ಗದಗ: ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣ ಹತ್ತಿರದ ನಿವಾಸಿ 40 ವರ್ಷದ ಪುರುಷ ಪಿ-9729 ಸಂಪರ್ಕದಿಂದಾಗಿ ಮುಂಡರಗಿ ಪಟ್ಟಣದ ಅಂಬಾಭವಾನಿ ನಗರ ನಿವಾಸಿಗಳಾದ 36 ವರ್ಷದ ಪುರುಷ (ಪಿ-24739) ಹಾಗೂ 25 ವರ್ಷದ ಮಹಿಳೆ (ಪಿ-24740)  ಸೋಂಕು ದೃಢವಾಗಿದೆ.
ಜೂನ್ 28 ರಂದು ಮಹಾರಾಷ್ಟ್ರದಿಂದ ಆಗಮಿಸಿದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮೇಂವುಡಿ ಜನತಾ ಪ್ಲಾಟ್ ನಿವಾಸಿಗಳಾದ ಐವರಲ್ಲಿ ಸೋಂಕು ದೃಡವಾಗಿದೆ. 38 ವರ್ಷದ ಪುರುಷ (ಪಿ-24741), 35 ವರ್ಷದ ಮಹಿಳೆ (ಪಿ-24742), 16 ವರ್ಷದ ಯುವತಿ (ಪಿ-24743), 16 ವರ್ಷದ ಯುವಕ (ಪಿ-24744), 9 ವರ್ಷದ ಬಾಲಕಿ (ಪಿ-24745).ಲಕ್ಷ್ಮೇಶ್ವರದ 39 ವರ್ಷದ ಪುರುಷ ಪಿ-11230 ಸೋಂಕಿತ ಸಂಪರ್ಕದಿಂದಾಗ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಹತ್ತಿರದ ಹೂಲಗೇರಿ ಬಣದ 6 ನಿವಾಸಿಗಳಿಗೆ ಸೋಂಕು ದೃಢವಾಗಿದೆ. 32 ವರ್ಷದ ಮಹಿಳೆ (ಪಿ-24746), 14 ವರ್ಷದ ಯುವಕ (ಪಿ-24747), 25 ವರ್ಷದ ಪುರುಷ (ಪಿ-24748), 39 ವರ್ಷದ ಪುರುಷ (ಪಿ-24749), 12 ವರ್ಷದ ಯುವತಿ (ಪಿ-24750), 7 ವರ್ಷದ ಬಾಲಕಿ (ಪಿ-24751).
ಗದಗ ತಾಲ್ಲೂಕಿನ ಹೊಂಬಳ ಗ್ರಾಮದ ದೊಡ್ಡ ಓಣಿ ನಿವಾಸಿ 70 ವರ್ಷದ ವೃದ್ಧೆಗೆ (ಪಿ-24752) ಇನ್‌ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಹಾಗೂ ಬೆಂಗಳೂರಿನಿಂದ ಆಗಮಿಸಿದ ರೋಣ ಪಟ್ಟಣದ ಡಿ ಪೌಲ್ ಶಾಲೆ ಹತ್ತಿರದ ನಿವಾಸಿ 36 ವರ್ಷದ ಪುರುಷ (ಪಿ-24753) ಇವರಿಗೆ ಸೋಂಕು ದೃಢವಾಗಿದೆ.
ನರಗುಂದ ಪಟ್ಟಣದ ಗಡಿ ಓಣಿಯ 42 ವರ್ಷದ ಪುರುಷ ಪಿ-18279 ಸಂಪರ್ಕದಿಂದಾಗಿ ಅದೇ ಪ್ರದೇಶದ 30 ವರ್ಷದ ಮಹಿಳೆ (ಪಿ-24754), 38 ವರ್ಷದ ಮಹಿಳೆ (ಪಿ-24755) ಸೋಂಕು ದೃಢವಾಗಿದೆ. ಹಾಗೂ ನರಗುಂದ ಪಟ್ಟಣದ ಗಡಿ ಓಣಿಯ 39 ವರ್ಷದ ಪುರುಷ ಪಿ-15320 ಸಂಪರ್ಕದಿಂದಾಗಿ ಹೊರಕೇರಿ ಓಣಿಯ 26 ವರ್ಷದ ಮಹಿಳೆ (ಪಿ-24756) ಸೋಂಕು ದೃಡವಾಗಿದೆ.
ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 7571 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 7571 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 264546 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 6561 ಪ್ರಕರಣಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿವೆ.

ಶಾಕಿಂಗ್ ನ್ಯೂಸ್: ಕರ್ನಾಟಕವೀಗ ಸೋಂಕು ಅತಿ ವೇಗದಲ್ಲಿ ಹರಡುತ್ತಿರುವ ರಾಜ್ಯ: ಕೇಸ್-ಲೋಡ್ ಸಂಖ್ಯೆಯಲ್ಲಿ 5ನೆ ಸ್ಥಾನ

ಸೋಂಕಿತರ ಸಂಖ್ಯೆಯ ಆಧಾರದ ಪಟ್ಟಿಯಲ್ಲಿ (ಕೇಸ್-ಲೋಡ್) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 6ನೆ ಸ್ಥಾನದಲ್ಲಿದ್ದ ಕರ್ನಾಟಕ ಶನಿವಾರ ಉತ್ತರಪ್ರದೇಶವನ್ನು ದಾಟಿ 5ನೆ ಸ್ಥಾನಕ್ಕೆ ಏರಿದೆ.

ರಾಜ್ಯದಲ್ಲಿನ ಎಲ್ಲ ರೈತರಿಗೂ 5 ಸಾವಿರ ಪರಿಹಾರ ಘೋಷಣೆ!

ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಎಲ್ಲ ರೈತರಿಗೆ ರೂ.5 ಸಾವಿರ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮೀನು ಸಾರು ಮಾಡಿವಿ ಬಾ ಅಪ್ಪಾ, ಎನ್ನುವ ಕರುಳಿನ ಕೂಗಿಗೂ ಬಾರದೇ ಹೋದ ಅಪ್ಪ..!

ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ಅಪ್ಪನನ್ನು ಕಂಡ ಮಕ್ಕಳು ಅಪ್ಪ, ಕೈಯಲ್ಲಿ ಹಿಡಿದುಕೊಂಡು ಬಂದ ಚೀಲವನ್ನೆ ಕಣ್ಣರಳಿಸಿ ನೋಡಿದ್ದಾರೆ. ಅಪ್ಪ ತಂದ ಮೀನು ಕಂಡು ಹಿರಿಹಿರಿ ಹಿಗ್ಗಿದ್ದಾರೆ. ಮಕ್ಳಾ ಮೀನು ಸಾರು ರೆಡಿ ಆಗ್ಲಿ ನಾನು ಸ್ವಲ್ಪ ಹೊರಗ್ ಹೋಗಿ ಬರ್ತಿನಿ ಅಂತ ಹೊರ ನಡೆದ ಅಪ್ಪ.