ಗದಗ: ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಎಷ್ಟೆ ಕಷ್ಟ ಬಂದ್ರು ಬಲ್ದೋಟ ಹುನ್ನಾರ ಫಲಿಸಲು ಬಿಡುವುದಿಲ್ಲ ಎಂದು ಸಮಾಜ ಪರಿವರ್ತನಾ ಸಂಘಟನೆಯ ಎಸ್.ಆರ್.ಹಿರೇಮಠ ಹೇಳಿದರು.
ಕಪ್ಪತ್ತಗುಡ್ಡದ ವಿಚಾರವಾಗಿ ಗದಗನಲ್ಲಿ ಮಾತನಾಡಿದ ಅವರು, ಜೈವಿಕ ಸಂಪನ್ಮೂಲ ರಕ್ಷಣೆಯ ಕಾರ್ಯ ದೊಡ್ಡ ಮಟ್ಟದಲ್ಲಾಗಬೇಕಾಗಿದೆ.
ಹೀಗಾಗಿ ಇದೀಗ ಕಪ್ಪತ್ತಗುಡ್ಡಕ್ಕೆ ಆಪತ್ತು ಬರುವ ಆತಂಕ ಎದುರಾಗಿದ್ದು ತಾತ್ವಿಕ ಹಂತದೆಡೆಗೆ ಹೋಗಬೇಕಾದ್ರೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ‌.
ಸಂದರ್ಭ ಬಂದರೆ ಹೋರಾಟಕ್ಕೆ ಅಣಿಯಾಗುವ ನಿಟ್ಟಿನಲ್ಲಿ ನಾವು ಪುನಶ್ವೇತನಗೊಳ್ಳಬೇಕಿದೆ.
ಪಟ್ಟಬದ್ಧ ಹಿತಾಸಕ್ತರು ಪಕೃತಿ ಮಾತೆ ಮೇಲೆ ಮಾಡ್ತಿರೋ ಅಪರಾಧಕ್ಕೆ ತಕ್ಕ ಉತ್ತರ ನೀಡಬೇಕಿದೆ.
ಇತಿಹಾಸ ನಮಗೆ ಪಾಠ ಕಲಿಸುತ್ತದೆ. ಹೀಗಾಗಿ ಇಂದು ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಇತಿಹಾಸ ಅರಿತು ನಾವು ಮುಂದಾಗಬೇಕಿದೆ ಎಂದರು.
ಯಾವುದೇ ಸರ್ಕಾರ ಬಂದರೂ ಒತ್ತಡ ಹೇರಿ ಸಮಯ ಸಾಧನೆಗೆ ಬಲ್ದೋಟ ಮುಂದಾಗುತ್ತದೆ.
ಇದೀಗ ಮತ್ತೆ ಗಣಿಗಾರಿಕೆಗೆ ಹುನ್ನಾರ ಆರಂಭಿಸಿದೆ ಎನ್ನಲಾಗಿದ್ದು ಪ್ರಕೃತಿ ಮಾತೆಯ ಸ್ವಾತಂತ್ರ ಕಾಪಾಡಲು ಸತತ ಜಾಗೃತರಾಗಿರಬೇಕಾಗಿದೆ ಎಂದರು.

ಜನರನ್ನು ಮನೆಯಲ್ಲಿರಿಸಿ ಹುನ್ನಾರ

ಇದೇ ವೇಳೆ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ,
ಜನರು ಕೊರೋನಾ ಆತಂಕದಲ್ಲಿರುವಾಗ ಜನರನ್ನು ಮನೆಯಲ್ಲಿರಿಸಿ ಕಪ್ಪತ್ತಗುಡ್ಡ ಕಬಳಿಸಲು ಬಲ್ದೋಟಾ ಮುಂದಾಗಿದೆ. ಇದಕ್ಕೆ ಸರ್ಕಾರ ಪೂರಕವಾಗಿ ವರ್ತಿಸುತ್ತಿದೆಯಾ? ಎನ್ನುವ ಸಂದೇಹ ಮೂಡಿದೆ.
ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ನಾವು ಬಿಡುವುದಿಲ್ಲ.
ಬೆಂಗಳೂರಿನಲ್ಲಿ ಸಭೆ ನಡೆದಾಗಲೇ ಇತ್ತ ಗದಗ ಜಿಲ್ಲೆಯಲ್ಲಿ ಉದ್ದೇಶಿತ ಕೈಗಾರಿಕಾ ಸ್ಥಳಕ್ಕೆ ಬಲ್ದೋಟಾ ಕಂಪನಿ ಅಧಿಕಾರಿಗಳು ಭೇಟಿ ನೀಡಲು ಕಾರಣವೇನು?
ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅನ್ಯಾಯವಾದಾಗ ಕಪ್ಪತ್ತಗುಡ್ಡದ ಹೋರಾಟದ ಪರವಾಗಿ ಬಂದವರೆ ಈಗ ಅಧಿಕಾರದಲ್ಲಿದ್ದಾರೆ. ಆದರೆ ಇದೀಗ ಅವರೆ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಅವಕಾಶ ಮಾಡಿಕೊಡುತ್ತಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ ಎಂದರು.
ಈ ವೇಳೆ ತೋಂಟದ ಸಿದ್ಧರಾಮ ಶ್ರೀಗಳು, ಅಮರೇಶ್ ಅಂಗಡಿ, ಎಮ್.ಸಿ.ಐಲಿ, ಚಂದ್ರಕಾಂತ ಚೌವ್ಹಾಣ್, ಕರ್ಲಟ್ಟಿ, ಎನ್.ಟಿ.ಪೂಜಾರ, ದಾನಪ್ಪ ತಡಸದ, ಚಟ್ಟಿ ವಕೀಲರು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಆಸ್ಪತ್ರೆಗಳ ಯಾವ ಸೌಲಭ್ಯವಿರಬೇಕು? : ಸೋಂಕಿತರು ಹಾಗು ಕುಟುಂಬಸ್ಥರಿಗೆ ನೀಡಬೇಕಾದ ಮಾಹಿತಿ ಇಲ್ಲಿದೆ…

ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸೂಚಿಸಿದರು.

ಹುಲಕೋಟಿ ಬಳಿ ಕಾರು-ಲಾರಿ ಡಿಕ್ಕಿ

ಕಾರ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಸಮೀಪದ ಹುಲಕೋಟಿ ಹೊರವಲಯದ ರೂರಲ್ ಇಂಜನಿಯರಿಂಗ್ ಕಾಲೇಜ್ ಬಳಿ ಘಟನೆ ನಡೆದಿದೆ.

ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಅಹಾರ ವಿತರಣೆ

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಹಾಗೂ ದೊಡ್ಡೂರ ಸೂರಣಗಿ ಕೊಂಚಿಗೇರಿ ಸೇರಿ ಗ್ರಾಮೀಣ ಪ್ರದೇಶದಲ್ಲಿ ತೆರಳಿ ಸಿದ್ದಪಡಿಸಿದ ಆಹಾರದ ಬಾಕ್ಸ್ ವಿತರಿಸಿದರು.

ಇಂದು ದ್ವಿತಿಯ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿಗಳೆಷ್ಟು..?

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ಯಶಸ್ವಿಯಾಗಿ ನಡೆದಿದೆ. 5,95,997…