ಉತ್ತರಪ್ರಭ ಸುದ್ದಿ

ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಆಯೋಜಿಸಲಾಗಿದೆ. ಟೋರ್ನಿಯು ಗದಗ ಶಹರದ ಮುಳಗುಂದ ರಸ್ತೆಯ ಕನಕ ಭವನ ಹತ್ತಿರವಿರು ಫುಟ್‌ಬಾಲ್ ಮೈದಾನದಲ್ಲಿ ಆಯೋಜಿಸಲಾಗಿದ್ದು ದಿನಾಂಕ 23-7-2022 ಶನಿವಾರ ಸಾಯಂಕಾಲ 5-30 ಘಂಟೆಗೆ ಉದ್ಘಾಟನೆಗೊಳ್ಳುವುದು.

ಮಾಜಿ ಅಂತರಾಷ್ಟ್ರೀಯ ಫುಟ್‌ಬಾಲ್ ಆಟಗಾರರು ಹಾಗೂ ಕೆ.ಎಸ್.ಎಫ್.ಎ. ಬೆಂಗಳೂರು ಇವರ ಉಪಕಾರ್ಯದರ್ಶಿಗಳಾದ ಶ್ರೀ ಅಸ್ಲಂಖಾನ ಇವರು ಟೋರ್ನಿಯನ್ನು ಉದ್ಘಾಟಿಸುರುವರು. ಶಾಸಕ ಎಚ್. ಕೆ. ಪಾಟೀಲ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ. ಎಸ್. ಪಾಟೀಲ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ ಗದಗ, ಮಾಜಿ ಶಾಸಕ ಡಿ. ಆರ್. ಪಾಟೀಲ, ಮಾಜಿ ಶಾಸಕ ಜಿ. ಎಸ್. ಗಡ್ಡದೇವರಮಠ (ಶಿರಹಟ್ಟಿ), ಮಾಜಿ ಶಾಸಕ ಎಸ್. ಎಸ್. ಪಾಟೀಲ (ಮುಂಡರಗಿ), ಮಾಜಿ ಸಚಿವ ಬಿ. ಆರ್. ಯಾವಗಲ್ (ನರಗುಂದ), ಮಾಜಿ ಶಾಸಕ ಎಸ್. ಎನ್. ಪಾಟೀಲ (ಶಿರಹಟ್ಟಿ), ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ (ಶಿರಹಟ್ಟಿ), ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ (ಗದಗ) ಇವರುಗಳು ಆಗಮಿಸಲಿದ್ದು.

ಅತಿಥಿಗಳಾಗಿ ಎಲ್. ಡಿ. ಚಂದಾವರಿ ವಿರೋಧಪಕ್ಷದ ನಾಯಕರು ಗದಗ-ಬೆಟಗೇರಿ ನಗರಸಭೆ ಗದಗ, ಬರಕತಅಲಿ ಮುಲ್ಲಾ ವಿರೋಧಪಕ್ಷದ ಉಪನಾಯಕರು, ಗದಗ-ಬೆಟಗೇರಿ ನಗರಸಭೆ ಗದಗ, ಗುರಣ್ಣ ಬಳಗಾನೂರ ಅಧ್ಯಕ್ಷರು ಗದಗ-ಬೆಟಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಪ್ರಭು ಬುರಬುರೆ ಮಾಜಿ ಅಧ್ಯಕ್ಷರು ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಇವರುಗಳು ಉಪಸ್ಥಿತರಿರುವರು.

Leave a Reply

Your email address will not be published. Required fields are marked *

You May Also Like

ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಒತ್ತಾಯ: ಲಂಬಾಣಿ ಸಮಾಜದ ಅಪ್ರಾಪ್ತ ಬಾಲಕಿ ಹತ್ಯೆಗೈದ ಆರೋಪಿಗಳನ್ನು ಗಲ್ಲಿಗೇರಿಸಲು ಆಗ್ರಹ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುರಗಲವಾಡಿ ಗ್ರಾಮದಲ್ಲಿ ಗುಳೆಹೋದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಅತ್ಯಂತ ಖಂಡನಾರ್ಹ. ಲಂಬಾಣಿ ಸಮಾಜದವರು ಬಹಳಷ್ಟು ಸ್ವಾಭಿಮಾನಿಗಳು. ಆದರೆ ತುತ್ತಿನ ಚೀಲ ತುಂಬಿಕೊಳ್ಳಲು ಗುಳೆಹೋಗುವುದು ನಮಗೆ ಅನಿವಾರ್ಯವಾಗಿದೆ. ಆದರೆ ಗುಳೆಹೋದಂತಹ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ದುಷ್ಟರನ್ನು ಗಲ್ಲಿಗೇರಿಸಬೇಕು ಎಂದು ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಆಗ್ರಹಿಸಿದರು.

ಯುವಕರೇ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ..! ಪೊಲೀಸರ ನಿಗಾ ನಿಮ್ಮ ಮೇಲಿದೆ..!!

ಉತ್ತರಪ್ರಭಗದಗ: ಶಹರ ಪೊಲೀಸರು ಶ್ರೀರಾಮ ಸೇನೆ ಕಾರ್ಯ ಕರ್ತನನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಸ್ಥಳದಲ್ಲಿ…

ಅತಿವೃಷ್ಟಿಯಿಂದ ರಾಜ್ಯದಲ್ಲಾದ ನಷ್ಟ ಎಷ್ಟು ಗೊತ್ತಾ..?

ಮೈಸೂರು : ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ ರೂ. 9,952 ಕೋಟಿಯಷ್ಟು ನಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಆಗಸ್ಟ್ ನಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ

ಕೊರೊನಾ ತಡೆಯಲು ಲಾಕ್ ಡೌನ್ ಸಂದರ್ಭದಲ್ಲಿ ವಿಮಾನ ಸಂಚಾರವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಈ ನಡುವೆ ದೇಶೀಯ ವಿಮಾನ ಯಾನಕ್ಕೆ ಅವಕಾಶವನ್ನೂ ನೀಡಿದೆ. ಆದರೆ, ಆಗಸ್ಟ್ ತಿಂಗಳಿನಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅವಕಾಶವನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.