ಪುಣೆ: ಈ ಮನುಷ್ಯನಿಗೆ ಚಿನ್ನದ ಹುಚ್ಚು ಮತ್ತು ಪ್ರಚಾರದ ತೆವಲು ಎಷ್ಟಿದೆಯೆಂದರೆ, ಕೊರೋನಾ ಬಿಕ್ಕಟ್ಟಿನಲ್ಲಿ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಧರಿಸಿ ಶೋ ಕೊಡುತ್ತಿದ್ದಾನೆ.
ದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೊವಿಡ್‌ನಿಂದ ಬಾಧಿತ ರಾಜ್ಯವಾಗಿರುವ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚವಾಡದ ಶಂಕರ್ ಕುರಾಡೆ ಎಂಬ ವ್ಯಕ್ತಿಯ ಹುಚ್ಚು ಸಾಹಸವಿದು.

2.98 ಲಕ್ಷ ರೂ ಖರ್ಚು ಮಾಡಿ ಈ ಬಂಗಾರದ ಮಾಸ್ಕ್ ತಯಾರಿಸಲಾಗಿದೆ. ‘ಇದರ ಮಧ್ಯ ಭಾಗದಲ್ಲಿ ಸಣ್ಣ ಸಣ್ಣ ರಂಧ್ರ ಇರುವುದರಿಂದ ಉಸಿರಾಟಕ್ಕೇನೂ ತೊಂದರೆಯಿಲ್ಲ. ಆದರೆ ಕೊವಿಡ್ ಸೋಂಕು ತಡೆಗೆ ಇದು ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಿಲ್ಲ’ ಎಂದು ಶಂಕರ್ ಕುರಾಡೆ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಎಎನ್‌ಐ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುರುವ ನೆಟ್ಟಿಗರಲ್ಲಿ ಬಹಳಷ್ಟು ಜನ ಈ ಹುಚ್ಚಿನ ಬಗ್ಗೆ ಅಸಹ್ಯ ಪಟ್ಟಿದ್ದಾರೆ, ಕೆಲವರು ತಮಾಷೆ ಮಾಡಿದ್ದಾರೆ.

ಕಾರ್-ಪೇಂಟರ್ ಎನ್ನುವ ಹ್ಯಾಂಡಲ್‌ನವರು, ‘ಹಣದಿಂದ ಏನೆಲ್ಲ ಖರೀದಿಸಬಹುದು, ಆದರೆ ಕಾಮನ್ ಸೆನ್ಸ್ ಖರೀದಿಸಲಾಗದು’ ಎಂದಿದ್ದಾರಲ್ಲದೇ, ‘ಕೊವಿಡ್ ಈಡಿಯಟ್’ (ಕೊವಿಡೀಯಟ್) ಎಂದು ಚುಚ್ಚಿದ್ದಾರೆ. ಕಂಗನಾ ಎನ್ನುವವರು ಪೈಸಾ ಕೊಟ್ರ ಎಲ್ಲ ಸಿಗುತ್ತ, ಆದ್ರ ಬುದ್ಧಿ ಸಿಗಂಗಿಲ್ಲ’ ಎಂದಿದ್ದಾರೆ.

ಪಿಂಪ್ರಿ-ಚಿಂಚವಾಡದಲ್ಲಿ ಸೋಂಕಿನ ತೀವ್ರತೆಯಿದೆ. ಜುಲೈ 1ರವರೆಗೆ ಅಲ್ಲಿ 3,287 ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದು 47 ಜನರು ಮೃತಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಅದೇ ಪ್ರದೇಶದ ಈ ವ್ಯಕ್ತಿಗೆ ಈ ಅಸಹ್ಯ, ಅನೈತಿಕ ಶ್ರೀಮಂತಿಕೆ ಪ್ರದರ್ಶನ ಬೇಕಿತ್ತಾ ಎಂಬ ಪ್ರಶ್ನೆಗಳು ಎದ್ದಿವೆ.

ಈ ವ್ಯಕ್ತಿಗೆ ಮೊದಲಿಂದಲೂ ಬಂಗಾರದ ಬಯಕೆ ಕಾಡುತ್ತಲೇ ಬಂದಿದೆ. ಕೊರಳಲ್ಲಿ ಒಂದು ಹಗ್ಗದಂತಹ ಚಿನ್ನದ ಸರ, ಎಲ್ಲ ಬೆರಳುಗಳಿಗೆ ಚಿನ್ನದ ಉಂಗುರ ಮತ್ತು ಮುಂಗೈಗೆ ಹೆಣಭಾರದ ಬ್ರಾಸ್‌ಲೈಟ್ ಧರಿಸುತ್ತಾನೆ. 2.98 ಲಕ್ಷ ರೂ ವೆಚ್ಚದಲ್ಲಿ ಎಷ್ಟೋ ಬಟ್ಟೆ ಮಾಸ್ಕ್ ಖರೀದಿಸಿದ್ದರೆ ಹಂಚಿದ್ದರೆ ಈತ ಗ್ರೇಟ್ ಆಗುತ್ತಿದ್ದ ಅಲ್ಲವೆ?

ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಿದರೆ ಸಾಕು ಎಂದು ಸರಳತೆಯ ಬಗ್ಗೆ ಪ್ರಧಾನಿ ಹೇಳುವ ಹೊತ್ತಿನಲ್ಲಿ ಇಲ್ಲಿ ಚಿನ್ನದ ಮಾಸ್ಕ್ ಹಾಕುವ ತೆವಲು ಕಾಣಸಿಕೊಂಡಿದೆ.

1 comment
Leave a Reply

Your email address will not be published. Required fields are marked *

You May Also Like

ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು!

ಬೀದರ್: ಕ್ವಾರಂಟೈನ್ ನಲ್ಲಿದ್ದ ಯುವಕನೊಬ್ಬ ಇಂದು ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಔರಾದ್…

ಹೊರ ರಾಜ್ಯಗಳಿಗೆ ಹೋಗಲು -ಬುರವಿಕೆಗೆ ಅನುಮತಿ

ಹೊರ ರಾಜ್ಯಗಳಲ್ಲಿ ಸಿಲುಕಿರುವ ಅಥವಾ ಸ್ವಂತ ರಾಜ್ಯಕ್ಕೆ ಸ್ಥಳಕ್ಕೆ ಹೋಗಲು ಬಯಸುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು,ಪ್ರವಾಸಿಗರು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯದಲ್ಲಿಂದು ಕೊರೊನಾ ಮರಣ ಮೃದಂಗ: ಒಂದೇ ದಿನಕ್ಕೆ 42 ಸಾವು, 1839 ಸೋಂಕಿತರು!

ಬೆಂಗಳೂರು: ರಾಜ್ಯದಲ್ಲಿಂದು 1839 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…

ಆಲಮಟ್ಟಿ : ಶಿವನ ಸನ್ನಿಧಿಯಲ್ಲಿ ಜನಸಾಗರ ವೈಭವ..!
ದೇವಲಾಪುರ ಬಸವ ಉದ್ಯಾನದಲ್ಲಿ ಬ್ರಹತ್ ಈಶ್ವರನ ಮೂತಿ೯ ವೀಕ್ಷಿಸಿದ ಭಕ್ತರು

ವರದಿ : ಗುಲಾಬಚಂದ ಜಾಧವಆಲಮಟ್ಟಿ : ಹಿಂದು ಸಂಪ್ರದಾಯದ ಅತ್ಯಂತ ಪವಿತ್ರ ಹಬ್ಬ ಮಹಾ ಶಿವರಾತ್ರಿ…