ವಿಶ್ವದ ಜನಸಂಖ್ಯೆಯಲ್ಲಿ ಆರನೆ ಒಂದರಷ್ಟನ್ನು ಭಾರತ ಹೊಂದಿದೆ. ನಮ್ಮ ಜವಾಬ್ದಾರಿಯ ಅರಿವು ನಮಗಿದೆ ಎಂದು ಪದ್ರಧಾನಿ ಮೋದಿ ಹೇಳಿದರು.

ನವದೆಹಲಿ: ‘ಭೂಕಂಪವಿರಲಿ, ಚಂಡಮಾರುತವಿರಲಿ ಅಥವಾ ಎಬೋಲಾ ಬಿಕ್ಕಟ್ಟಿರಲಿ, ಭಾರತವು ವೇಗವಾಗಿ ಸ್ಪಂದಿಸಿದೆ. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ 150 ದೇಶಗಳಿಗೆ ನೆರವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಅವರು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ ಸಭೆಯನ್ನು ಉದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಶುಕ್ರವಾರ ರಾತ್ರಿ 8.30ಕ್ಕೆ ಭಾಷಣ ಮಾಡಿದರು.
ವಿಶ್ವಸಂಸ್ಥೆಯು ಎರಡನೆ ಮಹಾಯುದ್ಧದ ನಂತರದ ಸಂಕಷ್ಟದಲ್ಲಿ ಹುಟ್ಟಿಕೊಂಡಿತು. ಈಗ ಕೋವಿಡ್ ಬಿಕ್ಕಟ್ಟಿದೆ. ಇದು ವಿಶ್ವಸಂಸ್ಥೆಯ ಮರುಹುಟ್ಟು ಮತ್ತು ಸುಧಾರಣೆಗೆ ಹಾದಿಯಾಗಬೇಕು. ಈ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು’ ಎಂದು ಅವರು ಹೇಳಿದರು.

‘ವಿಶ್ವದ ಜನಸಂಖ್ಯೆಯಲ್ಲಿ ಭಾರತವು 1/6 ಪ್ರಮಾಣ ಹೊಂದಿದೆ. ನಮ್ಮ ಜವಾಬ್ದಾರಿಯ ಅರಿವು ನಮಗಿದೆ. ಭಾರತ ತನ್ನ ಅಭಿವೃದ್ಧಿಯ ಗುರಿಗಳಲ್ಲಿ ಯಶಸ್ವಿಯಾದರೆ ಅದು ಜಾಗತಿಕ ಅಭಿವೃದ್ಧಿಗೂ ಕಾರಣವಾಗುತ್ತದೆ’ ಎಂದು ಪ್ರಧಾನಿ ತಿಳಿಸಿದರು.

ವಿಶ್ವಸಂಸ್ಥೆಯ ಸ್ಥಾಪನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು. ಹಾಗೆಯೇ ವಿಶ್ವಸಂಸ್ಥೆಯಾರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ ಬೆಳವಣಿಗೆಯಲ್ಲೂ ಭಾರತದ ಪಾತ್ರವಿತ್ತು. ಈ ಕೌನ್ಸಿಲ್ ನ ಪ್ರಥಮ ಅಧ್ಯಕ್ಷರು ಭಾರತೀಯನೇ ಆಗಿದ್ದರು ಎಂದು ಪ್ರಧಾನಿ ಸ್ಮರಿಸಿದರು.

Leave a Reply

Your email address will not be published. Required fields are marked *

You May Also Like

ಎಚ್.ಎಸ್.ವೆಂಕಟಾಪೂರದ ನೀರಿನ ಬವಣೆ ನೀಗುವುದು ಯಾವಾಗ..?

ಅದು ಆ ತಾಲೂಕಿನ ಕಟ್ಟಕಡೆಯ ಗ್ರಾಮ. ಆ ತಾಲೂಕಿನಲ್ಲಿ ಆ ಗ್ರಾಮ ಇದ್ರೂ ವಿಧಾನ ಸಭಾ ಕ್ಷೇತ್ರ ಮಾತ್ರ ಬೇರೆಯದೆ. ಎಲ್ಲಿಯ ತಾಲೂಕು, ಎಲ್ಲಿಯ ವಿಧಾನಸಭಾ ಕ್ಷೇತ್ರ, ಎಲ್ಲಿಯ ಆ ಗ್ರಾಮ ಎನ್ನುವಂತಾಗಿದೆ.

ಗದಗ ಜಿಲ್ಲೆಗೆ ಕೊರೊನಾ ಗ್ರಹಣ : ಇಂದು 19 ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 19 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 199…

ಮಣಿಪುರ ವಿದ್ಯಾರ್ಥಿ ಸಂಘದಿಂದ ಸಚಿವ ಸಿ.ಸಿ.ಪಾಟೀಲ್ ಸಹಾಯಕ್ಕೆ ಕೃತಜ್ಞತೆ

ಮಣಿಪುರ ರಾಜ್ಯದ ವಿದ್ಯಾರ್ಥಿಗಳ ಸಂಘಕ್ಕೆ ಸಹಾಯ ಮಾಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರಿಗೆ ಮಣಿಪುರ ವಿದ್ಯಾರ್ಥಿ ಸಂಘ ಟ್ವೀಟ್ ಮೂಲಕ ಅಭಿನಂದಿಸಿದೆ.

ಅಕ್ರಮ ಅಕ್ಕಿ ಸಂಗ್ರಹ ಗೋಡೌನ್ ಮೇಲೆ ದಾಳಿ

ಗದಗ: ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ…