ಗದಗ: ಕೋವಿಡ್ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ ಮಾಡಿ, ತಾಯಿ-ಮಗು ಇಬ್ಬರ ಜೀವ ಕಾಪಾಡಿದ ಅಪರೂಪದ ಸಾಧನೆ ಮಾಡಿದ ನಗರದ ಜಿಮ್ಸ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಈಗ ಆ ಕಂದನ ಪಾಲಿಗೆ ತಾಯಿ-ತಂದೆ ಎಲ್ಲವೂ ಆಗಿದ್ದಾರೆ.

ಉಸಿರಾಟದ ತೊಂದರೆ ಇರುವ ನವಜಾತ ಹೆಣ್ಣು ಶಿಶುವನ್ನು ಕೊವಿಡ್ ವಿಭಾಗದಲ್ಲೇ ಇರುವ ನವಜಾತ ಶಿಶುಗಳ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅಲ್ಲೇ ಕೆಲ ಅಡಿಗಳ ದೂರದಲ್ಲಿ ಕೊವಿಡ್ ಬೆಡ್ ನಲ್ಲಿ ಮಲಗಿರುವ ಅವ್ವ ತನ್ನ ಕಂದನನ್ನು ಸ್ಪರ್ಶಿಸುವಂತಿಲ್ಲ. ಐಸಿಯು ಹೊರಗೆ ನಿಂತು ದಿನಕ್ಕೊಮ್ಮೆ ಗಾಜಿನ ಮೂಲಕ ನೋಡಬೇಕು. ಮಗು ಜೀವರಕ್ಷಕ ಯಂತ್ರದ ಮೇಲಿರುವುದರಿಂದ ಎದೆ ಹಾಲು ಕುಡಿಸಲು ಅನುಮತಿ ಇಲ್ಲ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಮ್ಸ್ ವೈದ್ಯರು ಮತ್ತು ಸಿಬ್ಬಂದಿಯೇ ಈಗ ಕಂದನ ಪಾಲಿಗೆ ತಾಯಿ-ತಂದೆ. ತಾಯಿಯ ಎದೆಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ನಳಿಕೆ ಮೂಲಕ ಮಗುವಿನ ದೇಹಕ್ಕೆ ಸೇರಿಸುತ್ತಿದ್ದಾರೆ. ಈಗ ಈ 3 ದಿನದ ಹೆಣ್ಣು ಶಿಶುವಿಗೆ ಜಿಮ್ಸ್ ಆಸ್ಪತ್ರೆಯೇ ಮನೆ, ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಯೇ ತಂದೆ-ತಾಯಿ-ಬಂಧು ಬಳಗ ಎಲ್ಲ.

ಈ ಕುರಿತು ಉತ್ತರಪ್ರಭದ ಜೊತೆ ಮಾತನಾಡಿದ ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರಡ್ಡಿ, ಮಗುವಿನ ಕೊರೋನಾ ಟೆಸ್ಟ್ ವರದಿ ಇನ್ ವ್ಯಾಲಿಡ್ ಎಂದು ಬಂದಿದೆ. ಎರಡನೇ ಸ್ಯಾಂಪಲ್ ಕಳಿಸಿದ್ದೇವೆ. ಈಗ ಉಸಿರಾಟದಲ್ಲಿ ಸುಧಾರಣೆ ಕಂಡುಬಂದಿದೆ ಎಂದರು.

ಮಗುವಿನ ತಂದೆಗೆ ಭಯವೋ ಅಥವಾ ಅಜ್ಞಾನವೊ ಅಥವಾ ಅಲ್ಲಿ ಅನುಮತಿ ಸಿಗಲ್ಲ ಎಂದು ಯಾರಾದರೂ ಹೇಳಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಂತೂ ಆಸ್ಪತ್ರೆಯತ್ತ ಬಂದಿಲ್ಲ. ಆದರೆ ನೂರಾರು ಜಿಮ್ಸ್ ಸಿಬ್ಬಂದಿ ಈ ಕಂದನ ಚೇತರಿಕೆಗೆ ನೆರವಾಗುತ್ತಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ 23 ವರ್ಷದ ಗರ್ಭಿಣಿ ಮಹಿಳೆ ಗದಗ ಜಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಆದರೆ ಅವರಿಗೆ ಶುಕ್ರವಾರ ಕೊರೋನಾ ಸೋಂಕು ತಗಲಿರುವದು ದೃಢಪಟ್ಟಿತ್ತು. ಶನಿವಾರ ಹೆರಿಗೆ ನೋವು ಕಾಣಿಸಿಕೊಂಡಾಗ, ಡಾ. ಶಿವನಗೌಡ ಜೋಳದರಾಶಿ, ಡಾ.ಶೃತಿ ಭಾವಿ ಮತ್ತು ಡಾ. ಅಜಯ್ ಬಸರಿಗಿಡದ ಸಿಸೇರಿನ್ ಮಾಡಿ ಹೆರಿಗೆ ಯಶಸ್ವಿಗೊಳಿಸಿ ಅನನ್ಯ ಸಾಧನೆ ಮಾಡಿದ್ದರು. ಈ ಘಟನೆ ರಾಜ್ಯದ ಗಮನ ಸೆಳೆದಿತ್ತು.

Leave a Reply

Your email address will not be published. Required fields are marked *

You May Also Like

ಮನೆಗೆ ಕನ್ನ : ಲಕ್ಷಾಂತರ ನಗದು ದೋಚಿ ಪರಾರಿಯಾದ ಕಳ್ಳರು

ಮುಳಗುಂದ: ರೈತ ಸೋಮಣ್ಣ ಸುಂಕದ ಅವರ ಮನೆಯ ಬಾಗಿಲ ಲಾಕ್ ಮುರಿದು ಒಳ ನುಗ್ಗಿದ್ದ ಕಳ್ಳರು…

ಗದಗ ಜಿಲ್ಲೆಯಲ್ಲಿಂದು 06 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 6 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 243…

ಪಿಯುಸಿ ಪ್ರಾಯೋಗಿಕ ಪರೀಕ್ಷೆ ಕುರಿತು ಇಲಾಖೆ ಮಾರ್ಗಸೂಚಿ ಪ್ರಕಟ

ಏಪ್ರಿಲ್ 28 ರಿಂದ ಮೇ 18 ರವರೆಗೆ ನಡೆಯಬೇಕಿರುವ 2021 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಉಪ ನಿರ್ದೇಶಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ನಾವು ಜನರ ಪರ, ಭ್ರಷ್ಟ ಸರ್ಕಾರದ ಪರವಲ್ಲ: ಸಿದ್ದು

ಬೆಂಗಳೂರು: ಕೋವಿಡ್ ಸಂಬಂಧಿ ಪಿಪಿಇ ಕಿಟ್ ಮತ್ತು ಇತರ ಸಲಕರಣೆ ಕೊಳ್ಳುವಾಗ ಸರ್ಕಾರ ಭಾರಿ ದುಡ್ಡು…