ಅಬುಧಾಬಿ : ಕೋಲ್ಕತ್ತಾ ತಂಡದ ನಾಯಕತ್ವ ಸ್ಥಾನದಿಂದ ದಿನೇಶ್ ಕಾರ್ತಿಕ್ ಹಿಂದೆ ಸರಿದಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ನ ಪ್ರಾರಂಭದಿಂದ ತಂಡವನ್ನು ಮುನ್ನಡೆಸಿರುವ ಕಾರ್ತಿಕ್, ಮಧ್ಯಂತರ ಅವಧಿಯಲ್ಲಿ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡದ ನಾಯಕರಾಗಿರುವ ಇಯಾನ್ ಮಾರ್ಗನ್ ಇನ್ನು ಮುಂದೆ ಕೋಲ್ಕತ್ತಾ ತಂಡವನ್ನು ಮುನ್ನಡೆಸಲಿದ್ದಾರೆ.

ನಾಯಕನಾಗಿ ತಂಡ ಮುನ್ನಡೆಸುವಲ್ಲಿ ಕಾರ್ತಿಕ್ ಎಡವಿದ್ದರು. ತಂಡಕ್ಕೆ ಬೇಕಾದಾಗ ಬ್ಯಾಟ್ ಬೀಸುವಲ್ಲಿ ವಿಫಲರಾಗಿದ್ದರು. ಈ ಕಾರಣದಿಂದ ಮಾರ್ಗನ್ ಅವರಿಗೆ ನಾಯಕ್ವವನ್ನು ಬಿಟ್ಟುಕೊಡುವಂತೆ ಕೆಕೆಆರ್ ಅಭಿಮಾನಿಗಳು ಒತ್ತಾಯಿಸಿದ್ದರು. ಆದ್ದರಿಂದ ನಾಯಕ್ವ ಬಿಟ್ಟುಕೊಟ್ಟು ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಲು ಕಾರ್ತಿಕ್ ತೀರ್ಮಾನ ಮಾಡಿದ್ದಾರೆ.

ಇಂದು ಮುಂಬಯಿ ತಂಡವನ್ನು ಎದರಿಸಲಿರುವ ಕೆಕೆಆರ್ ತಂಡದ ನಾಯಕತ್ವವನ್ನು ಮಾರ್ಗನ್ ವಹಿಸಲಿದ್ದಾರೆ. ದಿನೇಶ್, 2018ರಿಂದ ತಂಡದ ನಾಯಕರಾಗಿದ್ದರು. ಸುಮಾರು 37 ಪಂದ್ಯಗಳಲ್ಲಿ ಕೋಲ್ಕತ್ತಾ ತಂಡ ಮುನ್ನಡೆಸಿದ್ದರು. ಅಲ್ಲದೇ, ಈ ಬಾರಿಯ ಐಪಿಎಲ್ ನಲ್ಲಿ ಏಳು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ನಾಲ್ಕರಲ್ಲಿ ತಂಡ ಜಯ ಗಳಿಸಿದೆ. ನಾಲ್ಕರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *

You May Also Like

ಏಕಾಏಕಿ ಇಂಗ್ಲೆಂಡ್ ಆಟಗಾರರ ತೂಕ ಇಳಿಕೆ!

ಭಾರತದ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ತಂಡ ಸೋತು ಹೈರಾಣಾಗಿರುವುದು ಕೇವಲ ಕ್ರೀಡೆಯಲ್ಲಿ ಅಷ್ಟೇ ಅಲ್ಲ ಇಂಗ್ಲೆಂಡ್ ಕ್ರೀಡಾಪಟುಗಳೂ ಹೈರಾಣಾಗಿದ್ದಾರೆ.

ಕೋಲ್ಕತ್ತಾ, ಬೆಂಗಳೂರು ತಂಡಗಳ ಹಿಂದಿನ ಇತಿಹಾಸ ಹೇಗಿದೆ?

ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ಲೀಗ್ ನಲ್ಲಿ ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಬ್ಯಾಟ್ಸಮನ್ ಗಳ ನೆಚ್ಚಿನ ಮೈದಾನದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

ಮೊದಲ 8 ಬೌಲ್ ಗೆ ತಾಳ್ಮೆ…ಆ ನಂತರ 9 ಬೌಲ್ ಗೆರೆ ದಾಟಿ ಹೋದವು!

ಅಬುಧಾಬಿ : ಭಾನುವಾರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಚೇತರಿಕೆ ನೀಡುವುದರ ಮೂಲಕ ಭರ್ಜರಿ ಆಟ ಪ್ರದರ್ಶಿಸಿದ್ದಾರೆ.

ಜಡೇಜಾಗೆ ಧೋನಿ ಕೊನೆಯ ಓವರ್ ನೀಡಿದ್ದೇಕೆ?

ಶಾರ್ಜಾ : ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಸೋಲು ಕಂಡಿದೆ. ರೋಚಕ ಹಂತಕ್ಕೆ ಬಂದು ತಲುಪಿದ್ದ ಪಂದ್ಯದಲ್ಲಿ ಧೋನಿ ಅವರ ಕೆಟ್ಟ ನಿರ್ಧಾರದಿಂದಾಗಿ ಸೋಲು ಕಾಣುವಂತಾಯಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.