ಉಡುಪಿ: ಊರಿಗೆ ಕರೆಸಲು ಒತ್ತಾಯ ಬರುವುದು ಸಹಜ. ಇದರಿಂದ ಜನರು ರಾಜಕಾರಣಿಗಳಿಗೆ ಬಯ್ಯೋದು ಕೂಡ ಸಹಜವೇ. ಮುಂಬೈನಲ್ಲಿ ಇರುವವರು ನಮ್ಮ ಸಹೋದರರೇ ಆದರೆ ಇನ್ನು ಮುಂದೆ ಕೋವಿಡ್ ಜೀವನದ ಒಂದು ಭಾಗವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿದರು.
ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು, ಹೊರರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ. ಕ್ವಾರಂಟೈನ್ ಒಪ್ಪಿ ಬರುವವರು ಮಾತ್ರ ವಿಮಾನದಲ್ಲಿ ಬರುತ್ತಾರೆ. ಊರಿಗೆ ಕರೆಸಿಕೊಳ್ಳಲು ಮುಂಬೈ ಕನ್ನಡಿಗರ ಒತ್ತಡ ಸಹಜವಾಗಿಯೇ ಇದೆ. ಮುಂದಿನ ದಿನಗಳಲ್ಲಿ ಒಂದಿಷ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಸಮಸ್ಯೆ ಎದುರಿಸಲು ಸರಕಾರ ಸಂಪೂರ್ಣ ಸಜ್ಜಾಗಿದೆ ಎಂದು ಹೇಳಿದರು.