ಉತ್ತರಪ್ರಭ ಸುದ್ದಿ

ಗದಗ: ಮೆಣಿಸಗಿ ಗ್ರಾಮದಲ್ಲಿ ಹರಿಜನ ಗಿರಿಜನ ಅಭಿವೃದ್ಧಿ ವಿವಿಧ ಕಾಮಗಾರಿ ಚಾಲನೆ ನೀಡಿ ದಲಿತರ ಬದಲು ಹರಿಜನ ಎಂಬ ಅವಮಾನಕಾರಿ ಹೇಳಿಕೆ ನೀಡಿರುವ ಸಚಿವ ಸಿ ಸಿ ಪಾಟೀಲ್ ತಕ್ಷಣ ದಲಿತ ಜನತೆಯ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಾಲರಾಜ್ ಅರಬರ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿ ಸಿ ಪಾಟೀಲ್ ರು ಗದಗ ಜಿಲ್ಲೆಯ ಮೆಣಸಗಿ ಗ್ರಾಮದಲ್ಲಿ ಸುಮಾರು 22 ಕೋಟಿ ಕಾಮಗಾರಿಗೆ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹರಿಜನ ಗಿರಿಜನ ಕಾಲೋನಿಗೆ ನಾನೇ 22ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ ಎಂದವರು ಹರಿಜನ ಪದ ಬಳಕೆ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ಅಸ್ಪೃಶ್ಯತೆ ನಿಷೇಧ ಕಾಯ್ದೆ ಪ್ರಕಾರ ಹರಿ ಜನರನ್ನು “ದಲಿತ ಸಮುದಾಯದ” ಎಂದು ಕರೆಯಬಹುದಿತ್ತು ಆದರೆ ಹರಿಜನ, ಗಿರಿಜನ ಅಂದಿದ್ದು ದಲಿತ ಸಮುದಾಯಕ್ಕೆ ಕೀಳಾಗಿ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಹಣ ಮತ್ತು ಸಾರ್ವಜನಿಕರ ಮಂದಿಯ ಹಣವನ್ನು ಸಂಗ್ರಹಿಸಿದ ಹಣದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಆದ್ರೆ ಸಚಿವರು ನಾನೇ 22 ಕೋಟಿ ರೂಗಳ ಬಿಡುಗಡೆ ಮಾಡಿದ್ದೇನೆ ಎಂಬುದು ಎಷ್ಟರಮಟ್ಟಿಗೆ ಸರಿ ಸರ್ಕಾರ ಹಾಗೂ ಸಾರ್ವಜನಿಕರ ಹಣವನ್ನು ಸ್ವಂತ ಪ್ರಚಾರಕ್ಕೆ ಬಳಿಸಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ಗೋಕಾವಿ, ಮಾರುತಿ ಅಂಗಡಿ, ಅರುಣ್ ಹಿರೇಮಠ, ಪೂಜಾ ಬೇವೂರು, ಮಂಜುಳಾ ಕಲಕೇರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಅಮೃತ್ಯೋತ್ಸವ ಆಲಮಟ್ಟಿ ಕಲರೋತ್ಸವ..!

ಆಲಮಟ್ಟಿ : ರಾಷ್ಟ್ರ ಪ್ರೇಮಭಕ್ತಿ ಕಲರಮಯವಾಗಿ ಕಗ್ಗತ್ತಿನಲ್ಲಿ ರಾರಾಜಿಸುತ್ತಿದೆ. ಜಲಪರಿಸರ, ಪ್ರವಾಸಿ ತಾಣ ಖ್ಯಾತಿಯ ಆಲಮಟ್ಟಿ…

ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿತೆ ಸರ್ಕಾರ? : ‘ಅನರ್ಹ’ ವಿಶ್ವನಾಥ್ ಅರ್ಹರಾದದ್ದು ಹೇಗೆ?

ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ನಿಮ್ಮ ಅರ್ಹತೆ ಸಾಬೀತು ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅಲ್ಲಿವರೆಗೂ ಯಾವುದೇ ಪದವಿ ಪಡೆಯುವಂತಿಲ್ಲ ಎಂದಿತ್ತು ಕೂಡ.

ಮೊರಾರ್ಜಿ ವಸತಿ ಶಾಲೆಯಲ್ಲಿ 10 ವಿದ್ಯಾರ್ಥಿಗಳಿಗೆ ಕೋವಿಡ್ ಧೃಡ

ಮುಳಗುಂದ : ಇಲ್ಲಿನ ಯಳವತ್ತಿ ರಸ್ತೆಗೆ ಹೊಂದಿಕೊಂಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ವಿದ್ಯಾರ್ಥಿಗಳು…

ಲಕ್ಷ್ಮೇಶ್ವರ ಪುರಸಭೆಗೆ ಅವಿರೋಧ ಆಯ್ಕೆ: ಪೂರ್ಣಿಮಾ ಅಧ್ಯಕ್ಷೆ , ರಾಮಪ್ಪ ಉಪಾಧ್ಯಕ್ಷ

ಇಲ್ಲಿನ ಪುರಸಭೆಗೆ ಚುನಾವಣೆ ನಡೆದು 23 ತಿಂಗಳ ನಂತರ ಇಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.