ಗದಗ: ಭೂಸುಧಾರಣೆ ವಿಚಾರವಾಗಿ ಸರಕಾರ ರೈತ ವಿರೋಧಿ ನಿರ್ಣಯ ಕೈಗೊಂಡಿದೆ. ಶ್ರೀಮಂತರು ಹಾಗೂ ಕಂಪನಿಯವರಿಗೆ ಭೂಮಿ ಪಡೆಯಲು ಆದ್ಯತೆ ನೀಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ ವಿರೋಧ ವ್ಯಕ್ತಪಡಿಸಿದರು.
ಈ ಕುರಿತು ಗದಗನಲ್ಲಿ ಮಾತನಾಡಿದ ಅವರು, ಉಳುವವನ ಊರುಗೋಲು ಕಿತ್ತು, ಉಳ್ಳವನಿಗೆ ನೀಡುವ ಕೃತ್ಯ ಇದಾಗಿದ್ದು, ಕಪ್ಪು ಹಣ ಆಸ್ತಿ ರೂಪದಲ್ಲಿ ಪರಿವರ್ತನೆ ಮಾಡುವದಕ್ಕೆ ಅನುಕೂಲ ಆಗುವ ರೀತಿ ಕರಾಳ ನಿರ್ಣಯ ಇದಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಸರಕಾರ ಕ್ರಾಂತಿಕಾರಕ ಕಾನೂನು ಮಾಡಿದೆ. ಸಮಾಜವಾದಿ ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಹಣವಂತರಿಗೆ ಮಣೆ ಹಾಕುವ ಕೆಲಸ ಮಾಡಿದೆ. ಹೀಗಾಗಿ ರೈತರಿಗೆ ಮಾರಕವಾಗುವ ನಿರ್ಣಯವನ್ನು ತೀವ್ರವಾಗಿ ವಿರೋಧಿಸ್ತೇನೆ ಎಂದರು.