ಪುಣೆಯಲ್ಲಿ ಶಂಕರ್ ಕುರಾಡೆ ಎನ್ನುವಾತ 2.80 ಲಕ್ಷ ರೂ. ಮೌಲ್ಯದ ಚಿನ್ನದ ಮಾಸ್ಕ್ ಧರಿಸಿದ್ದನ್ನು ನೋಡಿ ಪ್ರೇರಣೆ ಪಡೆದ ಒರಿಸ್ಸಾದ ಚಿನ್ನ ಪ್ರಿಯನೊಬ್ಬ 3.6 ಲಕ್ಷ ರೂ ಮಾಸ್ಕ್ ಮಾಡಿಸಿಕೊಂಡಿದ್ದಾನೆ.

ಕಟಕ್( ಒರಿಸ್ಸಾ): ಪುಣೆಯ ಶಂಕರ್ ಕರಾಡೆಯ ಚಿನ್ನದ ಮಾಸ್ಕ್ ನಿಂದ ಸ್ಪೂರ್ತಿ ಪಡೆದ ಕಟಕ್ ನಗರದ ಉದ್ಯಮಿ ಅಲೋಕ್ ಮೊಹಂತಿ ಎಂಬಾತ 3.5 ಲಕ್ಷ ರೂ ಮೌಲ್ಯದ ಚಿನ್ನದ ಮಾಸ್ಕ್ ಮಾಡಿಸಿಕೊಂಡು, ಅದನ್ನು ಧರಿಸಿ ಮೆರೆಯುತ್ತಿದ್ದಾನೆ.

 ಆನ್ ಲೈನ್ ಆರ್ಡರ್ ಕೊಟ್ಟು ಮುಂಬೈನಿಂದ ಇದನ್ನು ತರಿಸಿಕೊಂಡಿದ್ದಾನಂತೆ! ಅಂದರೆ ಚಿನ್ನದ ಮಾಸ್ಕ್ ತಯಾರಿಸುವುದು ಈಗ ಲಾಭದಾಯಕ ವ್ಯಾಪಾರ ಆಗಿದೆ ಎಂದಾಯಿತು.

‘ಮೊದಲಿನಿಂದಲೂ ನನಗೆ ಬಂಗಾರ ಎಂದರೆ ಪ್ರೀತಿ. ಜನ ನನ್ನನ್ನು ಬಂಗಾರದ ಮನುಷ್ಯ ಎಂತಲೇ ಕರೆಯುತ್ತಾರೆ. ಪುಣೆ ವ್ಯಕ್ತಿಯ ಮಾಸ್ಕ್ ಬಗ್ಗೆ ಓದಿದಾಗ ನನಗೂ ಆಸೆಯಾಯಿತು’ ಎಂದು ಮೊಹಂತಿ ಹೇಳಿದ್ದಾನೆ.

ಎನ್-95 ಮಾಸ್ಕಿಗೆ ಚಿನ್ನದ ಎಳೆಗಳನ್ನು ಪೋಣಿಸಿ ಈ ಮಾಸ್ಕ್ ಮಾಡಲಾಗಿದೆಯಂತೆ. ಈ ಬಂಗಾರದ ಮಾಸ್ಕಿನ ಟ್ರೆಂಡ್ ಅನ್ನು ತೆವಲು ಅನ್ನುವುದೋ, ಮೂರ್ಖತನ ಎಂದು ಕರೆಯುವುದೋ?

Leave a Reply

Your email address will not be published. Required fields are marked *

You May Also Like

ಚಂಡಮಾರುತ ಎಲ್ಲಿ ಅಪ್ಪಳಿಸಲಿದೆ ಅಂತ ಹೇಳಿದೆ ಹವಾಮಾನ ಇಲಾಖೆ..!

ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ನಿಸರ್ಗ ಚಂಡಮಾರುತ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಬಾಧಿಸಲಿದೆ. ಈಗಾಗಲೇ ಗುಜಾರಾತ್ ಮತ್ತು ಮಹಾರಾಷ್ಟ್ರದೆಡೆಗೆ ಚಂಡಮಾರುತ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿನ್ನೆ ಒಂದೇ ದಿನ ದಾಖಲೆಯ ಸೋಂಕಿತರು

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಿದೆ. ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆಯಾಗುತ್ತಿದ್ದಾರೆ.…

ಮದ್ಯ ಸೇವನೆಯಿಂದ ಮೃತಪಟ್ರೆ ವಿಮೆ ಪರಿಹಾರ ಇಲ್ಲ..!

ಮದ್ಯಪಾನ ಮಾಡಿ ಮೃತಪಟ್ಟವರಿಗೆ ವಿಮೆ ಪರಿಹಾರ ಸಿಗಲ್ಲ, ಅಪಘಾತದಲ್ಲಿ ಗಾಯಗೊಂಡವರಿಗೆ ಮಾತ್ರ ಪರಿಹಾರ ನೀಡಲು ವಿಮೆ ಕಂಪನಿ ಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ನುಗ್ಗೆಕಾಯಿ ಕದಿಯುವ ವೇಳೆ ಸಿಕ್ಕಿಬಿದ್ದ ಪೊಲೀಸರು

ಖದೀಮರನ್ನು ಹಿಡಿದು ಶಿಕ್ಷೆಗೆ ಗುರಿಯಾಗಿಸಿ ಸರಿ ದಾರಿಗೆ ತರಬೇಕಾದ ಕರ್ತವ್ಯ ಪೊಲೀಸರದ್ದು. ಆದರೆ, ಕೆಲ ಪೊಲೀಸರೇ ಕಳ್ಳತನಕ್ಕೆ ಇಳಿದಾಗ ಅದಕ್ಕಿಂತ ನಾಚಿಕಿಗೇಡಿನ ಸಂಗತಿ ಬೇರೊಂದಿಲ್ಲ.