ಬೆಂಗಳೂರು: 2020ನೇ ಸಾಲಿನ ಮುಂಗಾರು ಋತುವಿನ ಸೆಪ್ಟೆಂಬರ್ ತಿಂಗಳಿನಲ್ಲಿ ಬಿದ್ದಿರುವ ಭಾರಿ ಮಳೆಯಿಂದ ಉಂಟಾಗಿರುವ ಅತಿವೃಷ್ಠಿ, ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಮನೆ ಹಾನಿ, ಬೆಳೆಹಾನಿ ಹಾಗೂ ಮೂಲಭೂತ ಸೌಕರ್ಯಗಳು ಹಾನಿಯಾಗಿರುವ ಹಿನ್ನಲೆಯಲ್ಲಿ ರಾಜ್ಯದ 16 ಜಿಲ್ಲೆಗಳ 43 ತಾಲೂಕುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅತಿವೃಷ್ಠಿ, ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ.
ಅತೀವೃಷ್ಟಿ ಪ್ರವಾಹ ಪೀಡಿತ ತಾಲೂಕುಗಳು
ಗಜೇಂದ್ರಗಡ, ಗದಗ, ಲಕ್ಷ್ಮೇಶ್ವರ, ಮಸ್ಕಿ, ಶ್ರೀವಾರ, ಕಡೂರು, ಅಜ್ಜಂಪುರ, ಚಿಂಚೋಳಿ, ಯಡ್ರಾವಿ, ನಂಜನಗೂಡು, ಹೆಚ್ ಡಿ ಕೋಟೆ, ಸರಗೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹಳಿಯಾಳ, ದಾಂಡೇಲಿ, ಸಂಡೂರು, ಕೂಡ್ಲಗಿ, ಬಳ್ಳಾರಿ, ಮಧುಗಿರಿ, ಕನಕಗಿರಿ, ಕುಕನೂರು, ಕಮಲಾನಗರ, ಚಿಟಗುಪ್ಪ, ಹುಲಸೂರ, ಹೊಳೆನರಸೀಪುರ, ಅಣ್ಣಿಗೇರಿ, ಬ್ಯಾಡಗಿ, ಸವಣೂರು, ವಿಜಯಪುರ, ಬಸವನಬಾಗೇವಾಡಿ, ತಾಳಿಕೋಟೆ, ಇಂಡಿ, ಸಿಂಧಗಿ, ದೇವರ ಹಿಪ್ಪರಗಿ, ಚನ್ನಗಿರಿ, ಜಗಳೂರು.