ಮುಂಬಯಿ: ಮಾದಕ ನಟಿ ಬಿಪಾಶಾ ಬಸು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಬಹುತೇಕ ಚಿತ್ರಗಳಲ್ಲಿ ಹಾಟ್ ಆಂಡ್ ಬೋಲ್ಡ್ ಪಾತ್ರಗಳಲ್ಲಿಯೇ ನಟಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ಆದರೆ, ಈ ನಟಿ ಎಷ್ಟೇ ಮಾದಕವಾಗಿದ್ದರೂ ನೇರ ಹಾಗೂ ನಿಷ್ಠುರ. ಅವರಿಗೆ ಚಿತ್ರಗಳಲ್ಲಿ ಅವಕಾಶ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಅವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ಬಿಪಾಶಾ ಅವರ ಬಳಿ ಖ್ಯಾತ ನಿರ್ಮಾಪಕರೊಬ್ಬರು ಫ್ಲರ್ಟ್ ಮಾಡಿದ್ದ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಬಿಪಾಶಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕೆಲವೇ ದಿನಗಳಲ್ಲಿ ನಿರ್ಮಾಪಕರೊಬ್ಬರು ಇವರ ಬೆನ್ನು ಬಿದ್ದಿದ್ದರಂತೆ. ಆದರೆ, ಅವರಿಗೆ ತಕ್ಕ ಪಾಠವನ್ನು ಕೂಡ ಬಿಪಾಶಾ ನೀಡಿದ್ದರು ಎಂಬುವುದನ್ನು ತಿಳಿಸಿದ್ದಾರೆ.

ಈ ನಿರ್ಮಾಪಕನನ್ನು ಭೇಟಿ ಮಾಡಿದ್ದ ಬಿಪಾಶಾ, ಸಿನಿಮಾವೊಂದಕ್ಕೆ ಸಹಿ ಮಾಡಿ ಹಣ ಪಡೆದು ಮನೆಗೆ ತೆರಳಿದ್ದರಂತೆ. ಮನೆಗೆ ತಲುಪುತ್ತಲೇ ಮೊಬೈಲ್‌ಗೆ ಸಂದೇಶ ಕಳುಹಿಸಿದ ಆ ನಿರ್ಮಾಪಕ, ನಿನ್ನ ನಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರಂತೆ.

ಇದಕ್ಕೆ ಗಾಬರಿಯಾಗಿದ್ದ ಬಿಪಾಶಾ ಅವರು ಇದನ್ನು ತಮ್ಮ ಆಪ್ತ ಕಾರ್ಯದರ್ಶಿಯ ಬಳಿ ಹೇಳಿಕೊಂಡಿದ್ದರಂತೆ. ಆದರೆ, ನಿರ್ಮಾಪಕ ಮಾತ್ರ ಮತ್ತೆ ಮತ್ತೆ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾನೆ. ಆಗ ಬಿಪಾಶಾ ಇನ್ನಷ್ಟು ಗಾಬರಿಯಾದರಂತೆ.

ಬಿಪಾಶಾ ತಮ್ಮ ಗೆಳೆಯರೊಬ್ಬರಿಗೆ ನಿರ್ಮಾಪಕ ಮಾಡಿದ್ದರ ಬಗ್ಗೆ ಬೈದು ಸಂದೇಶ ಕಳುಹಿಸುತ್ತಿರುವಾಗ, ಅದೇ ಸಂದೇಶ ತಪ್ಪಿ ಆ ನಿರ್ಮಾಪಕರಿಗೂ ಹೋಗಿತ್ತಂತೆ. ಆ ನಂತರ ಆ ನಿರ್ಮಾಪಕ ಬಿಪಾಶಾಗೆ ಸಂದೇಶ ಕಳುಹಿಸುವುದನ್ನು ಬಿಟ್ಟುಬಿಟ್ಟರಂತೆ. ಈ ಕಹಿ ಘಟನೆಯನ್ನು ನಟಿ ಈಗ ಬಿಪಾಶಾ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ!

ಮಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಯಾಗಿದೆ.

ಗೋಲ್ಡನ್ ಜುಬಲಿ ಸಂಭ್ರಮದಲ್ಲಿ ಈಶ್ವರಿ ಸಂಸ್ಥೆ

ಈಶ್ವರಿ ಸಂಸ್ಥೆಯನ್ನು ಕನ್ನಡ ಸಿನಿಪ್ರೇಮಿಗಳು ಮರೆಯುವ ಹಾಗಿಲ್ಲ. ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅಂತಹ ಮಹಾನ್ ಕಲಾವಿದರನ್ನು ಕನ್ನಡ ಸಿನಿಮಾಗೆ ಪರಿಚಯಿಸಿದ ಕೀರ್ತಿ ಈಶ್ವರಿ ಸಂಸ್ಥೆಯದ್ದು. ಅಂತಹ ಈಶ್ವರಿ ಸಂಸ್ಥೆ ಇದೀಗ ಗೋಲ್ಡನ್ ಜುಬಲಿ ಸಂಭ್ರಮದಲ್ಲಿದೆ.

ಸಹೃದಯಿ ಗಾಯನದ ದೈತ್ಯ ಪ್ರಭೆ: ಎಸ್.ಪಿ.ಬಿ.‌

ನಟ, ಗಾಯಕ, ನಿರ್ಣಾಯಕ ಹೀಗೆ ಹತ್ತಾರು ವಿಭಿನ್ನ ರೀತಿಯಲ್ಲಿ ಪರದೆ ಮೇಲೆ ಮೂಡುತ್ತಿದ್ದ ಎಸ್.ಪಿ. ಅತಿ ಸೂಕ್ಷ್ಮ ಜೀವಿ. ಸಾವಿರಾರು ಹಾಡುಗಳನ್ನು ನೂರಾರು ಗಾಯಕರು ಹಾಡಿ ಕೀರ್ತಿ ಗಳಿಸಿದ್ದಾರೆ. ಆದರೆ ಎಸ್.ಪಿ. ತರಹ ಕಲೆಯ ವಿವಿಧ ಮಗ್ಗುಲುಗಳನ್ನು ಅರ್ಥ ಮಾಡಿಕೊಂಡವರು ವಿರಳ. ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮೂಡಿ ಬಂದ ಜನಪ್ರಿಯ ಶೋ.

ಹಾಡು ನಿಲ್ಲಿಸಿದ ಸಾವಿರಾರು ಹಾಡುಗಳ ಸರದಾರ ಎಸ್ಪಿಬಿ

ಎದೆ ತುಂಬಿ ಹಾಡುವ ಮೂಲಕ ಜನರ ಮನಗೆದ್ದು ಲಕ್ಷಾಂತರ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಎಸ್ಪಿಬಿ ಹಾಡು ಯಾರಿಗೆ ಇಷ್ಟವಿಲ್ಲ ಹೇಳಿ. ಆ ಹೆಸರಲ್ಲಿಯೇ ಒಂದು ಕಂಠವಿದೆ, ರೋಮಾಂಚನವಿದೆ. ಆಕರ್ಶಣೆ ಇದೆ. ಆದರೆ ಇಂದು ತೀವ್ರ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎನ್ನುವುದು ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.