ಬೆಂಗಳೂರು: ಚಂದನವದಲ್ಲಿ ಹೊಸಬರ ಸಿನಿಮಾಗಳು ಸಾಕಷ್ಟು ನಿರೀಕ್ಷೆ ಮೂಡಿಸುತ್ತಿವೆ. ಇದರ ಜೊತೆಗೆ, ಸಿನಿಮಾಗಳಲ್ಲಿ ಹೊಸಹೊಸ ಪ್ರಯೋಗಗಳನ್ನು ನಡೆಸುವ ನಿರ್ದೇಶಕರಿಗೆ ಕನ್ನಡ ಚಿತ್ರರಂಗ ಕಾಲಕಾಲಕ್ಕೆ ವೇದಿಕೆ ಒದಗಿಸುತ್ತಿದೆ.

ಇದೀಗ ಅದರ ಮುಂದುವರೆದ ಭಾಗವಾಗಿ ಸ್ಯಾಂಡಲ್ ವುಡ್ ನಲ್ಲಿ ಹೊಸ ನಿರ್ದೇಶಕ ಕಗ್ಗತ್ತಲಿನ ಮಳೆಯಲ್ಲಿ ಹೆಜ್ಜೆಯ ಗುರುತುಗಳನ್ನು ಬಿಚ್ಚಿಡಲು ಸಿದ್ಧವಾಗಿದ್ದಾರೆ.

ಕರ್ಮ-ಧರ್ಮಗಳ ನಡುವಿನ ಸಂರ್ಘಷದ ಹೊಸ ರೂಪದ ಟೀಸರ್ ಜೊತೆಗೆ ನಿರ್ದೇಶಕ ಅಂಬರೀಷ್ ಸದ್ದುಮಾಡುತ್ತಿದ್ದಾರೆ. ಹೊಸ  ಆಯಾಮದ ಕಥೆಯನ್ನು ಹೇಳಲು ಹೊರಟ ಅಂಬರೀಶ್ ಯತ್ನಿಸಿರುವುದು ಅವರು ಬಿಡುಗಡೆ ಮಾಡಿರುವ ಟೀಸರ್ ಮೂಲಕ ಗೊತ್ತಾಗಿದೆ.

ಕಾಲಾಂತಕ ಸಿನಿಮಾದಲ್ಲಿ ಕಥೆಯೇ ಮುಖ್ಯ ಪಾತ್ರ. ನಾಯಕ – ನಾಯಕಿಗಿಂತ ಕಾಲಾಂತಕ ಎನ್ನುವ ಬುಕ್ ಇಲ್ಲಿ ಸಿನಿಮಾ ಕಥೆಯ  ಜೀವಾಳ ಎನ್ನುವುದು ಅಂಬರೀಷ್ ಅವರ ಹೇಳಿಕೆ.

ನಿರ್ಮಾಪಕ ಶಾಂತ ಕುಮಾರ್ ನಿರ್ಮಿಸಿರುವ ಎರಡನೇ ಸಿನಿಮಾ. ಇದಕ್ಕೂ ಮುನ್ನ ಅವರು ರಂಗ್ ಬಿ ರಂಗಿ ಸಿನಿಮಾವನ್ನು ಸ್ಯಾಂಡಲ್ ವುಡ್ ಗೆ ಕೊಟ್ಟಿದ್ದರು. ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಾಲಾಂತಕ ಚಿತ್ರತಂಡ ನಾಡಿನ ಸಮಸ್ತ ಜನತೆಗೆ ಶುಭಕೋರಿದೆ.

ಎಲ್ಲಾ ಆತ್ಮೀಯರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಕೋರೋನ ಮಹಾಮಾರಿ ಚಿತ್ರರಂಗ ಮತ್ತು ಚಿತ್ರ ಕರ್ಮಿಗಳ ಮೇಲೆ ಬಹಳ ಪರಿಣಾಮ ಬೀರಿದೆ. ವರ್ಷಾನುವರ್ಷಗಳ ಕಾಲ ಹಸಿವು, ನಿದ್ದೆ, ಅವಮಾನಗಳ ಮಧ್ಯೆ ಕಟ್ಟಿಕೊಂಡಂತಹ ಕನಸುಗಳಿಗೆ ದೊಡ್ಡ ಮಾರಕವಾಗಿ ನಿಂತಿದೆ. 

“ಕಾಲಾಂತಕ” ಸಿನಿಮಾ ನಮ್ಮ ಕನಸಿನ ಕೂಸು… ಕಾಲದ ಆತಂಕವಿಲ್ಲದೆ ಕಾಲಾಂತಕ ನಿಮ್ಮ ಮುಂದೆ ಅತಿ ಶೀಘ್ರದಲ್ಲಿ ಬರುವ ಸಿದ್ಧತೆ ನಡೆಯುತ್ತಿದೆ.. ನಿಮ್ಮ ಪ್ರೀತಿ ಪ್ರೋತ್ಸಾಹ ಸಿನಿ ಕರ್ಮಿಗಳ ಮೇಲೆ ಸದಾ ಹಾಗೆ ಇರಲಿ… ಎಂದು ಚಿತ್ರ ತಂಡ ಹೇಳಿಕೊಂಡಿದೆ.

Leave a Reply

Your email address will not be published. Required fields are marked *

You May Also Like

ನಟಿ ಪ್ರೇಮಾ ಎರಡನೇ ಮದುವೆ ಬಗ್ಗೆ ನೀಡಿದ ಸ್ಪಷ್ಟನೆ

ಬೆಂಗಳೂರು: ಕೆಲ ದಿನಗಳಿಂದ ನಟಿ ಪ್ರೇಮಾ ಎರಡನೇ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರೇಮಾ, ಎರಡನೇ ಮದುವೆ ಹಾಗೂ ಖಿನ್ನತೆ ಕುರಿತು ನನ್ನ ಬಗ್ಗೆ ಹರಿದಾಡುತ್ತಿರುವುದು ಫೇಕ್ ನ್ಯೂಸ್ ಇದು

ನಟಿ ಗೆಹನಾ ಅರೆಸ್ಟ್! ವಿಷಯ ಕೇಳಿದರೆ ಶಾಕ್ ಆಗುತ್ತೆ!!

ಮುಂಬಯಿ : ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ನಟಿ ಗೆಹನಾ ವಸಿಷ್ಠ ಅವರನ್ನು ಬಂಧಿಸಿದ್ದಾರೆ.

ಈ ನಟ ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲಿಗ!

ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ.

ಪ್ರೇಮಕಥೆಯ ಸಲಿಗೆ ಸಿಂಗಲ್ ಸಾಂಗ್ ಚಂದನ್ ಶೆಟ್ಟಿ ಡ್ಯಾನ್ಸ್

ಬೆಂಗಳೂರು: ಪ್ರೇಮಿಯೊಬ್ಬ ಪ್ರೀತಿಯಿಂದ ಆಗ ಬದಲಾವಣೆಯನ್ನು ಚಂದನ್ ಶೆಟ್ಟಿ ಲವ್ ಸಾಂಗ್ ಒಂದರಲ್ಲಿ ಬಿಂಬಿಸಿದ್ದಾರೆ. ಈ ಮೂಲಕ ಆಲ್ಬಂ ಸಾಂಗ್ ನಲ್ಲಿ ಚಂದನ್ ಶೆಟ್ಟಿ ಹೊಸ ಪ್ರಯೋಗ ಮಾಡಿದ್ದಾರೆ. ಸಲಿಗೆ ಹೆಸರಿನ ಸಿಂಗಲ್ ಆಲ್ಬಂ ಅನ್ನು ಚಂದನ್ ಶೆಟ್ಟಿ ಮೇ 28 ರಂದು ಬಿಡುಗಡೆ ಮಾಡಿದ್ದಾರೆ. ಕೆನಡಾದಲ್ಲಿ ಚಿತ್ರೀಕರಿಸಿದ ಹಾಡನ್ನು ತಾವೇ ಶೂಟ್ ಮಾಡಿದ್ದಲ್ಲದೇ ಚೆನ್ನಾಗಿ ನೃತ್ಯ ಮಾಡಿದ್ದಾರೆ ಚಂದನ್ ಶೆಟ್ಟಿ.