ಮುಂಡರಗಿ: ಚೀನಿ ಆಪ್ ಟಿಕ್ ಟಾಕ್ ನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಮುಂಡರಗಿಯಲ್ಲಿಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇಲ್ಲಿನ ಕೊಪ್ಪಳ ವೃತ್ತ ಬಳಿ ಜಮಾವಣೆಗೊಂಡು ಟಿಕ್ ಟಾಕ್ ಫಲಕ ಹಾಕಿದ ಚೀನಾ ಅಧ್ಯಕ್ಷರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ಪಡಿಸಲಾಯಿತು.

ಜಗತ್ತಿನಾದ್ಯಂತ ಕೊರೊನಾ ಹರಡಲು ಚೀನಾ ದೇಶವೇ ಮುಖ್ಯ ಕಾರಣ. ಆದರೆ ಇದೀಗ ಕಳೆದ ಹಲುವು ದಿನಗಳಿಂದ ಕಾಲ್ಕೆರೆದು ಭಾರತದ ಗಡಿ ದಾಟುವ ದುಸ್ಸಾಹಸ ಮಾಡುತ್ತಿದೆ. ಮಧ್ಯ ರಾತ್ರಿ ಲಡಾಕ್ ನ ಗಾಲ್ವಾನ್ ನಲ್ಲಿ  ನಡೆದ ಕಾಳಗದಲ್ಲಿ ಭಾರತೀಯ ಸೇನೆಯ ಓರ್ವ ಮುಖ್ಯಸ್ಥ ಸೇರಿದಂತೆ 20 ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಈ ನರಿ ಬುದ್ದಿಯ ಚಾಳಿಯನ್ನು ವಿರೋಧಿಸಬೇಕಿದೆ. ಈ ಕಾರಣದಿಂದ ಟಿಕ್ ಟಾಕ್ ಆಪ್ ಹಾಗೂ ಚೀನಾ ಮೂಲದ ವಸ್ತುಗಳನ್ನು ಯಾರು ಕೂಡ ಬಳಸದಿರುವ ಬಗ್ಗೆ ಜನಜಾಗೃತಿಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮುಧೋಳ್, ತಾಲೂಕು ಅಧ್ಯಕ್ಷ ರಾಮು ದೊಣ್ಣಿ, ಉಪಾಧ್ಯಕ್ಷ ಮಹಾಂತೇಶ್ ಬಳ್ಳಾರಿ, ಮಂಜುನಾಥ್ ಇಟಗಿ, ಶಿವು ನಾಡಗೌಡ್ರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ನಿಮ್ಮ ಡೇಟಾ ಇದ್ದರೆ ಕೂಡಲೇ ಸೇವ್ ಮಾಡಿಕೊಳ್ಳಿ

ಫೆ.24 ರಿಂದ ಆಚೆಗೆ ತನ್ನ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ತನ್ನ ಬಳಕೆದಾರರಿಗೆ ಇ-ಮೇಲ್ ಮುಖಾಂತರ ಈಗಾಗಲೇ ತಿಳಿಸಿದೆ.

ಸೇವಾಲಾಲ್ ದೇವಸ್ಥಾನಕ್ಕೆ ದಕ್ಕೆ

ಅರೇಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಂತ ಸೇವಾಲಾಲ್ ದೇವಸ್ಥಾನದ ಅಡಿಪಾಯವನ್ನು ಕೆಡವಿಹಾಕಿದ್ದರಿಂದ ಬಂಜಾರ ಹಾಗೂ ಇನ್ನಿತರ ಸಮುದಾಯಗಳ ನಡುವೆ ನಡೆದ ಘರ್ಷಣೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕರೆಂಟ್ ಬಳಕೆ ಬಗ್ಗೆ ಜನಜಾಗೃತಿ- ಸೌರಶಕ್ತಿ ಬಳಕೆಗೆ ಮುಂದಾಗಿ

ಆಲಮಟ್ಟಿ : ಇಡೀ ಪ್ರಪಂಚದ ಉಸಿರೇ ಕರೆಂಟ್ ಇಂಧನಗಳ ಮೇಲೆ ನಿಂತಿದೆ.ಆ ದಿಸೆಯಲ್ಲಿ ವಿದ್ಯುತ್ತಿನ ಹಿತಮಿತ…

ಮೊಟ್ಟೆ ಭಾಗ್ಯ ವಿಸ್ತರಿಸಿ ಬಜೆಟ್ ನಲ್ಲಿ ಘೋಷಿಸಿ- ಸರಕಾರಕ್ಕೆ ಆಗ್ರಹ

ಆಲಮಟ್ಟಿ : 1 ರಿಂದ 10 ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿರುವ ಕ್ಷೀರ ಭಾಗ್ಯದ ಮಾದರಿಯಲ್ಲೇ…