ಬೆಂಗಳೂರು: ಈಗಾಗಲೇ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಇಲಾಖೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಬೆಸ್ಕಾಂ ವಿದ್ಯುತ್ ದರ ಹೆಚ್ಚಿಗೆ ಮಾಡಲು ಮುಂದಾಗಿದ್ದು ಜನರಿಗೆ ಸಂಕಷ್ಟದ ಬರೆ ಎಳೆದಂತಾಗಿದೆ. ಜುಲೈ1, 2020 ರಿಂದ ಡಿಸೆಂಬರ್ 31, 2020ರ ವರೆಗೆ ಬಿಲ್ಲಿಂಗ್ ಅವಧಿಗೆ ನಿಗದಿಪಡಿಸಿದ ಇಂಧನ ವ್ಯತ್ಯಾಸವನ್ನು ಪ್ರತಿ ಯುನಿಟ್ ಗೆ 12 ಪೈಸೆ ಇಂಧನ ವ್ಯತ್ಯಾಸ ದರವನ್ನಾಗಿ ಪಡೆಯಲು ಬೆಸ್ಕಾಂ ಅನುಮೋದನೆ ನೀಡಿದೆ.

ಈಗಾಗಲೇ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬೆಸ್ಕಾಂ ಜನರು ಕೊರೊನಾದ ಭಯದಲ್ಲಿರುವಾಗ ವಿದ್ಯುತ್ ದರ ಹೆಚ್ಚಳವನ್ನು ಸದ್ದಿಲ್ಲದೇ ಮಾಡಲು ಮುಂದಾಗಿದೆ. ಇತ್ತಿಚೆಗಷ್ಟೆ ರಾಜ್ಯಾದ್ಯಂತ ಹೆಚ್ಚಿಗೆ ಬಿಲ್ ನೀಡುವ ಮೂಲಕ ವಿದ್ಯುತ್ ಇಲಾಖೆ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ. ಬೆಸ್ಕಾಂ ಮಾದರಿಯನ್ನೆ ಉಳಿದ ನಿಗಮಗಳು ವಿದ್ಯುತ್ ದರ ಹೆಚ್ಚಳ ಮಾಡುವ ಸಾದ್ಯತೆ ಇದ್ದು ಈ ಬಗ್ಗೆ ಜನರಿಗೆ ಆತಂಕ ನಿರ್ಮಾಣವಾಗಿದ್ದು, ಇದಕ್ಕೆ ವಿರೋಧ ಕೂಡ ವ್ಯಕ್ತವಾಗುತ್ತಿದೆ.   

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ತಾಲೂಕಿನ ವಿವಿದೆಡೆ ತಾಪಂ ಇಓ ಅವರಿಂದ ಲಸಿಕಾಕರಣದ ಮೇಲ್ವೀಚಾರಣೆ

ಕೋವಿಡ್ ಲಸಿಕೆ ಪಡೆದ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿ ಸುರಕ್ಷಿತವಾಗಿದ್ದು, ಗ್ರಾಮೀಣ ಭಾಗದ ಜನರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಲಸಿಕೆ ಪಡೆಯಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ.ಗುರಿಕಾರ ಹೇಳಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಶಾಸಕ ಎಚ್ಕೆ ಪಾಟೀಲ್ ವಿರೋಧ

ಭೂಸುಧಾರಣೆ ವಿಚಾರವಾಗಿ ಸರಕಾರ ರೈತ‌ ವಿರೋಧಿ ನಿರ್ಣಯ ಕೈಗೊಂಡಿದೆ. ಶ್ರೀಮಂತರು ಹಾಗೂ ಕಂಪನಿಯವರಿಗೆ ಭೂಮಿ ಪಡೆಯಲು ಆದ್ಯತೆ‌ ನೀಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ ವಿರೋಧ ವ್ಯಕ್ತಪಡಿಸಿದರು.

ಚೀನಾ ಟೆನ್ಷನ್: ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ದೆಹಲಿ: ಲಡಾಖ್ ನ ಗಲ್ವಾನ್ ವ್ಯಾಲಿ ಕದನದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಇಂದು ಸರ್ವಪಕ್ಷಗಳ…

ಕಾರುಗಳನ್ನು ಕದಿಯುತ್ತಿದ್ದ ಸಿನಿಮಾ ನಟನ ಬಂಧನ!

ಲಕ್ನೋ : ಸಿನಿಮಾನ ನಟನೊಬ್ಬ ತನ್ನ ಸಹಚರರೊಂದಿಗೆ ಸೇರಿಕೊಂಡು ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.