ಬೆಂಗಳೂರು: ಆನ್ ಲೈನ್ ನಲ್ಲಿ ಹಣ ವಂಚನೆ, ನಕಲಿ ಐಡಿ ಬಳಸಿ ವಂಚನೆ ಇತ್ಯಾದಿ ಸುದ್ದಿಗಳಿಗೇನು ಬರವಿಲ್ಲ. ಆದರೆ, ಕೆಲವರು ಸರ್ಕಾರದ ಪರವಾಗಿ ಜನಾಭಿಪ್ರಾಯ ರೂಪಿಸಲು ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ. ಇವುಗಳ ಪೈಕಿ ಇದೀಗ Rs.5,000 ಪರಿಹಾರ ನಿಧಿ ಹೆಸರಲ್ಲಿ ಒಂದು ಸಂದೇಶ ವಾಟ್ಸ್ ಅಪ್ನಲ್ಲಿ ವೈರಲ್ ಆಗಿದೆ.

ಕರ್ನಾಟಕದಲ್ಲಿ ಕನ್ನಡದಲ್ಲೇ ಈ ಸಂದೇಶವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈಗ ಬಹುತೇಕ ಹಂಚಿಕೆಯಾಗಿರುವ ಸಂದೇಶದಲ್ಲಿ “FG ಅಂತಿಮವಾಗಿ  ಪ್ರತಿ ನಾಗರಿಕರಿಗೆ ಉಚಿತ Rs.5,000 ಪರಿಹಾರ ನಿಧಿಗಳನ್ನು ನೀಡಲು ಪ್ರಾರಂಭಿಸಿದೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಹಣವನ್ನು ಪಡೆಯಿರಿ ನನಗೆ ಈಗಾಗಲೆ ಬಂದಾಗಿದೆ”ಎಂದು ಹೇಳಲಾಗಿದ್ದು, ಇದರಲ್ಲಿ ಈ ಕೆಳಗಿನ ಲಿಂಕ್ ಅನ್ನು ನೀಡಲಾಗಿದೆ.

https://bit.ly/free-funds-for-indian ಈ ಲಿಂಕ್ ಅನ್ನು ಓಪನ್ ಮಾಡಿದರೆ, ಹತ್ತು ಟೆಂಪ್ಲೇಟ್ ಗಳು ಓಪನ್ ಆಗುತ್ತವೆ. ಇದರಲ್ಲಿ ವ್ಯಕ್ತಿಯ ಕುರಿತು ಕೆಲವು ಮಾಹಿತಿಗಳನ್ನು ಸಂಗ್ರಹಿಸಿ, ಕಡೆಗೆ ವ್ಯಕ್ತಿಗೆ ಕೊರೊನಾ ಇದೆಯೋ ಇಲ್ಲವೋ ಎಂದು ಹೇಳಲಾಗುತ್ತದೆ. ಇದೊಂದು ಕೊರೊನಾ ಕುರಿತು ಮಾಹಿತಿಯನ್ನು ನೀಡುವ ಕೆಲಸವನ್ನು ಮಾತ್ರ ಮಾಡುವ ವೆಬ್ ಸೈಟ್.

ಆದರೆ, ಇದನ್ನು ಸೆಂಡ್ ಮಾಡುತ್ತಿರುವ ವ್ಯಕ್ತಿಗಳ ಸಂದೇಶದಲ್ಲಿ “Note: ನೀವು ಒಮ್ಮೆ ಮಾತ್ರ ಕ್ಲೈಮ್ ಮಾಡಬಹುದು ಮತ್ತು ಕ್ರೆಡಿಟ್ ಪಡೆಯಬಹುದು ಮತ್ತು ಇದು ಸೀಮಿತವಾಗಿದೆ ಆದ್ದರಿಂದ ನಿಮ್ಮ ಈಗಿನ ತ್ವರಿತತೆಯನ್ನು ಪಡೆಯಿರಿ” ಎಂದು ಹೇಳಲಾಗಿದೆ. ಆದರೆ, ಇದರಿಂದ ಯಾರಿಗೂ ಹಣ ಬಂದಿಲ್ಲ. ಆದರೂ ಈ ಸಂದೇಶವನ್ನು ರಾಜ್ಯದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಏರುಗತಿಯಲ್ಲಿ ಸೋಂಕು: ಇಂದು 5436 ಪಾಸಿಟಿವ್, ಜಿಲ್ಲಾವಾರ ವಿವರ

ರಾಜ್ಯದಲ್ಲಿಂದು 5536 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 107001 ಕ್ಕೆ ಏರಿಕೆಯಾದಂತಾಗಿದೆ.

ಮಹಾಮಾರಿಗೆ ಬಾಗಲಕೋಟೆಯಲ್ಲಿ ಬಲಿ

ಬಾಗಲಕೋಟೆ: ಇಲ್ಲಿನ ನವನಗರದ 47ನೇ ಸೆಕ್ಟರ್ ನಿವಾಸಿ 50 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.…

ಗದಗನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 18ಕ್ಕೇ ಏರಿಕೆ!

ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ದೃಢವಾಗಿದೆ. ಪಿ-1307 ಕೇಸ್ ಪತ್ತೆಯಾಗಿದ್ದು 49 ವರ್ಷದ ಮಹಿಳೆ ಮುಂಬೈನಿಂದ ಇತ್ತಿಚೆಗಷ್ಟೆ ಬಂದಿದ್ದಳು ಎನ್ನಲಾಗಿದ್ದು

ಏಲಕ್ಕಿ ನಾಡಿನಲ್ಲೂ ಖಾತೆ ತೆರೆದ ಕೊರೋನಾ

ಈವರೆಗೂ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗದ ಹಿನ್ನೆಲೆ ಹಾವೇರಿ ಜಿಲ್ಲೆ ಗ್ರೀನ್ ಝೋನ್‌ನಲ್ಲಿತ್ತು. ಆದರೆ ಇದೀಗ ಹಾವೇರಿಯಲ್ಲೂ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಏಲಕ್ಕಿ ನಾಡಿನಲ್ಲಿ ಮಹಾಮಾರಿ ಕೊರೋನಾ ಖಾತೆ ತೆರೆದಿದೆ.