2019ರ ಜುಲೈ 8ರಂದು ಮಹಾರಾಷ್ಟ್ರ ಬಿಟ್ಟ ಈ ಟ್ರಕ್ 2020ರ ಜುಲೈ 19ರಂದು ಕೇರಳ ತಲುಪಿದೆ.

ತಿರುವನಂತಪುರಂ: ‘ಎಷ್ಟೊತ್ತೋ ಬರಾದು? ನಡಕೊಂಡ್ ಬರಾಕ್ ಹತ್ತೀಯನು?’ ಅಂತೀವಲ್ಲ ಹಂಗಾತಿದು. ಕೇರಳದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಯಂತ್ರವೊಂದನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತಯಾರಿಸಲಾಯಿತು.

ಅದರ ತೂಕ, ಎತ್ತರ ಮತ್ತು ಅಗಲದ ಕಾರಣದಿಂದ ಅದನ್ನು ಕೇರಳಕ್ಕೆ ಸಾಗಿಸುವುದೇ ಇಂದು ದೊಡ್ಡ ಸವಾಲಾಗಿತ್ತು. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಸೂಕ್ಷ್ಮ ಭಾಗಗಳನ್ನು ಒಳಗೊಂಡಿದ್ದರಿಂದ ಹುಷಾರಾಗಿ ಮತ್ತು ನಾಜೂಕಾಗಿ ಅದನ್ನು ಸಾಗಿಸಿ ತರಲಾಗಿದೆ.

70 ಟನ್ ತೂಕ, 7.5 ಮೀ ಎತ್ತರ ಮತ್ತು 6.65 ಮೀಟರ್ ಅಗಲದ ಈ ಬೃಹತ್ ಯಂತ್ರ ಅಂತೂ ಕೇರಳದ ತಿರುವನಂತಪುರ ತಲುಪಿದೆ. 74 ಚಕ್ರಗಳ ಈ ವೊಲ್ವೊ ಟ್ರಕ್ ಸುಮಾರು 1,700 ಕಿಮೀ ಪ್ರಯಾಣಿಸಿದೆ.

ಇದು ‘ಏರೋಸ್ಪೇಸ್ ಹಾರಿಜಂಟಲ್ ಆಟೊಕ್ಲೇವ್’ ಯಂತ್ರವಾಗಿದ್ದು, ಹಗುರ ಪದಾರ್ಥಗಳ ಉತ್ಪಾದನೆಯಲ್ಲಿ ಇದನ್ನು ಬಳಸುತ್ತಾರೆ. ದಿನಕ್ಕೆ 5 ಕಿ.ಮೀ ಪ್ರಯಾಣ ಮಾಡುತ್ತ ನಾಲ್ಕು ರಾಜ್ಯಗಳನ್ನು ಹಾಯ್ದು ತಿರುವನಂತಪುರ ತಲುಪಿದ ಈ ಯಂತ್ರವನ್ನು ಈಗ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಸ್ಥೆಗೆ ತಲುಪಿಸುವ ಕೆಲಸ ನಡೆದಿದೆ. ಈ ಯಂತ್ರದ ಸಾಗಾಣಿಕೆಗೆ 32 ಸ್ಟಾಫ್ ಒಂದು ವರ್ಷ ಬೆವರು ಹರಿಸಿದ್ದಾರೆ! ಈಗ ಅದನ್ನು 2 ಆಕ್ಸೆಲ್ ಬಳಕೆಯಾಗುವ ಪುಲ್ಲಿಂಗ್ ತಂತ್ರಜ್ಞಾನ ಬಳಸಿ ಕೆಳಕ್ಕೆ ಇಳಿಸಿ ಸ್ಥಾಪಿಸಲಾಗುತ್ತದೆ.

Leave a Reply

Your email address will not be published. Required fields are marked *

You May Also Like

ಕಟ್ಟಿ ಹಾಕಿದ್ದ ಕೇರಳಕ್ಕೆ ಸವಾಲು ಹಾಕಿದ ಮಹಾಮಾರಿ!

ಕೊಚ್ಚಿ : ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದ ಕೇರಳದಲ್ಲಿ ಕೆಲವು ದಿನಗಳಿಂದ ಮಹಾಮಾರಿ ಕಟ್ಟಿ ಹಾಕಲಾಗಿತ್ತು. ಆದರೆ, ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆಯಾಗಿದ್ದಾರೆ.

ಭಾರತೀಯ ಡಿಎಲ್ ಯಾವ-ಯಾವ ದೇಶದಲ್ಲಿ ಬಳಸಬಹುದು?

ಭಾರತದ ಡ್ರೈವಿಂಗ್ ಲೈಸನ್ಸ್(ಡಿಎಲ್) ಬಳಸಿ ವಿಶ್ವದ ಕೆಲ ಅದ್ಭುತ ದೇಶಗಳಲ್ಲಿಯೂ ಕೂಡ ಡ್ರೈವಿಂಗ್ ಮಾಡಬಹುದಂತೆ.

ಗೋಲ್ಡ್ ಸ್ಮಗ್ಲಿಂಗ್: ‘ಸ್ವಪ್ನ’ ಸುಂದರಿ ಲಾಕ್ ಡೌನಿನಲ್ಲಿ ಬೆಂಗಳೂರಿಗೆ ಬಂದಿದ್ದು ಹೇಗೆ?

ಯುಎಇಯಿಂದ 30 ಕೆಜಿ ಚಿನ್ನ ಅಕ್ರಮ ಸಾಗಾಣಿಕೆಯ ಆರೋಪ ಎದುರಿಸುತ್ತಿರುವ ಸ್ವಪ್ನ ಸುರೇಶ್ ಲಾಕ್ ಡೌನ್ ಸಂದರ್ಭದಲ್ಲಿ ಕೆರಳದಿಂದ ಬೆಂಗಳೂರು ತಲುಪಿದ್ದು ಹೇಗೆ?

ದೇಶದಲ್ಲಿ ಇಳಿಮುಖದತ್ತ ಹೆಜ್ಜೆ ಹಾಕಿದ ಮಹಾಮಾರಿ!

ನವದೆಹಲಿ : ದೇಶದಲ್ಲಿ ಇಲ್ಲಿಯವರೆಗೂ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತ ಆತಂಕ ಮೂಡಿಸಿದ್ದ ಮಹಾಮಾರಿ, ಕಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದ್ದು, ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದೆ.