..!

ಬೆಳಗಾವಿ: ಕುಂದಾ ನಗರಿಯಲ್ಲೀಗ ಕೊಳಚೆ ಕಲ್ಲಿನ ರಾಜಕಾರಣದ್ದೆ ಸುದ್ದಿ ಸದ್ದು ಮಾಡ್ತಿದೆ. ಮತ್ತೆ ಸಚಿವ ರಮೇಶ್…

ಕಾಲುವೆಗೆ ಉರುಳಿ ಬಿದ್ದ ಕಾರು: ಇಬ್ಬರು ಸ್ಥಳದಲ್ಲೆ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ನಡೆದಿದೆ.