ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ನಿರ್ಣಯವೊಂದರಲ್ಲಿ ಪದವಿಯ ಅಂತಿಮ ವರ್ಷವನ್ನು ಹೊರತುಪಡಿಸಿ, ಉಳಿದ ವರ್ಷಗಳ ಪರೀಕ್ಷೆಗಳನ್ನು ರದ್ದುಪಡಿಸಿದೆ.

ಈ ಕುರಿತಂತೆ ಡಿಸಿಎಂ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದ್ದು, ಸಾಮಾನ್ಯ ಪದವಿಗಳ ಮೊದಲ ಹಾಗೂ 2ನೇ ವರ್ಷ, ಇಂಜನೀಯರಿಂಗ್ ಪದವಿಯ 1, 2, ಹಾಗೂ 3ನೇ ವರ್ಷದ ಪರೀಕ್ಷೆಗಳು ರದ್ದಾಗಿವೆ. ಇದಲ್ಲದೇ ಡಿಪ್ಲೋಮಾ ತರಗತಿಯ ಮೊದಲ ಹಾಗೂ 2ನೇ ವರ್ಷದ ಪರೀಕ್ಷೆ ಸಹ ರದ್ದಾಗಿದೆ. ಸ್ನಾತಕೋತ್ತರದಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಪದವಿ, ಡಿಪ್ಲೋಮಾ ಮತ್ತು ಪಿಜಿಯ ಅಂತಿಮ ವರ್ಷದಲ್ಲಿ ಇರದೇ ಇರುವವರಿಗೆ (ಮೊದಲ, ಎರಡನೆ ಅಥವಾ 3ನೆ ವರ್ಷ) ಅವರ ಆಂತರಿಕ ಮೌಲ್ಯಮಾಪನ (ಇಂಟರ್ನಲ್ ಅಸೆಸ್ ಮೆಂಟ್) ಮತ್ತು ಹಿಂದಿನ ಪರೀಕ್ಷೆಯ ಅಂಕಗಳ (ತಲಾ ಶೇ. 50) ಆಧಾರದಲ್ಲಿ ಗ್ರೇಡ್ ನೀಡಿ ಮುಂದಿನ ತರಗತಿಗೆ ಪ್ರಮೋಷನ್ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ನಲ್ಲಿ ಆನ್ ಲೈನ್ ಅಥವಾ ಆಫ್ ಲೈನ್ ಅಥವಾ ಎರಡೂ ಬೆರೆತ ಹೈಬ್ರಿಡ್ ಪರೀಕ್ಷೆ ನಡೆಸಲಾಗುವುದು. ಹಿಂದಿನ ವರ್ಷದ ವಿಷಯ ಬಾಕಿ ಇದ್ದರೆ ಸೆಪ್ಟೆಂಬರ್ ನಲ್ಲೇ ಬರೆಯಲು ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಆದೇಶ ಪ್ರತಿ
1 comment
  1. Is it applicable for B.Ed. 1&3 Sem examination?
    Plz make it clear and leave the concerned circular.

Leave a Reply

Your email address will not be published. Required fields are marked *

You May Also Like

ನರೇಗಲ್ಲ: ವಿದ್ಯುತ್ ನಿಲುಗಡೆ

110/11ಕೆವ್ಹಿ ನರೇಗಲ್ಲ, ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ನವೆಂಬರ್ 10 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5.30 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಗೋಂಧಳಿ ಸಮಾಜಕ್ಕೆ ವಿಶೇಷ ಪ್ಯಾಕೇಜ್ ನೀಡಲು ವಿಠಲ್ ಗಣಾಚಾರಿ ಒತ್ತಾಯ

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದವರ ನೆರವಿಗೆ 1600 ಕೋಟಿ ರೂಗಳ ವಿಶೇಷ ಪ್ಯಾಕೇಜ್ ನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದು ಅಭಿನಂದನಾರ್ಹ. ಆದರೆ ಈ ಪ್ಯಾಕೇಜಿನಲ್ಲಿ ಗೋಂಧಳಿ ಸಮಾಜಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದು ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘದ ರಾಜ್ಯಾಧ್ಯಕ್ಷ ವಿಠಲ್ ಗಣಾಚಾರಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಖಾಸಗಿ ವೈದ್ಯರು ವೃತ್ತಿ ಪರತೆ ಮರೆತರೆ ಶಿಕ್ಷೆ ಕಟ್ಟಿಟ್ಟ ಬುತ್ತಿ!

ಖಾಸಗಿ ವೈದ್ಯರು ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕು. ಒಂದು ವೇಳೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅವರ ವೈದ್ಯಕೀಯ ನೋಂದಣಿ ರದ್ದುಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ಕು ಜನರ ಸಾಮೂಹಿಕ ಅಂತ್ಯಸಂಸ್ಕಾರ ಸಂಸ್ಕಾರ ಮಾಡಿದ ಬಿನ್ನಾಳ ಗ್ರಾಮಸ್ಥರು

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಒಂದೇ…