ಉತ್ತರಪ್ರಭ ಸುದ್ದಿ
ಗದಗ:
ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಿನ್ನೆ ನಡೆದ ಅದ್ಧೂರಿ ಸಮಾವೇಶ ಕೇಸರಿ ಪಾಳೆಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಹೊಸ ಉತ್ಸಾಹದ ಜೊತೆಗೆ ಸಮಾವೇಶದ ನಂತರ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶಾಸಕ ಕಳಕಪ್ಪ ಬಂಡಿ ಮಾತ್ನಾಡಿದ ಸುದ್ದಿ ಭಾರೀ ಚರ್ಚೆಯಲ್ಲಿದೆ..

ಕೈ ಕುಲುಕಿದ ದೃಶ್ಯ

ಶಿರಹಟ್ಟಿ ಸಮಾವೇಶ ಮುಗಿಸಿ ಹಾವೇರಿಗೆ ಹೊರಟಿದ್ದ ಯಡಿಯೂರಪ್ಪ, ಶಾಸಕ ಬಂಡಿಗೆ ಶಾಕ್ ನೀಡಿದರು. ಊಟ ಮಾಡಿ ಹೆಲಿಕಾಪ್ಟರ್ ಏರಿ ಕುಳಿತಿದ್ದ ಯಡಿಯೂರಪ್ಪ, ಶಾಸಕ ಬಂಡಿ ಅವರನ್ನ ನೋಡಿ ಕೈ ಕುಲುಕಿದರು. ನಂತರ ಮಾತ್ನಾಡಲು ಮುಂದಾಗಿದ್ದ ಯಡಿಯೂರಪ್ಪ, ನಿನಗೆ ಟಿಕೆಟ್ ಕೊಡ್ಬೇಕಾ ಅಂತಾ ಪ್ರಶ್ನಿಸಿದರು.. ಅನಿರೀಕ್ಷಿತ ಪ್ರಶ್ನೆ ಎದುರಾಗ್ತಿದ್ದಂತೆ ತಬ್ಬಿಬ್ಬಾಗಿದ್ದ ಶಾಸಕ ಬಂಡಿ, ನೀವು ಹೇಳಿದಂಗೆ. ನೀವು ನಿಲ್ಲು ಅಂದ್ರೆ ನಿಲ್ತೀನಿ ಅಂದ್ರು.. ತಕ್ಷಣ ಉತ್ತರಿಸಿದ ಯಡಿಯೂರಪ್ಪ, ಜನ ಬೇಡ ಅಂತಿದಾರೆ ಅಂದರು. ಮಧ್ಯ ಪ್ರವೇಶಿಸಿದ ಸಿಎಂ ಬೊಮ್ಮಾಯಿ, ಈ ಬಾರಿಯೊಮ್ಮೆ ಕೊಡೋಣ ಅಂದರು. ಸಿಎಂ ಜೊತೆಗೆ ಮಾತ್ನಾಡ್ತಿದ್ದ ಸಿಸಿ ಪಾಟೀಲ, ಯಡಿಯೂರಪ್ಪ ಅವರ ಕಡೆಗೆ ಬಂದರು. ಸಿಸಿ ಪಾಟೀಲರನ್ನ ನೋಡಿದ ಯಡಿಯೂರಪ್ಪ ಇವನಿಗೆ ಟಿಕೆಟ್ ಕೊಡ್ತೀರಾ ಅಂದರು. ಅವನೇ ನಿಲ್ಲಲ್ಲ ಅಂತಿದಾನೆ ಅಂದ ಸಿಸಿ ಪಾಟೀಲರಿಗೆ ಅವನು ನಿಂತ್ರೂ ನಾವ್ ಕೊಡಲ್ಲ ಅಂತಾ ಯಡಿಯೂರಪ್ಪ ಹೇಳಿದರು. ಕೊಡದಿದ್ರೆ ನನಗೂ ಕೊಡಿಸೋದಕ್ಕೆ ಬಿಡಲ್ಲ ಅಂತಾ ಕಾವು ಪಡೆಯುತ್ತಿದ್ದ ಚರ್ಚೆಗೆ, ಸಿಸಿ ಪಾಟೀಲ, ತಮಾಷೆಯ ಬಣ್ಣ ನೀಡಿದರು.

ಹಾವೇರಿಗೆ ಹೊರಡುವ ಮುನ್ನ ಹೆಲಿಕಾಪ್ಟರ್ ಕೂತು ಮಾಜಿ ಸಿಎಂ ಆಡಿದ ಈ ಮಾತು ಕ್ಷೇತ್ರದಲ್ಲಿ ಭಾರಿ ಸದ್ದು ಮಾಡಿದರೆ. ಕ್ಷೇತ್ರಕ್ಕೆ ಸೀಮಿತವಾಗಿದ್ದ ಚರ್ಚೆ ಹೈಕಮಾಂಡ್ ವರೆಗೂ ಹೋಗಿದೆ. ಜನ ಟಿಕೆಟ್ ಬೇಡ ಅಂತಾ ಯಡಿಯೂರಪ್ಪ ಅವರ ಬಾಯಲ್ಲಿ ಕೇಳಿದ ಕಾಂಗ್ರೆಸ್ ಫುಲ್ ಖುಷ್ ಆಗಿದೆ. ಇತ್ತ ಬಿಜೆಪಿ ಟಿಕೆಟ್ ಆಕಾಂಶಿಗಳಲ್ಲೂ ಹೊಸ ಹುರುಪು ಮೂಡುವಂತೆ ಮಾಡಿದೆ.

Leave a Reply

Your email address will not be published. Required fields are marked *

You May Also Like

ಅನೈತಿಕ ಚಟುವಟಿಕೆ: ಐವರ ಬಂಧನ

ಲಕ್ನೋ : ಸೆಕ್ಸ್ ದಂಧೆ ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಐವರನ್ನು ಬಂಧಿಸಿ, ಐವರನ್ನು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಅಬ್ದುಲಪುರವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇಹಾತ್ ಗ್ರಾಮದಲ್ಲಿ ನಡೆದಿದೆ.

ಪುದುಚೇರಿಯಲ್ಲಿ ನಾರಾಯಣ ಸ್ವಾಮಿ ಸರ್ಕಾರ ಪತನ!

ಬಹುಮತ ಸಾಬೀತು ಪಡಿಸಲು ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ವಿಫಲಗೊಂಡ ಕಾರಣ ಸರ್ಕಾರ ಪತನಗೊಂಡಿದೆ.

ರೈತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದ ಕಣ್ಣು, ಹೃದಯ ಇಲ್ಲ : ಡಿಕೆಶಿ ಕಿಡಿ

ಧಾರವಾಡ : ರಾಜ್ಯ ಬಿಜೆಪಿ ಸರ್ಕಾರ ನೀಡಿದ ಪರಿಹಾರ ಇಲ್ಲಿಯವರೆಗೂ ರೈತರಿಗೆ ಸಿಕ್ಕೇಯಿಲ್ಲ ,ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ ಎರಡೂ ಗಂಟೆ ಅವಕಾಶ ನೀಡುವ ಈ ಸರ್ಕಾರ ,ಆದರೆ ಮದ್ಯ ಮಾರಾಟ ಮಾಡಲು ಸಂಜೆ 4 ಗಂಟೆಯವರೆಗೂ ಅವಕಾಶ ನೀಡಿದೆ. ಈ ಸರ್ಕಾರಕ್ಕೆ ನಿಮಗೆ ಕಣ್ಣು,ಹೃದಯ ಎಂಬುದು ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕಿಡಿ ಕಾರಿದರು .

ನಗರಸಭೆ ಚುಣಾವಣೆ:35ನೇ ವಾರ್ಡಿನಲ್ಲಿ ಬಿಜೆಪಿ ಮುಖಂಡ ಅನೀಲ ಮೇಣಸಿಕಾಯಿ ಮತಭೀಕ್ಷೆ

ಉತ್ತರಪ್ರಭ ಸುದ್ದಿ ಗದಗ: ಗದಗ ಬೆಟಗೇರಿ ನಗರಸಭೆ ಚುಣಾವಣೆ  ಹಿನ್ನಲೇ ಬಿಜೆಪಿಯ  ಅಭ್ಯರ್ಥಿಗಳ  ಪಟ್ಟಿಯನ್ನು ಎರಡು…