ಗದಗ: ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಎಷ್ಟೆ ಕಷ್ಟ ಬಂದ್ರು ಬಲ್ದೋಟ ಹುನ್ನಾರ ಫಲಿಸಲು ಬಿಡುವುದಿಲ್ಲ ಎಂದು ಸಮಾಜ ಪರಿವರ್ತನಾ ಸಂಘಟನೆಯ ಎಸ್.ಆರ್.ಹಿರೇಮಠ ಹೇಳಿದರು.
ಕಪ್ಪತ್ತಗುಡ್ಡದ ವಿಚಾರವಾಗಿ ಗದಗನಲ್ಲಿ ಮಾತನಾಡಿದ ಅವರು, ಜೈವಿಕ ಸಂಪನ್ಮೂಲ ರಕ್ಷಣೆಯ ಕಾರ್ಯ ದೊಡ್ಡ ಮಟ್ಟದಲ್ಲಾಗಬೇಕಾಗಿದೆ.
ಹೀಗಾಗಿ ಇದೀಗ ಕಪ್ಪತ್ತಗುಡ್ಡಕ್ಕೆ ಆಪತ್ತು ಬರುವ ಆತಂಕ ಎದುರಾಗಿದ್ದು ತಾತ್ವಿಕ ಹಂತದೆಡೆಗೆ ಹೋಗಬೇಕಾದ್ರೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ‌.
ಸಂದರ್ಭ ಬಂದರೆ ಹೋರಾಟಕ್ಕೆ ಅಣಿಯಾಗುವ ನಿಟ್ಟಿನಲ್ಲಿ ನಾವು ಪುನಶ್ವೇತನಗೊಳ್ಳಬೇಕಿದೆ.
ಪಟ್ಟಬದ್ಧ ಹಿತಾಸಕ್ತರು ಪಕೃತಿ ಮಾತೆ ಮೇಲೆ ಮಾಡ್ತಿರೋ ಅಪರಾಧಕ್ಕೆ ತಕ್ಕ ಉತ್ತರ ನೀಡಬೇಕಿದೆ.
ಇತಿಹಾಸ ನಮಗೆ ಪಾಠ ಕಲಿಸುತ್ತದೆ. ಹೀಗಾಗಿ ಇಂದು ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಇತಿಹಾಸ ಅರಿತು ನಾವು ಮುಂದಾಗಬೇಕಿದೆ ಎಂದರು.
ಯಾವುದೇ ಸರ್ಕಾರ ಬಂದರೂ ಒತ್ತಡ ಹೇರಿ ಸಮಯ ಸಾಧನೆಗೆ ಬಲ್ದೋಟ ಮುಂದಾಗುತ್ತದೆ.
ಇದೀಗ ಮತ್ತೆ ಗಣಿಗಾರಿಕೆಗೆ ಹುನ್ನಾರ ಆರಂಭಿಸಿದೆ ಎನ್ನಲಾಗಿದ್ದು ಪ್ರಕೃತಿ ಮಾತೆಯ ಸ್ವಾತಂತ್ರ ಕಾಪಾಡಲು ಸತತ ಜಾಗೃತರಾಗಿರಬೇಕಾಗಿದೆ ಎಂದರು.

ಜನರನ್ನು ಮನೆಯಲ್ಲಿರಿಸಿ ಹುನ್ನಾರ

ಇದೇ ವೇಳೆ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ,
ಜನರು ಕೊರೋನಾ ಆತಂಕದಲ್ಲಿರುವಾಗ ಜನರನ್ನು ಮನೆಯಲ್ಲಿರಿಸಿ ಕಪ್ಪತ್ತಗುಡ್ಡ ಕಬಳಿಸಲು ಬಲ್ದೋಟಾ ಮುಂದಾಗಿದೆ. ಇದಕ್ಕೆ ಸರ್ಕಾರ ಪೂರಕವಾಗಿ ವರ್ತಿಸುತ್ತಿದೆಯಾ? ಎನ್ನುವ ಸಂದೇಹ ಮೂಡಿದೆ.
ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ನಾವು ಬಿಡುವುದಿಲ್ಲ.
ಬೆಂಗಳೂರಿನಲ್ಲಿ ಸಭೆ ನಡೆದಾಗಲೇ ಇತ್ತ ಗದಗ ಜಿಲ್ಲೆಯಲ್ಲಿ ಉದ್ದೇಶಿತ ಕೈಗಾರಿಕಾ ಸ್ಥಳಕ್ಕೆ ಬಲ್ದೋಟಾ ಕಂಪನಿ ಅಧಿಕಾರಿಗಳು ಭೇಟಿ ನೀಡಲು ಕಾರಣವೇನು?
ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅನ್ಯಾಯವಾದಾಗ ಕಪ್ಪತ್ತಗುಡ್ಡದ ಹೋರಾಟದ ಪರವಾಗಿ ಬಂದವರೆ ಈಗ ಅಧಿಕಾರದಲ್ಲಿದ್ದಾರೆ. ಆದರೆ ಇದೀಗ ಅವರೆ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಅವಕಾಶ ಮಾಡಿಕೊಡುತ್ತಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ ಎಂದರು.
ಈ ವೇಳೆ ತೋಂಟದ ಸಿದ್ಧರಾಮ ಶ್ರೀಗಳು, ಅಮರೇಶ್ ಅಂಗಡಿ, ಎಮ್.ಸಿ.ಐಲಿ, ಚಂದ್ರಕಾಂತ ಚೌವ್ಹಾಣ್, ಕರ್ಲಟ್ಟಿ, ಎನ್.ಟಿ.ಪೂಜಾರ, ದಾನಪ್ಪ ತಡಸದ, ಚಟ್ಟಿ ವಕೀಲರು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಕಳಸಾ-ಬಂಡೂರಿ: ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ: ಹಣಕಾಸು ಅನುಮೋದನೆ ಯಾವಾಗ?

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಮಹದಾಯಿ‌ ನದಿಗೆ ಅಣೆಕಟ್ಟುನಿರ್ಮಿಸಿ ಕೂಡು ಕಾಲುವೆ ಮುಖಾಂತರ 1.72 ಟಿ ಎಂ ಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಲಪ್ರಭಾ ನದಿಗೆತಿರುಗಿಸುವ ಕಳಸಾ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ನಾಡಬಾಂಬ್‌ ; ಹಸುವಿನ ಬಾಯಿ ಛಿದ್ರ

ಜಮೀನಿನಲ್ಲಿ ಮೇಯುತ್ತಿದ್ದ ಸೀಮೆ ಹಸುವೊಂದು ನಾಡಬಾಂಬ್‌ ಜಿಗಿದ ಪರಿಣಾಮ ಅದರ ಬಾಯಿ ಛಿದ್ರಗೊಂಡಿರುವ ಘಟನೆ ತಾಲ್ಲೂಕಿನ ಕೆಬ್ಬಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಉಡುಪಿಯಲ್ಲಿ ಸೈನಿಕ – ಪೊಲೀಸ್ ಮದ್ಯೆ ಜಟಾಪಟಿ

ಪೊಲೀಸರೊಂದಿಗೆ ಸೈನಿಕರು ಜಟಾಪಟಿ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಇಲ್ಲಿನ ಏನ್.ಸಿ.ಸಿ ಮೈದಾನದಲ್ಲಿ ಸೈನಿಕರ ಜೊತೆ ಪೊಲೀಸರು ಜಟಾಪಟಿ ನಡೆಸಿದ್ದಾರೆ.

ಮೊಟ್ಟೆ ಭಾಗ್ಯ ವಿಸ್ತರಿಸಿ ಬಜೆಟ್ ನಲ್ಲಿ ಘೋಷಿಸಿ- ಸರಕಾರಕ್ಕೆ ಆಗ್ರಹ

ಆಲಮಟ್ಟಿ : 1 ರಿಂದ 10 ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿರುವ ಕ್ಷೀರ ಭಾಗ್ಯದ ಮಾದರಿಯಲ್ಲೇ…