ಶಿರಹಟ್ಟಿ: ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಬೆಂಗಳೂರು, ತಾಲೂಕ ಘಟಕ ಶಿರಹಟ್ಟಿ ಹಾಗೂ ಬಂಜಾರ ನೌಕರರ ಸಂಘ ಶಿರಹಟ್ಟಿ ವತಿಯಿಂದ ಬಂಜಾರ ಚರಿತ್ರೆ ಹಾಗೂ ಬಂಜಾರ ಚಿಂತನ ಕಾರ್ಯಕ್ರಮ ಶ್ರೀ ಸಿ.ಎಸ್ ಲಮಾಣಿ ಇವರ ಮಹಾಮನೆಯಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಸಂತ ಸೇವಾಲಾಲರ ವಿಚಾರಧಾರೆಗಳನ್ನು ಕುರಿತು ಡಬಾಲಿ ಪಿ.ಯು ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿದರು. ಬಂಜಾರ ಸಮಾಜದ ಏಳಿಗೆಗೆ ಹಾಗೂ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಸಂತ ಸೇವಾಲಾಲರು ಸ್ಮರಣೀಯರಾಗಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣ ಅತ್ಯವಶ್ಯಕವಾಗಿ ಬೇಕೇ ಬೇಕು. ಅಕ್ಷರ ಜ್ಞಾನ ಪಡೆದ ವ್ಯಕ್ತಿ ಮತ್ತೊಬ್ಬರ ಕಲಿಕೆಗೆ ಪ್ರೇರಣೆಯಾಗಬೇಕು. ಇದರಿಂದ ಮಾತ್ರ ಮನುಕುಲದ ಸರ್ವ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಇಡೀ ಮಾನವ ಕುಲ ಒಂದೇ ಎನ್ನುವ ಸಮಾನತೆಯ ದೃಷ್ಟಿಕೋನದಲ್ಲಿ ಸಹೋದರತ್ವ ಮನೋಭಾವನೆಯಿಂದ ಪರಸ್ಪರ ಬಾಂಧವ್ಯದಿಂದ ಬದುಕಬೇಕು ಹಾಗೂ ಸಚ್ಚರಿತ್ರೆ ವಂತರಾಗಿ ಸಮಾಜಕ್ಕೆ ಮಾದರಿಯಾಗಿರಬೇಕು ಎನ್ನುವ ಸಂತ ಸೇವಾಲಾಲರ ಚಿಂತನೆಗಳನ್ನು ಕುರಿತು ಉಪನ್ಯಾಸ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಂಜಾರ ಸಮಾಜದ ತಾಲೂಕ ಅಧ್ಯಕ್ಷರಾಗಿರುವ ಶ್ರೀ ಎಂ.ಕೆ ಲಮಾಣಿ ಅವರು ಮಾತನಾಡುತ್ತಾ ಬದಲಾದ ಕಾಲಘಟ್ಟದಲ್ಲಿ ಲಂಬಾಣಿ ಜನಾಂಗ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದುವ ಅವಶ್ಯಕತೆ ಇದೆ. ಅದಕ್ಕಾಗಿ ಇಂತಹ ಬಂಜಾರ ಚಿಂತನ ಕಾರ್ಯಕ್ರಮಗಳು ಈ ಜನಾಂಗದ ಏಳಿಗೆಯನ್ನು ಮಾಡುವಲ್ಲಿ ಜಾಗೃತಿಯನ್ನು ಉಂಟು ಮಾಡುತ್ತವೆ. ಸಂತ ಸೇವಾಲಾಲರು ಇಡೀ ಮಾನವ ಜನಾಂಗಕ್ಕೆ ಮಾದರಿಯಾಗಿ ಭವಿಷ್ಯವಾಣಿಯನ್ನು ಸಹ ನುಡಿದಿರುವುದು ಅವರ ದಿವ್ಯ ತೆಗೆ ಸಾಕ್ಷಿಯಾಗಿದೆ ಎಂದು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕೆ ಎ.ಬಳಿಗೇರ್ ಅವರು ಮಾತನಾಡುತ್ತಾ ಗುರು ಹಿರಿಯರನ್ನು ಗೌರವಿಸುವುದು ಹಿಂದಿನಿಂದಲೂ ಬಂದಂತಹ ಪೂಜನೀಯ ಭಾವನೆಯಾಗಿದ್ದು ಇಂದಿನ ಯುವ ಪೀಳಿಗೆ ಸಂತ ಸೇವಾಲಾಲರ ನೀಡಿರುವ ಆದರ್ಶಗಳನ್ನು ತತ್ವಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಹಾದಿಯಲ್ಲಿ ಸಾಗಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯರಾದ, ಡಬಾಲಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಎನ್ ಆರ್ ಕುಲಕರ್ಣಿಯವರು ಮಾತನಾಡುತ್ತಾ ಬಂಜಾರ ಸಮುದಾಯವು ಹಿಂದಿಗಿಂತಲೂ ಇಂದು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದಿವೆ. ಸಂತ ಸೇವಾಲಾಲ್ ಅವರ ಅಪಾರ ಪರಿಶ್ರಮದಿಂದ ಈ ಜನಾಂಗವನ್ನು ಶಿಕ್ಷಣದ ಮೂಲಕ ಸುಧಾರಣೆ ಕಾಣಲು ತಮ್ಮದೇ ಆದ ಚಿಂತನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇಂತಹ ಮಹನೀಯರು ನುಡಿದಿರುವ ಭವಿಷ್ಯ ವಾಣಿ ಜೀವನದ ಪಂಚಸೂತ್ರಗಳು ಪ್ರತಿಯೊಬ್ಬರ ಬದುಕಿನಲ್ಲೂ ಅನ್ವಯಿಸುತ್ತವೆ ಎಂದು ಮಾತನಾಡಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ವೆಂಕಟೇಶ ಅರ್ಕಸಾಲಿ ಅವರು ನಿರೂಪಿಸಿದರು. ಮೋಹನ್ ಮಾಂಡ್ರೆ ಸ್ವಾಗತಿಸಿದರು, ಎಸ್ ಎಸ್ ಲಮಾಣಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಬಿ ಎಸ್ ಹಿರೇಮಠ, ಗುರುರಾಜ ಸರ್ಜಾಪುರ, ಡಾ. ವೆಂಕಟೇಶ್ ರಾಥೋಡ, ವಿ.ಎಂ ಲಮಾಣಿ ಎಚ್ಎಮ್ ದೇವಗಿರಿ, ಎಂ ಎ ಮಕಾಂದಾರ್, ಪಲ್ಲೆದ, ಬಡ ಬೀಮಪ್ಪ ನವರ, ಸುನಿಲ್ ಲಮಾಣಿ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ

ಕೊರೋನಾ ಸೊಂಕಿಗೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ರಾಜ್ಯ-ದೇಶ-ರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಅಪ್ಡೇಟ್ ಮಾಹಿತಿ..

ಹಳ್ಳಿ ಹಕ್ಕಿಯನ್ನು ತಬ್ಬಲಿ ಮಾಡಿತೆ ಬಿಜೆಪಿ..?

ಬೆಂಗಳೂರು: ಮೇಲ್ಮನೆಗೆ ನಡೆಯುವ ಚುನಾವಣೆಗೆ ಬಿಜೆಪಿ ತಡರಾತ್ರಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇಂದು ನಾಲ್ವರು…

ಪಿಯುಸಿ2: ಗದಗ ಜಿಲ್ಲಾ ಮಟ್ಟದ ರ‌್ಯಾಂಕ್ ವಿವರ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 9532 ವಿದ್ಯಾರ್ಥಿಗಳು ಹಾಜರಾಗಿದ್ದು ಆ ಪೈಕಿ 6005 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಳೆದ ವರ್ಷ ಜಿಲ್ಲೆಯ ಪರೀಕ್ಷಾ ಫಲಿತಾಂಶ ಶೇ. 57.76 ರಷ್ಟಾಗಿ ಜಿಲ್ಲೆಯು 26 ನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯು ಶೇ. 63 ರಷ್ಟು ಫಲಿತಾಂಶ ಪಡೆಯುವ ಮೂಲಕ 22 ನೇ ಸ್ಥಾನ ಪಡೆದುಕೊಂಡಿದೆ.

ನಿಗದಿತ ದಿನಾಂಕದಂದೇ ನಡೆಯಲಿದೆ ಎಸ್ಎಸ್ಎಲ್ಸಿ ಪರೀಕ್ಷೆ: ಸುಪ್ರೀಂ ಹಸಿರು ನಿಶಾನೆ

ದೆಹಲಿ/ಬೆಂಗಳೂರು: ಜೂ. 25 ರಿಂದ ಜುಲೈ 4ರವರೆಗೆ ರಾಜ್ಯದಲ್ಲಿ SSLC ಪರೀಕ್ಷೆ ನಿಗದಿಯಂತೆ ನಡೆಯಲಿದೆ. ಕೊರೋನಾ…