ಮುಂಬಯಿ : ದಿಲ್ ವಾಲೆ ದುಲ್ಹನಿಯ ಲೇ ಜಾಯೇಂಗೆ ಚಿತ್ರದ ಬಗ್ಗೆ ಮಾತನಾಡಿದರೆ ಸಾಕು, ಪ್ರತಿಯೊಬ್ಬರ ಹೃದಯದಲ್ಲಿನ ಪ್ರೀತಿ ಮತ್ತೆ ಜನ್ಮ ಪಡೆಯುತ್ತದೆ. ಲವ್ ಬಾಯ್ ಆಗಿ ಶಾರೂಖ್ ಖಾನ್ ಅವರ ನಟನೆ, ಕಾಜೋಲ್ ಅವರ ಪ್ರೇಮ ಪ್ರಸಂಗ, ಚಿತ್ರದ ಹಾಡುಗುಳು ಜನರ ಎದೆಯಲ್ಲಿ ಇನ್ನೂ ಹಸಿರ…ಹಸಿರ…ಹಸಿರ….

ಸದ್ಯ ಬಾಲಿವುಡನ್ ನ ಈ ಚಿತ್ರಕ್ಕೆ 25 ವರ್ಷಗಳು ತುಂಬಿವೆ. ಶಾರೂಖ್ ಖಾನ್ ಮತ್ತು ಕಾಜೋಲ್ ಅವರು ನಟಿಸಿರುವ ಈ ಚಿತ್ರ ಇಂದಿಗೂ ಎರ್ ಗ್ರೀನ್ ಆಗಿದೆ. ಸದ್ಯ ಚಿತ್ರ ತಂಡ 25ರ ಸಂಭ್ರಮಾಣಚರಣೆ ಆಚರಿಸುತ್ತಿದೆ.

ಆರಂಭದಲ್ಲಿ ಶಾರೂಖ್ ಖಾನ್ ಅವರು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿರಲಿಲ್ಲ. ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಮದುವೆಯಾಗುವ ಹುಡುಗಿಯನ್ನು ಓಡಿಸಿಕೊಂಡು ಹೋಗುವುದು ಕೂಡ ನೆಗೆಟಿವ್ ಆಗುತ್ತದೆ ಎಂದು ಹೇಳಿದ್ದರಂತೆ. ಆ ನಂತರ ನಿರ್ದೇಶಕರು ಅವರನ್ನು ಒಪ್ಪಿಸಿ ಚಿತ್ರಕ್ಕೆ ಸಿದ್ಧಗೊಳಿಸಿದ್ದರು.

ಆ ನಂತರ ಶಾರೂಖ್ ಅವರು ಈ ಚಿತ್ರದ ಮೂಲಕ ದೊಡ್ಡ ಸ್ಟಾರ್ ಆಗಿ ಮಿಂಚಿದರು. ಕಾಜೋಲ್ ಕೂಡ ಈ ಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದ್ದರು. ಟಾಪ್ ನಟಿಯರ ಪಟ್ಟಕ್ಕೇರಿದರು.

ಇಂದಿಗೂ ಚಿತ್ರದ ಹಾಡುಗಳು ಜನರ ಮನದಲ್ಲಿ ಹಚ್ಚ ಹಸಿರಾಗಿವೆ. ಸಿನಿಮಾದಲ್ಲಿ ಶಾರೂಖ್ ಹೇಳುವ ಡೈಲಾಗ್ ಗಳು ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಸದ್ದು ಮಾಡುತ್ತಿವೆ. ಇತ್ತೀಚೆಗೆ ಈ ಚಿತ್ರದ ಕುರಿತು ಮಾತನಾಡಿದ್ದ ಕಾಜೋಲ್, ಕಥೆ ಕೇಳಿದಾಗ ಸಿಮ್ರನ್ ಬೋರಿಂಗ್ ಹುಡುಗಿ ಅನ್ನಿಸಿದಳು. ನಂತರ ಪ್ರತಿಯೊಬ್ಬರಲ್ಲಿಯೂ ಒಬ್ಬ ಸಿಮ್ರನ್ ಇರುತ್ತಾಳೆ. ಸಿಮ್ರನ್ ಹೃದಯದ ಮಾತು ಕೇಳುವ ಹುಡಗಿಯಾಗಿದ್ದು, ಸದಾ ಸತ್ಯ ಹೇಳುತ್ತಿದ್ದರಿಂದ ಆಕೆ ನನಗೆ ಇಷ್ಟವಾದಳು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಕಿ ಬಾಯ್ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ ತೆಲುಗು ಚಾನಲ್!

ಕೆಜಿಎಫ್ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದ ತೆಲುಗು ಟಿವಿ ಚಾನಲ್ ಒಂದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿತ್ರ ತಂಡ ತೀರ್ಮಾನಿಸಿದೆ.

ಡ್ರಗ್ಸ್ ಮಾಫಿಯಾ – ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ!

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಹಾಗೂ ಕಿರುತೆರೆ ನಟಿ ಅನುಶ್ರೀ ಅವರು ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟಿ ಸಂಜನಾ!

ಬೆಂಗಳೂರು : ಡ್ರಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟಿ ಸಂಜನಾ ಅವರು, ಜಾಮೀನಿಗಾಗಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಮರ್ಯಾದೆಗೇಡು ಹತ್ಯೆ: ಮರ್ಡರ್ ಸಿನಿಮಾ ಪೋಸ್ಟರ್ ರಿಲೀಜ್ ಮಾಡಿದ RGV

ಮರ್ಯಾದೆಗೇಡು ಹತ್ಯೆ ಕುರಿತ ಸಿನಿಮಾ ಮರ್ಡರ್ ನ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ.…