ಗದಗ: ಪೂಜ್ಯಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳವರ ಆದೇಶ ಮೇರೆಗೆ ಜಿಲ್ಲಾ ವಾಲ್ಮೀಕಿ ಮತ್ತು ನಾಯಕ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೆಳದಡಿ ಅವರ ಸೂಚನೆಯಂತೆ ಅನಿಲ್ ಕುಮಾರ್ ಸಿದ್ದಮ್ಮನಹಳ್ಳಿ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಕಾಂತ ಪೂಜಾರ, ರಾಘು ಬಸಾಪೂರ,ಅರುಣ ಬೆಳದಡಿ, ರಾಘು ಗುಜ್ಜಲ, ರಮೇಶ ಹೊಟ್ಟಿ, ಅಶೋಕ ತಳವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.