ದುಬೈ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ವೈಫಲ್ಯ ಅನುಭವಿಸಿರುವ ಹಿಂದಿನ ಕಾರಣವನ್ನು ಕಿಂಗ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ.

ಆರಂಭಿಕ ಪಂದ್ಯಗಳಲ್ಲಿ ನನ್ನ ಮೇಲೆ ನಾನೇ ಹೆಚ್ಚು ಒತ್ತಡವನ್ನು ಹಾಕಿಕೊಂಡಿದ್ದೆ. ಹೀಗಾಗಿ ನಾನು ಆರಂಭಿಕ ಪಂದ್ಯಗಳಲ್ಲಿ ಅಷ್ಟೊಂದು ಉತ್ತಮವಾಗಿ ಬ್ಯಾಟಿಂಗ್ ಬೀಸರು ಆಗಲಿಲ್ಲ. ಸದ್ಯ ಒತ್ತಡದಿಂದ ಹೊರ ಬರುವ ಪ್ರಯತ್ನ ಮಾಡಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಅ. 10ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಅವರು 52 ಎಸೆತಗಳನ್ನು ಎದುರಿಸಿ ಅಜೇಯರಾಗಿ ಉಳಿದು 90 ರನ್ ದಾಖಲಿಸಿದ್ದರು. ಪರಿಣಾಮವಾಗಿ ಪ್ರಾರಂಭದಲ್ಲಿ ರನ್ ಕದಿಯಲು ಪರದಾಡಿದ್ದ ಬೆಂಗಳೂರು ತಂಡ 169 ರನ್ ಗಳನ್ನು ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಧೋನಿ ನೇತೃತ್ವದ ತಂಡ 132 ರನ್ ಗಳನ್ನು ಗಳಿಸಲು ಮಾತ್ರ ಯಶಸ್ವಿಯಾಯಿತು. ಕಿಂಗ್ ಕೊಹ್ಲಿ ಅವರ ಬ್ಯಾಟಿಂಗ್ ಹಾಗೂ ಅವರ ಹುಡುಗರ ಉತ್ತಮ ಬೌಲಿಂಗ್ ನಿಂದಾಗಿ ಚಾಲೆಂಜರ್ಸ್ ಗೆದ್ದು ಬೀಗಿದೆ. ಹೀಗಾಗಿ ಕೊಹ್ಲಿಯಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಆರಂಭದ ಪಂದ್ಯಗಳಲ್ಲಿ ಕೊಹ್ಲಿ ಅವರು, ಕ್ರಮವಾಗಿ 14, 1 ಹಾಗೂ 3 ರನ್‌ಗಳನ್ನು ಗಳಿಸಿದ್ದರು. ಆ ನಂತರದ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಅವರು, ನಾಟೌಟ್ 72, 43 ಹಾಗೂ ನಟೌಟ್ 90 ರನ್ ಗಳಿಸಿದ್ದಾರೆ. ಈಗಾಗಲೇ ಆಡಿದ ಒಟ್ಟು 6 ಪಂದ್ಯಗಳಿಂದ ಕೊಹ್ಲಿ 223 ರನ್ ಗಳನ್ನು ಕಲೆ ಹಾಕಿದ್ದಾರೆ. ಅಲ್ಲದೇ, ಬೆಂಗಳೂರು ಪರ ಗರಿಷ್ಠ ರನ್ ಬಾರಿಸಿದ ಆಟಗಾರ ಕೂಡ ಆಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ 211 ರನ್ ಗಳನ್ನು ಗಳಿಸಿರುವ ದೇವದತ್ ಪಡಿಕ್ಕಲ್ ಇದ್ದಾರೆ.

ಪಂದ್ಯ ಮುಕ್ತಾಯದ ನಂತರ ಮಾತನಾಡಿದ ಅವರು, ನಾವು ಸಂಪೂರ್ಣ ಪ್ರದರ್ಶನ ತೋರಿದ ಪಂದ್ಯಗಳಲ್ಲಿ ಇದು ಒಂದು. ಮೊದಲು ಬ್ಯಾಟಿಂಗ್‌ ಮಾಡಲು ಉದ್ಧೇಶಿಸಿದ್ದ ನಮಗೆ ಅಪಾಯ ಸಂದರ್ಭ ಎದುರಾಗಿತ್ತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಐಸಿಸಿಯು ಟೆಸ್ಟ್ ನೂತನ ಪಟ್ಟಿ ಪ್ರಕಟ: ಪಾರಮ್ಯ ಮೆರೆದ ಆಸ್ಟ್ರೇಲಿಯಾ

ಐಸಿಸಿಯು ಟೆಸ್ಟ್ ರ್ಯಾಂಕಿಂಗ್ ನೂತನ ಪಟ್ಟಿ ಪ್ರಕಟಿಸಿದ್ದು, ಆಸ್ಟ್ರೇಲಿಯಾ ತನ್ನ ಪಾರಮ್ಯ ಮೆರೆದಿದೆ. ಬ್ಯಾಟಿಂಗ್ ರ್ಯಾಂಡಕಿಂಗ್‌ನಲ್ಲಿ ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲಿದ್ದ ಅದೇ 2ನೇ ಸ್ಥಾನದಲ್ಲಿದ್ದರೆ, ಬೌಲಿಂಗ್ ರ್ಯಾಂೊಕಿಂಗ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಎಡಗೈ ಆಟಗಾರರು ನಿಜವಾಗಿಯೂ ಪ್ರತಿಭಾವಂತರೆ?

ಭಾರತ ತಂಡದ ಪ್ರತಿಭಾವಂತೆ ಹಾಗೂ ಸ್ಟೈಲಿಷ್ಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶನಿವಾರ ತಮ್ಮ 24ನೇ ಹುಟ್ಟು ಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಅವರಿಗೆ ಖ್ಯಾತ ಆಟಗಾರರು ಹಾಗೂ ಅಭಿಮಾನಿ

ಮಹೇಶ್ ಬಾಬು ಡೈಲಾಗ್ ಟಿಕ್ ಮಾಡಿದ ವಾರ್ನರ್

ಆಸ್ಟ್ರೇಲಿಯಾ ಕ್ರಿಕೇಟಿಗರೊಬ್ಬರು ಇಂಡಿಯಾದ ಚಿತ್ರನಟರೊಬ್ಬರ ಡೈಲಾಗ್ ನ್ನು ಟಿಕ್ ಟಾಕ್ ಮಾಟಿದ್ದು ಇದೀಗ ವೈರಲ್ ಆಗಿದೆ.

ಪ್ಲೇ ಆಫ್ ಕನಸು ಜೀವಂತವಾಗಿಸಿಕೊಂಡ ಪಂಜಾಬ್!

ಅಬುಧಾಬಿ : ದೆಹಲಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಐದು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.