ಬೆಂಗಳೂರು : ಲಾಕ್ ಡೌನ್ ಇದ್ದರೂ ಅಭಿಮಾನಿಗಳೊಂದಿಗೆ ತಮ್ಮ ಒಡನಾಟ ಇಟ್ಟುಕೊಂಡಿರುವ ನಟಿ ಸಂಯುಕ್ತಾ ಹೆಗ್ಡೆ ಒಳ್ಳೆಯ ಚಿತ್ರ ಸಿಕ್ಕರೆ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೃತ್ಯ ಕೌಶಲ್ಯ, ವ್ಯಾಯಾಮ ಅಥವಾ ಇತರ ಆಸಕ್ತಿದಾಯಕ ಚಟುವಟಿಕೆಗಳಿಂದ ಸಂಚಲನ ಮೂಡಿಸುತ್ತಿದ್ದಾರೆ. ವರ್ಕ್ ಹಾಗೂ ಜಿಮ್ ಅನ್ನು ತಪ್ಪಿಸಿಕೊಳ್ಳುತ್ತಿದ್ದೇನೆ. ಆದರೆ ಡ್ಯಾನ್ಸ್ ಮಾತ್ರ ಎಂದಿಗೂ ನಿಲ್ಲಿಸಿಲ್ಲ. ಹೊಸ ಹೊಸ ಬಗೆಯ ಪ್ರಕಾರಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ನಾನು ಬರೆಯುವುದನ್ನು ಹಾಗೂ ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ. ಆಕ್ಟಿಂಗ್ ಕ್ಲಾಸ್ ತೆಗೆದುಕೊಂಡಿದ್ದೆ. ಅಲ್ಲದೇ, ಹೆತ್ತವರೊಂದಿಗೆ ಸದ್ಯ ಸಮಯ ಕಳೆಯುತ್ತಿದ್ದೇನೆ. ಇದರಿಂದ ತುಂಬಾ ಖುಷಿಯಾಗಿದೆ ಎಂದು ಅವರು ಹೇಳಿದ್ದಾರೆ. 

ವಾಚ್ ಮ್ಯಾನ್, ಮತ್ತು ಜಯಂ ರವಿ ಎದುರು ನಟಿಸಿದ ಕೋಮಲಿ ಚಿತ್ರಗಳ ಮೂಲಕ ಸಂಯುಕ್ತ ಹೆಗ್ಡೆ ಕಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕೆಲವು ಸ್ಕ್ರಿಪ್ಟ್‌ಗಳ ಓದುವಿಕೆ ನಡೆದಿದೆ. ಆದರೆ ಯಾವುದೂ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ. 

ಒಬ್ಬ ನಟಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ ಭಾಷೆಯಲ್ಲಿ ಬೆಳೆಯಲು ಇಷ್ಟಪಡುತ್ತೇನೆ. ಕನ್ನಡದ ಇತರ ನಟಿಯರಿಗಿಂತ ಹೆಚ್ಚು ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

1 comment
Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 397 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 397 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10118…

ಲಕ್ಷ್ಮೇಶ್ವರ:ಬತ್ತಿದ ಬೋರ್ ವೆಲ್ ನಲ್ಲಿ ಜಲಲ ಧಾರೆ…!

ಅಂತರ್ಜಲ ಹೆಚ್ಚಳದಿಂದ ಬತ್ತಿದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿದೆ. ಇದರಿಂದ ರೈತರಲ್ಲಿ ಸಂತಸ ಮೂಡಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

7 ವರ್ಷಗಳ ಹಿಂದೆ ಕಳ್ಳತನ ಮಾಡಿದವರ ಈಗ ಅಂದರ್!

ಧಾರವಾಡ : ಜಿಲ್ಲೆಯಲ್ಲಿ ಎರಡು ಪ್ರದೇಶಗಳಲ್ಲಿ 7 ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ವ್ಯಕ್ತಿಗೆ ಇಲ್ಲಿಯ 2ನೇ ಜೆಎಂಎಫ್ ಸಿ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ನಿನಗ ಕೈ ಮುಗಿತಿನಿ ಮನೆ ಹೋಗವ್ವ ಎಂದು ಮನವಿ ಮಾಡಿಕೊಂಡ ಪೊಲೀಸರು

ನಿನಗ ನಮಸ್ಕಾರ ಯವ್ವಾ.. ವಾಪಸ್ ಹೋಗವ್ವ.. ರಾತ್ರಿ ಇಡೀ ಸೊಳ್ಳಿ ಕಡಸ್ಕೋಂತ ಇಲ್ಲೆ ಮಲಗಿನಿ.. ಮನಿಗೆ ಹೋಗಿಬಿಡವ್ವ.. ಎಂದು ಎಎಸ್ಐ ಒಬ್ರು ಅನವಶ್ಯಕವಾಗಿ ದ್ವೀಚಕ್ರ ವಾಹನದಲ್ಲಿ ಓಡುಡುತ್ತಿದ್ದ ಮಹಿಳೆಗೆ ಮಾಡಿಕೊಂಡ ಮನವಿ.