ಬೆಂಗಳೂರು, ಮೈಸೂರು, ರಾಮನಗರಕ್ಕೆ ಸೊನ್ನೆ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಂತೈಸುವ ಭಾಗವಾಗಿ 24 ಶಾಸಕರಿಗೆ ನಿಗಮ-ಮಂಡಳಿ ಗಿಫ್ಟ್ ನೀಡಲಾಗಿದೆ.

ಬೆಂಗಳೂರು: ಯಾವುದೇ ಮುನ್ಸೂಚನೆ ಇಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ 24 ನಿಗಮ-ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಚಕಿತಗೊಳಿಸಿದ್ದಾರೆ.

ಸಂಪುಟ ಪುನರ್ ರಚನೆಗೆ ಮುಖ್ಯಮಂತ್ರಿ ಸಜ್ಜಾಗಿದ್ದಾರೆಯೇ ಎಂಬ ಅನುಮಾನವೂ ಕಾಡತೊಡಗಿದೆ. ಪುನರ್ ರಚನೆಗೂ ಮುನ್ನ ಸಂಭಾವ್ಯ ಭಿನ್ನಮತ ತಡೆಯಲು ಸಿಎಂ ಈ ಯತ್ನ ಮಾಡಿರಬಹುದೇ ಎಂಬ ಮಾತುಗಳು ಕೇಳಿ ಬಂದಿವೆ.

 ಈ ನೇಮಕದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಕ್ಕಿರುವುದನ್ನು ನೋಡಿದರೆ, ಬಿ.ಎಲ್ ಸಂತೋಷ್ ಮತ್ತು ನಳೀನ್ ಕುಮಾರ ಕಟೀಲು ಅವರ ಗುಂಪಿಗೆ ಹಿನ್ನಡೆಯಾದಂತೆ ಕಾಣುತ್ತಿದೆ. 24 ಶಾಸಕರಲ್ಲಿ 13 ಜನ ಉತ್ತರ ಕರ್ನಾಟಕಕ್ಕೆ ಸೇರಿದವರಾಗಿದ್ದು, ಹೆಚ್ಚೂ ಕಡಿಮೆ ಸಿಎಂ ಬೆಂಬಲಿಗರೇ ಇದ್ದಾರೆ. ಈ 13ರಲ್ಲಿ 7 ಶಾಸಕರು ಹೈದರಾಬಾದ ಕರ್ನಾಟಕಕ್ಕೆ, ಉಳಿದ ಆರು ಶಾಸಕರು ಮುಂಬೈ ಕರ್ನಾಟಕಕ್ಕೆ ಸೇರಿದ್ದಾರೆ.

ಬೆಂಗಳೂರು, ಮೈಸೂರು, ರಾಮನಗರ ಜಿಲ್ಲೆಗಳ ಶಾಸಕರಿಗೆ ಒಂದು ನಿಗಮವನ್ನೂ ನೀಡಿಲ್ಲ. ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದರೂ ಅವರನ್ನು ಪರಿಗಣಿಸಿಲ್ಲ.

ಕರಾವಳಿಗೆ ಬಂದರೆ ಅಲ್ಲಿ ಉಡುಪಿ ಜಿಲ್ಲೆಯ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ದಕ್ಷಿಣ ಕರ್ನಾಟಕದ ತುಮಕೂರು, ಚಿಕ್ಕಮಗಳೂರು, ಹಾಸನ, ಚಾಮರಾಜ ನಗರ ಜಿಲ್ಲೆಗಳಿಗೆ ತಲಾ ಒಂದು ಸ್ಥಾನ, ಶಿವಮೊಗ್ಗ ಜಿಲ್ಲೆಯ ಒಬ್ಬರು ಶಾಸಕರಿಗೆ ಅಧ್ಯಕ್ಷಗಿರಿ ನೀಡಲಾಗಿದೆ.

ಜಾತಿವಾರು ನೋಡಿದರೆ ಲಿಂಗಾಯತ ಶಾಸಕರಿಗೆ ಹೆಚ್ಚು ಸ್ಥಾನ ಸಿಕ್ಕಿವೆ. ಮಧ್ಯ ಕರ್ನಾಟಕದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತಲಾ ಎರಡು ಸ್ಥಾನ ನೀಡಲಾಗಿದೆ.

ಹಿಂದೆ ಸಚಿವಗಿರಿ ಪಡೆದಿದ್ದ ಸಿದ್ದು ಸವದಿ, ಕಳಕಪ್ಪ ಬಂಡಿ, ಶಂಕರ ಮುನೇನಕೊಪ್ಪ, ಶಿವನಗೌಡ ನಾಯಕ ಮುಂತಾದ ಕೆಲವರು ಈಗ ನಿಗಮ ಮಂಡಳಿಗೆ ತೃಪ್ತಿಪಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಸರ್ಕಾರ ರಚಿಸಲು ನೆರವು ನೀಡಿ, ಉಪ ಚುನಾವಣೆಯಲ್ಲಿ ಗೆದ್ದು ಬಂದ ‘ಹೊರಗಿನವರಿಗೆ’ ಸಚಿವಗಿರಿ; ನೀಡಲೇಬೇಕಾದ ಒತ್ತಡವಿದ್ದ ಕಾರಣ ಮೂಲ ಬಿಜೆಪಿ ಶಾಸಕರು ತ್ಯಾಗ ಮಾಡಲೇಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ ದೊರೆತಿದೆ. ಈ ಮೂಲಕ ಗದಗ ಜಿಲ್ಲೆಯಲ್ಲಿ ಎನ್.ಬಿ.ಎ ಮಾನ್ಯತೆ ಪಡೆದ ಮೊದಲ ಕಾಲೆಜು ಎನ್ನುವ ಹೆಗ್ಗಳಿಗೆ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ ಪಾತ್ರವಾಗಿದೆ.

ಸಂತ್ರಸ್ತರಿಗೆ ನ್ಯಾಯ ದೊರಕುವುದೇ…?

ನೌಶಾದ್ ಜನ್ನತ್ತ ಮೂಲತಃ ಕೊಡಗಿನವರು. ನೆರೆ ಸಂದರ್ಭದಿಂದ ಈವರೆಗೆ ಕೊಡುಗಿನ ನೋವಿಗೆ ತಮ್ಮ ತಂಡದೊಂದಿದೆ ಧ್ವನಿಯಾಗುತ್ತಿದ್ದಾರೆ. ನೌಶಾದ್ ಬರೆದ ಸಂತ್ರಸ್ತರಿಗೆ ನ್ಯಾಯ ದೊರಕುವುದೇ..? ಎನ್ನುವ ಲೇಖನ ನಿಮ್ಮ ಉತ್ತರಪ್ರಭದ, ಉತ್ತರ ವಿಶೇಷದಲ್ಲಿ….

ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿತೆ ಸರ್ಕಾರ? : ‘ಅನರ್ಹ’ ವಿಶ್ವನಾಥ್ ಅರ್ಹರಾದದ್ದು ಹೇಗೆ?

ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ನಿಮ್ಮ ಅರ್ಹತೆ ಸಾಬೀತು ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅಲ್ಲಿವರೆಗೂ ಯಾವುದೇ ಪದವಿ ಪಡೆಯುವಂತಿಲ್ಲ ಎಂದಿತ್ತು ಕೂಡ.

ಮಸ್ಕಿ: ನ.30 ರಂದು ಗ್ರಾಮ ಸ್ವರಾಜ್ಯ ಸಮಾವೇಶ

ಕ್ಷೇತ್ರದ ಬಿಜೆಪಿ ಪಕ್ಷದಿಂದ ನ.30ರಂದು ಪಟ್ಟಣದಲ್ಲಿ ಗ್ರಾಮ ಸ್ವರಾಜ್ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬರಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪಗೌಡ ನಕ್ಕಲದಿನ್ನಿ ಅವರು ಹೇಳಿದರು.