ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ನಡೆಯಬೇಕಿದ್ದ ಮದುವೆ ಯನ್ನು ಗುಳೇದಗುಡ್ಡ ತಾಲೂಕು ಆಡಳಿತದ ಅಧಿಕಾರಿಗಳು ರದ್ದು ಮಾಡಿಸಿದ್ದಾರೆ,
ಗುಳೇದಗುಡ್ಡ ಪಟ್ಟಣದ ಯುವತಿ ಬಳ್ಳಾರಿ ಜಿಲ್ಲೆಯ ಯುವಕನ ಜೊತೆ ಇಂದು ಮದುವೆ ನಡೆಯಬೇಕಿತ್ತು, ಆದ್ರೆ ಯುವಕನ ತಾಯಿಗೆ ಕೊರೊನಾ ಪಾಸಿಟಿವ್ ಇದೆ ಎನ್ನುವ ಮಾಹಿತಿ ಇದೆ, ಅವರು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಇತ್ತ ಮದುವೆಯ ಯುವಕ ಹಾಗೂ ಸಂಬಂಧಿಕರು ಸೇರಿ ಬಳ್ಳಾರಿ ಯಿಂದ ಬಸ್ ತೆಗೆದುಕೊಂಡು ಮದುವೆಗೆ ಬಂದಿದ್ದರು ಈ ವಿಷಯ ತಿಳಿದು ರಾತ್ರಿಯೇ ಗುಳೇದಗುಡ್ಡ ತಾಲ್ಲೂಕು ಆಡಳಿತ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮದುವೆಯನ್ನು ರದ್ದು ಮಾಡಿಸಿ ಬಂದವರನ್ನು ವಾಪಸು ಕಳುಹಿಸಿದ್ದಾರೆ, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಗಳು ದಿನೇ ದಿನೇ ಹೆಚ್ಚಾಗಿದ್ದು ಇನ್ನೊಂದು ಅವಾಂತರ ತಪ್ಪಿದಂತಾಗಿದೆ, ಬಾಗಲಕೋಟೆ ನಗರದಲ್ಲಿ ಇತ್ತೀಚೆಗೆ ಅಷ್ಟೇ ಮದುವೆಯ ಆರತಕ್ಷತೆ ನಡೆದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ.

Leave a Reply

Your email address will not be published. Required fields are marked *

You May Also Like

ಮಹಿಳೆಯಿಂದ ಕಾಂಗ್ರೆಸ್ ಮುಖಂಡನಿಗೆ ಥಳಿತ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಎಂಬ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆದಿದೆ.

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2021-22ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ…

ಲಕ್ಷ್ಮೇಶ್ವರ: ಅಪರಾಧ ತಡೆ ಮಾಸಾಚರಣೆ

ತಾಲೂಕಿನ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯ ಹರದಗಟ್ಟಿ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

GTTC ಸಂಸ್ಥೆ ಧಾರವಾಡದಲ್ಲಿ ಯೋಗ ದಿನಾಚರಣೆ

ಉತ್ತರಪ್ರಭಧಾರವಾಡ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ರಾಯಾಪುರ ಧಾರವಾಡದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ…