ಗದಗ: ಭೂಸುಧಾರಣೆ ವಿಚಾರವಾಗಿ ಸರಕಾರ ರೈತ‌ ವಿರೋಧಿ ನಿರ್ಣಯ ಕೈಗೊಂಡಿದೆ. ಶ್ರೀಮಂತರು ಹಾಗೂ ಕಂಪನಿಯವರಿಗೆ ಭೂಮಿ ಪಡೆಯಲು ಆದ್ಯತೆ‌ ನೀಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ ವಿರೋಧ ವ್ಯಕ್ತಪಡಿಸಿದರು.
ಈ ಕುರಿತು ಗದಗನಲ್ಲಿ ಮಾತನಾಡಿದ ಅವರು, ಉಳುವವನ ಊರುಗೋಲು ಕಿತ್ತು, ಉಳ್ಳವನಿಗೆ ನೀಡುವ ಕೃತ್ಯ ಇದಾಗಿದ್ದು, ಕಪ್ಪು ಹಣ ಆಸ್ತಿ ರೂಪದಲ್ಲಿ ಪರಿವರ್ತನೆ ಮಾಡುವದಕ್ಕೆ ಅನುಕೂಲ ಆಗುವ ರೀತಿ ಕರಾಳ ನಿರ್ಣಯ ಇದಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಸರಕಾರ ಕ್ರಾಂತಿಕಾರಕ ಕಾನೂನು ಮಾಡಿದೆ. ಸಮಾಜವಾದಿ ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಹಣವಂತರಿಗೆ ಮಣೆ ಹಾಕುವ ಕೆಲಸ ಮಾಡಿದೆ. ಹೀಗಾಗಿ ರೈತರಿಗೆ ಮಾರಕವಾಗುವ ನಿರ್ಣಯವನ್ನು ತೀವ್ರವಾಗಿ ವಿರೋಧಿಸ್ತೇನೆ ಎಂದರು.

Leave a Reply

Your email address will not be published. Required fields are marked *

You May Also Like

ತವರು ಜಿಲ್ಲೆಯ ಆರೋಗ್ಯ ಇಲಾಖೆ ಕಾರ್ಮಿಕನಿಗೆ ನ್ಯಾಯ ವದಗಿಸುವರೆ ಸಚಿವ ಶ್ರೀರಾಮುಲು..?

ಸ್ವತಃ ತಮ್ಮ ತವರು ಜಿಲ್ಲೆಯಲ್ಲಿಯೇ ಕಾರ್ಮಿಕನೊಬ್ಬನಿಗೆ ಅದರಲ್ಲೂ ತಮ್ಮ ಇಲಾಖೆಯಲ್ಲಿಯೇ ಆದ ಅನ್ಯಾಯವನ್ನು ಆರೋಗ್ಯ ಸಚಿವ ಶ್ರೀರಾಮುಲು ಸರಿ ಪಡಿಸುತ್ತಾರಾ?

ಹೊರಗಿನಿಂದ ಬರುವ ಪ್ರತಿಯೊಬ್ಬರಿಗೂ ಕ್ವಾರಂಟೈನ್ ಕಡ್ಡಾಯ!

ಲಾಕ್ ಡೌನ್ ವಿನಾಯಿತಿ ಬೆನ್ನಲ್ಲಿಯೇ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆಗಮಿಸುವ ಎಲ್ಲರನ್ನೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದಾಗಿ ಆದೇಶಿಸಿದೆ.

ಆಹಾರ ಕಿಟ್ ಗಾಗಿ: ಶಾಸಕರ ಮನೆಗೆ ಮುತ್ತಿಗೆ

ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಿದರು. ರಾಜ್ಯದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ. ನಮಗೂ ಆಹಾರದ ಕಿಟ್ಗಳನ್ನು ಕೊಡಿ ಎಂದು ಆಗ್ರಹಿಸಿದರು.

ಜನರಿಗೆ ಆತಂಕ: ಮುಂಡರಗಿಗೆ ಕೊರೊನಾ ಕಾಟ..!

ಮುಂಡರಗಿ: ಈಗಾಗಾಗಲೇ ಕೆಲದಿನಗಳಿಂದ ಕೊರೊನಾ ಕಾಟ ಹೆಚ್ಚಾಗಿದ್ದರಿಂದ ಗದಗ ಜಿಲ್ಲೆಯ ಮುಂಡರಗಿ ಜನರಿಗೆ ಆತಂಕ ಹೆಚ್ಚಾಗುತ್ತಲೇ…