ಬೆಂಗಳೂರು : ಶಿವಣ್ಣ ಅವರೊಂದಿಗೆ ಪ್ರಭುದೇವ್ ಚಂದನವನದಲ್ಲಿ ಸದ್ದು ಮಾಡಲು ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಿವರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಚಿತ್ರವೊಂದು ತಯಾರಾಗುತ್ತಿದ್ದು, ಈ ಚಿತ್ರದಲ್ಲಿ ಪ್ರಭುದೇವ್ ಕೂಡ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಅವರ ಅಭಿನಯದ ಕುರಿತು ಇನ್ನೂ ಅಂತಿಮ ಮಾತು ತಿಳಿದು ಬಂದಿಲ್ಲ. ಚಿತ್ರ ತಂಡ ಮಾತ್ರ ಪ್ರಭುದೇವ್ ಅಭಿನಯಿಸುವುದು ಬಹುತೇಕ ಖಚಿತವಾಗಲಿದೆ ಎಂದು ಹೇಳುತ್ತಿದೆ.

ಯೋಗರಾಜ್ ಭಟ್ ಅವರ ನಿರ್ದೇಶನ ಯಾವಾಗಲೂ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುತ್ತದೆ. ಯೋಗರಾಜ್ ಭಟ್ ಅವರ ನಿರ್ದೇಶನ ಹಾಗೂ ಹಾಡುಗಳಿಗೆ ಮಾರು ಹೋಗದ ಚಿತ್ರ ರಸಿಕರೇ ಇಲ್ಲ ಎಂಬ ಮಾತುಗಳು ಗಾಂಧಿನಗರದಲ್ಲಿ ಈಗಲೂ ಹಸಿಯಾಗಿಯೇ ಉಳಿದಿದೆ. ಸದ್ಯ ಗಾಳಿಪಟ – 2ರಲ್ಲಿ ಕೆಲಸ ಮಾಡುತ್ತಿರುವ ಯೋಗರಾಜ್ ಭಟ್, ಶಿವಣ್ಣ ಅವರಿಗಾಗಿ ಚಿತ್ರ ನಿರ್ಮಿಸುತ್ತಿದ್ದಾರೆ.

ಗಾಳಿಪಟ-2 ಚಿತ್ರೀಕರಣದ ಸಂದರ್ಭದಲ್ಲಿ ಯೋಗರಾಜ್ ಭಟ್ ಅವರು ಪ್ರಭುದೇವ್ ಅವರನ್ನು ಭೇಟಿ ಮಾಡಿದ್ದು ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ಕುರಿತು ಮಾತನಾಡಿದ್ದಾರೆ ಎನ್ನಲಾಗಿದ್ದು, ಕಥೆಯನ್ನು ಕೂಡ ಪ್ರಭುದೇವ್ ಇಷ್ಟಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅಭಿನಯಿಸಲು ಮಾತ್ರ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.

ಇನ್ನೊಂದೆಡೆ ಶಿವಣ್ಣ ಭಜರಂಗಿ – 2ನಲ್ಲಿ ಬ್ಯೂಸಿಯಾಗಿದ್ದಾರೆ. ಅಷ್ಟೆ ಅಲ್ಲದೆ, ಶಿವರಾಜ್ ಕುಮಾರ್ ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳು ಕೂಡ ಇವೆ. ಆದರೆ, ಪ್ರಭುದೇವ ಅವರು ಅಭಿನಯಿಸಲು ಒಪ್ಪಿದ ಮೇಲೆ ಈ ಚಿತ್ರ ನಿರ್ಮಾಣವಾಗಲಿದೆಯೇ? ಅಥವಾ ಕಾಲ್ ಶೀಟ್ ನೋಡಿಕೊಂಡು ಶಿವಣ್ಣ, ಯೋಗರಾಜ್ ಭಟ್ ರೊಂದಿಗೆ ಕೈ ಜೋಡಿಸುತ್ತಾರೆಯೇ? ಕಾಯ್ದು ನೋಡಬೇಕಿದೆ.

Leave a Reply

Your email address will not be published. Required fields are marked *

You May Also Like

ನಟ ಸುಶಾಂತ್ ಆತ್ಮಹತ್ಯೆ – 8 ಜನ ಸೆಲೆಬ್ರಿಟಿಗಳ ಮೇಲೆ ದೂರು ದಾಖಲು!

ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನ ಸೆಲೆಬ್ರಿಟಿಗಳ…

ಚಿರಂಜೀವಿ ಹುಟ್ಟು ಹಬ್ಬಕ್ಕೆ ದುಃಖದ ಸಾಲು ಬರೆದ ಅರ್ಜುನ ಸರ್ಜಾ!

ನಟ ಚಿರಂಜೀವಿ ಸರ್ಜಾ ಅವರ 36ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅವರ ಮಾವ ಹಾಗೂ ನಟ ಅರ್ಜುನ್ ಸರ್ಜಾ ಭಾವನಾತ್ಮಕ ಸಾಲುಗಳನ್ನು ಬರೆದು ಶುಭಾಶಯ ಕೋರಿದ್ದಾರೆ.

ಸಾಯುವ ಸಮಯವನ್ನು ನಟ ಸುಶಾಂತ್ ಮೊದಲೇ ನಿರ್ಧರಿಸಿದ್ದರೆ?

ಬೆಂಗಳೂರು: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಹಲವರ…

ನಾನು ಅಂದೇ ಹೇಳಿದ್ದೆ ಚಿರು ಮತ್ತೆ ಬರುತ್ತಾನೆಂದು – ತಾರಾ!

ಬೆಂಗಳೂರು : ಚಿರಂಜೀವಿ ಸರ್ಜಾಗೆ ಗಂಡು ಮಗು ಜನಿಸಿದ್ದಕ್ಕೆ ಹಿರಿಯ ನಟಿ ತಾರಾ ಸಂತಸ ವ್ಯಕ್ತಪಡಿಸಿದ್ದಾರೆ.