ಬೆಂಗಳೂರು: ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.

ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದಾರೆ. ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ಇಂದು ಚಿರು ದಾಖಲಾಗಿದ್ದರು. ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದ್ದ ಚಿರಂಜೀವಿ ಸರ್ಜಾ, ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಚಿರಂಜೀವಿ ಸರ್ಜಾ, 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ನಟನೆಯ ಮೂಲಕ ನಟ ಚಿರಂಜೀವಿ ಸರ್ಜಾ ಗುರುತಿಸಿಕೊಂಡಿದ್ದರು. ಕಳೆದ ವರ್ಷವಷ್ಟೆ ಕನ್ನಡ ಚಿತ್ರರಂಗದ ಸುಂದರ್ ರಾಜ್ ಮತ್ತು ಪ್ರಮಿಳಾ ಜೋಶಾಯ್ ಅವರ ಮಗಳನ್ನು ವಿವಾಹವಾಗಿದ್ದರು.

Leave a Reply

Your email address will not be published. Required fields are marked *

You May Also Like

ಕೊಡಗಾನೂರ ವೀರಭದ್ರೇಶ್ವರ ರಥೋತ್ಸವ

ಸಮೀಪದ ಕೊಡಗಾನೂರ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಭಕ್ತರ ಹರ್ಷೊದ್ಘಾರದ ಮಧ್ಯೆ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.

ಭಾರತದಲ್ಲಿ ಕೋವಿಡ್ ಗುಣಮುಖರು: ಈಗ ಹೃದಯ, ಶ್ವಾಸಕೋಸ ಸಮಸ್ಯೆಗಳತ್ತ…

ಕೋವಿಡ್ ನಿಂದ ತೀವ್ರ ಬಾಧಿತರಾಗಿ ಗುಣಮುಖರಾದ ಹಲವರಲ್ಲಿ ಇಂತಹ ಸಮಸ್ಯೆಗಳನ್ನು ವೈದ್ಯರು ಗುರುತಿಸುತ್ತಿದ್ದಾರೆ. ಕೋವಿಡ್ ಪರಿಣಾಮ ಇನ್ ಫ್ಲುಯೆಂಜಾಗಿಂತ ಹೆಚ್ಚಿನ ಕಾಲ ಕಾಡಬಹುದು

ಈಗಿನಿಂದಲೇ ಹೊಸ ಗೆಟಪ್ ನಲ್ಲಿ ಬರಲು ತಯಾರಾಗುತ್ತಿದ್ದಾರೆ ಸುದೀಪ್!

ಲಾಕ್ ಡೌನ್ ಅವಧಿಯಲ್ಲಿ ಫ್ಯಾಂಟಮ್ ಕೆಲಸದಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ತಮ್ಮ ಮುಂದಿನ ಕಮರ್ಷಿಯಲ್ ಆಕ್ಷನ್ ಮೂವಿಗಾಗಿ ಹೊಸ ಗೆಟಪ್ ಪಡೆದಿದ್ದಾರೆ.

ಹಣ ಪಡೆಯುವ ವೇಳೆ ಜೆಸ್ಕಾಂ ಅಧಿಕಾರಿ ಎಸಿಬಿ ಬಲೆಗೆ

ಜೆಸ್ಕಾಂ ಇಲಾಖೆಯ ಎಇಇ ಅಧಿಕಾರಿ ಭಾಸ್ಕರ್ ರೈತನಿಂದ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.