ಶನಿವಾರ 2,798 ಕೇಸ್ಗಳೊಂದಿಗೆ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ 5ನೆ ಸ್ಥಾನಕ್ಕೇರಿದ್ದ ರಾಜ್ಯ, ಇಂದು 2,627 ಪಾಸಿಟಿವ್ಗಳನ್ನು ಕಂಡಿದೆ. ನಿನ್ನೆ 70 ಸಾವು ಸಂಭವಿಸಿದ್ದರೆ ಇಂದು 71 ಸಾವು ಸಂಭವಿಸಿವೆ.

ಬೆಂಗಳೂರು: ರಾಜ್ಯದಲ್ಲಿಂದು 2627 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38843 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 693. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 15409 ಕೇಸ್ ಗಳು. ರಾಜ್ಯದಲ್ಲಿ 22746 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 71 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 684 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.
ದೇಶದಲ್ಲೇ ಅತಿ ವೇಗವಾಗಿ ಸೋಂಕು ಹರಡಲ್ಪಡುತ್ತಿರುವ ರಾಜ್ಯ ಎಂದು ನಿನ್ನೆಯಷ್ಟೇ ಗುರುತಿಸಲ್ಪಟ್ಟಿದ್ದ ರಾಜ್ಯದಲ್ಲಿ ಇಂದು 2,627 ಪಾಸಿಟಿವ್ ಕೇಸ್ ಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 38,843ಕ್ಕೆ ತಲುಪಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು

ಬೆಂಗಳೂರು ನಗರ- 1525
ದಕ್ಷಿಣ ಕನ್ನಡ-196
ಧಾರವಾಡ- 129
ಯಾದಗಿರಿ-120
ಕಲಬುರಗಿ-79
ಬಳ್ಳಾರಿ-63
ಬೀದರ್-62
ರಾಯಚೂರು-48
ಉಡುಪಿ-43
ಮೈಸೂರು-42
ಶಿವಮೊಗ್ಗ-42
ಚಿಕ್ಕಬಳ್ಳಾಪೂರ-39
ಹಾಸನ-31
ಕೊಪ್ಪಳ-27
ತುಮಕೂರು-26
ಕೋಲಾರ-24
ದಾವಣಗೆರೆ-20
ಬೆಂಗಳೂರು ಗ್ರಾಮಾಮಂರ-19
ಕೊಡಗು-15
ಗದಗ-14
ಚಾಮರಾಜನಗರ-13
ಉತ್ತರ ಕನ್ನಡ-12
ಹಾವೇರಿ-12
ಚಿಕ್ಕಮಗಳೂರು-10
ಬಾಗಲಕೋಟೆ-07
ಮಂಡ್ಯ-04
ರಾಮನಗರ-03
ಬೆಳಗಾವಿ-02

Leave a Reply

Your email address will not be published. Required fields are marked *

You May Also Like

ಗದಗ, ರೋಣ, ಮುಂಡರಗಿ, ತಾಲೂಕಿನ ಕೆಲವು ಕಡೆ ಕಂಟೇನ್ಮೆಂಟ್ ಘೋಷಣೆ

ಗದಗ: ಜಿಲ್ಲೆಯ ಕೆಲವು ತಾಲೂಕಿನ ಪ್ರದೇಶಗಳನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಅದರ ವಿವರ ಈ…

ಆಹಾರ ಸಾಮಾಗ್ರಿಗಾಗಿ ಶೀಲ್ ಡೌನ್ ಪ್ರದೇಶದ ಜನರ ಧರಣಿ

ಹಾವೇರಿ: ಆಹಾರ ಸಾಮಗ್ರಿ ನೀಡುತ್ತಿಲ್ಲವೆಂದು ಸೀಲ್ ಡೌನ್ ಪ್ರದೇಶ ಜನರು ಧರಣಿ ನಡೆಸಿದ ಘಟನೆ ಹಾವೇರಿ…

ಕಾಫಿಗೂ ಕೊರೊನಾ ಕಾಟ, ಬೆಳೆಗಾರರ ಸಂಕಷ್ಟ..!

ಲಾಕ್ ಡೌನ್ ಹಿನ್ನೆಲೆ ಕಾರ್ಮಿಕ ಕುಟುಂಬಗಳ ಪರಿಸ್ಥಿತಿ ಹೇಳತೀರದಾಗಿದೆ. ಕಾಫಿ ಉದ್ಯಮವನ್ನೆ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಇನ್ನು ಕಾಫಿ ಉತ್ಪಾದನಾ ಉದ್ಯಮದ ಮೇಲೂ ಲಾಕ್ ಡೌನ್ ಪರಿಣಾಮ ಬೀರಿದೆ. ಇದರಿಂದ ಕಾಫಿ ಕೈಗಾರಿಕೆಗಳು ಸಂಕಷ್ಟ ೆದುರಿಸುವಂತಾಗಿದೆ.

ದಿನವೂ 24 ಕಿಮೀ ಸೈಕಲ್ ಹೊಡ್ದು ಕಲಿತಳು:10ನೇತರಗತಿಯಲ್ಲಿ ಶೇ. 98.75 ಗಳಿಸಿದಳು!

ಭೋಪಾಲ್: ಹತ್ತನೆ ಕ್ಲಾಸ್ ಪರೀಕ್ಷೆಯಲ್ಲಿ ಬರೊಬ್ಬರಿ 98.75 ಪರ್ಸೆಂಟು ಮಾಡಿದ ಈ ಛೋಟಿ, ರಾಜ್ಯಕ್ಕೆ 8ನೇ…