ಬೆಂಗಳೂರು: ಲಾಕ್ ಡೌನ್ ಉದ್ದೇಶ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವುದು. ವಾಣಿಜ್ಯ ಸೇರಿದಂತೆ ಎಲ್ಲ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗುವುದರಿಂದ ಆರ್ಥಿಕತೆಯಲ್ಲಿ ಹಿನ್ನಡೆ ಸಹಜ.

ವಿಶ್ವಬ್ಯಾಂಕಿನ ಮಾಜಿ ಉಪಾಧ್ಯಕ್ಷ, ಕಾರ್ನೆಲ್ ವಿವಿ ಪ್ರೊಫೆಸರ್ ಕೌಶಿಕ್ ಬಸು

ಆದರೆ ದೇಶದಲ್ಲಿ ಘೋಷಿಸಲ್ಪಟ್ಟ ಅಥವಾ ಏಕಾಏಕಿ ಹೇರಲ್ಪಟ್ಟ ಲಾಕ್ ಡೌನ್ ಫಲಿತಾಂಶದಿಂದ ಸೋಂಕು ನಿಯಂತ್ರಣ ಸಾಧ್ಯವಾಗಲಿಲ್ಲ. ಇನ್ನೊಂದು ಕಡೆ ಆರ್ಥಿಕತೆ ನಿರೀಕ್ಷೆಗಿಂತ ಕೆಳಕ್ಕೆ ಇಳಿಯಿತು. ವಲಸಿಗ ಕಾರ್ಮಿಕರ ಪಾಡಂತೂ ಹಸವಿನೊಂದಿಗಿನ ಸಮರವಾಗಿತ್ತು.

ವಿಶ್ವಬ್ಯಾಂಕಿನ ಮಾಜಿ ಉಪಾಧ್ಯಕ್ಷ, ಕಾರ್ನೆಲ್ ವಿವಿ ಪ್ರೊಫೆಸರ್ ಕೌಶಿಕ್ ಬಸು ಈ ಒಟ್ಟು ವಿಫಲತೆಯನ್ನು ವಿವರಿಸುವುದು ಹೀಗೆ: ‘ಸೋಂಕಿನ ಸಂಖ್ಯೆಯ ಬದಲು, ಸಾವಿನ ಸಂಖ್ಯೆಯನ್ನು ಮಾನದಂಡವಾಗಿ ತೆಗೆದುಕೊಂಡಾಗ ಮತ್ತು ಇದನ್ನು ಆಯಾ ದೇಶದ ಜನಸಂಖ್ಯೆಗೆ ಸಮೀಕರಿಸಿದಾಗ, ಭಾರತ, ಚೀನಾ ಸೇರಿ ಏಷ್ಯಾ ಮತ್ತು ಆಫ್ರಿಕಾ ಖಂಡಗಳು ಸೋಂಕಿನ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ್ದು ಕಂಡು ಬರುತ್ತದೆ. ಆದರೆ ಈ ದೇಶಗಳ ಪೈಕಿ, ಭಾರತದ ಸಾಧನೆ ಮಾತ್ರ ತೀರಾ ಕೆಟ್ಟದಾಗಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಎಷ್ಟು ಕೋವಿಡ್ ಸಾವು ಎಂಬ ಮಾನದಂಡದಲ್ಲಿ ನೋಡಿದಾಗ, ಭಾರತವು ಚೀನಾ, ಇಂಡೋನೇಷಿಯಾ, ಶ್ರೀಲಂಕಾ, ನೇಪಾಳ್, ಬಾಂಗ್ಲಾದೇಶ, ಮಲೇಶಿಯಾ ಮತ್ತು ಇತರ ಅನೇಕ ದೇಶಗಳಿಗಿಂತ ಭಾರತ ತುಂಬ ಹಿಂದಿದೆ. ಆಫ್ರಿಕಾದ ಬಹುಪಾಲು ದೇಶಗಳು ಭಾರತಕ್ಕಿಂತ ಉತ್ತಮವಾಗಿ ನಿಯಂತ್ರಣ ಮಾಡಿವೆ, ಅಲ್ಲಿ ಮರಣದರ ಭಾರತಕ್ಕಿಂತ ಕಡಿಮೆಯಿದೆ.

ಮುಂದುವರೆದು ಕೌಶಿಕ್ ಬಸು ಹೇಳುತ್ತಾರೆ, ‘ಸೋಂಕು ನಿಯಂತ್ರಣಕ್ಕೆ ಲಾಕ ಡೌನ್ ಅಗತ್ಯ. ಆದರೆ ಅದನ್ನು ನಮ್ಮ ದೇಶಕ್ಕೆ ಹೊಂದುವಂತೆ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಿತ್ತು. ಮಾರ್ಚ್ 24ರಂದು ಏಕಾಏಕಿ ಘೋಷಣೆ ಮಾಡಿದ ಲಾಕ್ ಡೌನ್ ಕಾರಣದಿಂದ ಸೋಂಕು ಕಡಿಮೆಯಾಗುವ ಬದಲು, ಹೆಚ್ಚತೊಡಗಿತು. ಘೋಷಣೆಗೂ ಮೊದಲು ಪೂರ್ವ ತಯಾರಿ ಏನು ಮಾಡಿಕೊಂಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಆದರೆ ಲಾಕ್ ಡೌನ್ ನಿರ್ವಹಣೆ ತುಂಬ ಕೆಟ್ಟದಾಗಿತ್ತು. ಲಾಕ್ ಡೌನಿನ ಎರಡು ವಾರದ ನಂತರ ಸೋಂಕು ದರ ಏರತೊಡಗಿತು. ಆಗಿನಿಂದ ಅದು ಎಚ್ಚರಿಕೆಯ ಗಂಟೆಯೇ ಆಗಿದೆ ಎಂದು ಕೌಶಿಕ್ ಬಸು ಹೇಳುತ್ತಾರೆ.

Leave a Reply

Your email address will not be published. Required fields are marked *

You May Also Like

ಸಿಎಂ ಯಡಿಯೂರಪ್ಪ ರಾಜಾಹುಲಿ ಅಂದ್ರು ಆರ್.ಅಶೋಕ

ಚಾಮರಾಜನಗರ:ಹುಲಿಗೆ ಹಿಂದಿನಿಂದ ಆಡಳಿತ ಮಾಡಿ ಗೊತ್ತಿಲ್ಲ. ನೇರ ಆಡಳಿತವೇ ಸಿಎಂ ಯಡಿಯೂರಪ್ಪ ಅವರ ಸ್ವಭಾವ ಹೀಗಾಗಿ ಯಡಿಯೂರಪ್ಪ ರಾಜಾಹುಲಿ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಹಳೆಯ ಧಾರಾವಾಹಿಗಳಿಗೆ ಮೊರೆ: ದಾಖಲೆ ಸೇರಿದ ರಾಮಾಯಣ ಧಾರಾವಾಹಿ

ಲಾಕ್ ಡೌನ್ ಹಿನ್ನೆಲೆ ಬಹುತೇಕ ಚಾಲ್ತಿಯಲ್ಲಿರು ಧಾರಾವಾಹಿ ಶೂಟಿಂಗ್ ಕಾರ್ಯ ಕೂಡ ನಿಂತಿದೆ. ಇದರಿಂದಾಗಿ ಡಿಡಿ ವಾಹಿನಿ ಮತ್ತೆ ರಾಮಾಯಣ ಧಾರಾವಾಹಿ ಮರುಪ್ರಸಾರ ಮಾಡಿದ್ದು ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮೆರೆದಿದೆ.

‘ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಶ್ರೀರಾಮ ಭಾರತೀಯನಲ್ಲ, ನೇಪಾಳಿ’ : ನೇಪಾಳ ಪ್ರಧಾನಿ ಕಿಡಿ

‘ನಿಜವಾದ ಅಯೋಧ್ಯೆ ಇರುವುದು ಭಾರತದಲ್ಲಲ್ಲ ನೇಪಾಳದಲ್ಲಿ. ದೇವರು ರಾಮ ಭಾರತೀಯನಲ್ಲ, ನೇಪಾಳಿ’ ಎಂದು ನೇಪಾಳ ಪ್ರಧಾನಿ ಪ್ರತಿಪಾದಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಮತ್ತೆ 18 ಕೊರೊನಾ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.