ಮುಂಬಯಿ: ಮಾದಕ ನಟಿ ಬಿಪಾಶಾ ಬಸು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಬಹುತೇಕ ಚಿತ್ರಗಳಲ್ಲಿ ಹಾಟ್ ಆಂಡ್ ಬೋಲ್ಡ್ ಪಾತ್ರಗಳಲ್ಲಿಯೇ ನಟಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ಆದರೆ, ಈ ನಟಿ ಎಷ್ಟೇ ಮಾದಕವಾಗಿದ್ದರೂ ನೇರ ಹಾಗೂ ನಿಷ್ಠುರ. ಅವರಿಗೆ ಚಿತ್ರಗಳಲ್ಲಿ ಅವಕಾಶ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಅವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ಬಿಪಾಶಾ ಅವರ ಬಳಿ ಖ್ಯಾತ ನಿರ್ಮಾಪಕರೊಬ್ಬರು ಫ್ಲರ್ಟ್ ಮಾಡಿದ್ದ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಬಿಪಾಶಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕೆಲವೇ ದಿನಗಳಲ್ಲಿ ನಿರ್ಮಾಪಕರೊಬ್ಬರು ಇವರ ಬೆನ್ನು ಬಿದ್ದಿದ್ದರಂತೆ. ಆದರೆ, ಅವರಿಗೆ ತಕ್ಕ ಪಾಠವನ್ನು ಕೂಡ ಬಿಪಾಶಾ ನೀಡಿದ್ದರು ಎಂಬುವುದನ್ನು ತಿಳಿಸಿದ್ದಾರೆ.

ಈ ನಿರ್ಮಾಪಕನನ್ನು ಭೇಟಿ ಮಾಡಿದ್ದ ಬಿಪಾಶಾ, ಸಿನಿಮಾವೊಂದಕ್ಕೆ ಸಹಿ ಮಾಡಿ ಹಣ ಪಡೆದು ಮನೆಗೆ ತೆರಳಿದ್ದರಂತೆ. ಮನೆಗೆ ತಲುಪುತ್ತಲೇ ಮೊಬೈಲ್‌ಗೆ ಸಂದೇಶ ಕಳುಹಿಸಿದ ಆ ನಿರ್ಮಾಪಕ, ನಿನ್ನ ನಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರಂತೆ.

ಇದಕ್ಕೆ ಗಾಬರಿಯಾಗಿದ್ದ ಬಿಪಾಶಾ ಅವರು ಇದನ್ನು ತಮ್ಮ ಆಪ್ತ ಕಾರ್ಯದರ್ಶಿಯ ಬಳಿ ಹೇಳಿಕೊಂಡಿದ್ದರಂತೆ. ಆದರೆ, ನಿರ್ಮಾಪಕ ಮಾತ್ರ ಮತ್ತೆ ಮತ್ತೆ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾನೆ. ಆಗ ಬಿಪಾಶಾ ಇನ್ನಷ್ಟು ಗಾಬರಿಯಾದರಂತೆ.

ಬಿಪಾಶಾ ತಮ್ಮ ಗೆಳೆಯರೊಬ್ಬರಿಗೆ ನಿರ್ಮಾಪಕ ಮಾಡಿದ್ದರ ಬಗ್ಗೆ ಬೈದು ಸಂದೇಶ ಕಳುಹಿಸುತ್ತಿರುವಾಗ, ಅದೇ ಸಂದೇಶ ತಪ್ಪಿ ಆ ನಿರ್ಮಾಪಕರಿಗೂ ಹೋಗಿತ್ತಂತೆ. ಆ ನಂತರ ಆ ನಿರ್ಮಾಪಕ ಬಿಪಾಶಾಗೆ ಸಂದೇಶ ಕಳುಹಿಸುವುದನ್ನು ಬಿಟ್ಟುಬಿಟ್ಟರಂತೆ. ಈ ಕಹಿ ಘಟನೆಯನ್ನು ನಟಿ ಈಗ ಬಿಪಾಶಾ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಿನಿಪ್ರಿಯರಿಗೆ ಸಿಹಿ ಸುದ್ದಿ; ಯೂಟ್ಯೂಬ್‌ನಲ್ಲಿ 10 ದಿನಗಳ ಜಾಗತಿಕ ಸಿನಿ ಉತ್ಸವ

ಯೂಟ್ಯೂಬ್ 10 ದಿನಗಳ ಕಾಲ ಸಿನಿ ಉತ್ಸವ ಆಯೋಜಿಸುವ ಮೂಲಕ ಸಿನಿ ಪ್ರೀಯರಿಗೆ ಸಿಹಿ ಸುದ್ದಿ ನೀಡಿರುವ ಜೊತೆಗೆ ಉತ್ಸವದ ಜಾಹಿರಾತಿನಿಂದ ಬಂದ ಲಾಭವನ್ನು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್‌ 19 ಸಾಲಿಡಾರಿಟಿ ರೆಸ್ಪಾನ್ಸ್‌ ಫಂಡ್‌ಗೆ ನೀಡುವುದಾಗಿ ಯೂಟ್ಯೂಬ್‌ ತಿಳಿಸಿದೆ.

ಬಹುಭಾಷೆ ಸಿನಿಮಾದಲ್ಲಿ ಅನ್ಯಗ್ರಹ ಜೀವಿಯ ಪಾತ್ರದಲ್ಲಿ ಸಂದೇಶ್!

ಚಿತ್ರರಂಗದ ಕನಸು ಹೊತ್ತ ಯುವ ನಿರ್ದೇಶಕ ಸಂದೇಶ್ ಇದೀಗ ತನ್ನ ಕನಸಿನ ಬಹುಭಾಷಾ ಸಿನಿಮಾದ ತಯಾರಿಯಲ್ಲಿದ್ದಾರೆ.

ಜಾಲಿ ಮೂಡಲ್ಲಿರುವ ದಿಗಂತ್, ಐಂದ್ರಿತಾ!

ಬೆಂಗಳೂರು : ಚಂದನವನದ ಕ್ಯೂಟ್ ಕಪಲ್ ದೂದ್ ಪೇಡಾ ದಿಗಂತ್ ಮತ್ತು ನಟಿ ಐಂದ್ರಿತಾ ರೇ…

ಕತ್ತಲ ಕೋಣೆ ಕನ್ನಡ ಸಿನಿಮಾಕ್ಕೆ ಭೋಜಪುರಿ ನಿರ್ಮಾಪಕನ ಕಣ್ಣು!

ಕತ್ತಲ ಕೋಣೆ ಕನ್ನಡ ಸಿನಿಮಾ ಮೇಲೆ ಇದೀಗ ಭೋಜಪುರಿ ನಿರ್ಮಾಪಕರು ಕಣ್ಣು ಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾ ಇದಾಗಿದ್ದು 1998ರ ಸತ್ಯ ಘಟನೆ ಆಧಾರಿತ ಚಿತ್ಯರ. ಉಡುಪಿಯ ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿತ್ತು. ಚಿತ್ರದ ನಾಯಕ ನಟ ಕೂಡ ಸಂದೇಶ ಅವರೆ. ಅಂದುಕೊಂಡಂತಾದರೆ ಕನ್ನಡದ ಕತ್ತಲ ಕೋಣೆ ಮರಾಠಿಯಲ್ಲೂ ಸದ್ದು ಮಾಡಲಿದೆ.