ಗದಗ: ಬಣವಿಗೆ ಸಿಡಿಲು ಬಡಿದ ಪರಿಣಾಮ ಮೂರು ಬಣವಿಗಳು ಸಂಪೂರ್ಣ ಭಸ್ಮಗೊಂಡ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಯಲ್ಲಪ್ಪ ತಳವಾರ ಅವರಿಗೆ ಸೇರಿದ ಬಣವಿ ಸಿಡಿಲಿಗೆ ಆಹುತಿಯಾಗಿವೆ. ಶೇಂಗಾ,ಬತ್ತ,ಜೋಳದ ಮೂರು ಬಣವಿಗಳು ಅಂದಾಜು 80,000 ಮೌಲ್ಯದ್ದಾಗಿವೆ. ದನಕರುಗಳಿಗಾಗಿ ತನ್ನ ಜಮೀನಿನಲ್ಲಿ ಸಂಗ್ರಹಿಸಿಟ್ಟ ಮೇವಿನ ಬಣವಿಗೆ ಬೆಂಕಿ ಬಿದ್ದದ್ದು ರೈತನನ್ನು ಸಂಕಷ್ಟಕ್ಕೀಡು ಮಾಡಿದೆ. ವರ್ಷ ಪೂರ್ತಿ ದನಕರುಗಳಿಗೆ ಏನು ಮಾಡಬೇಕು. ಬರದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿ ಮೇವು ಖರೀದಿ ಕೂಡ ರೈತನಿಗೆ ಅಸಾಧ್ಯವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಗಾದ ಹಾನಿಗೆ ಪರಿಹಾರ ನೀಡಲು ರೈತ ಯಲ್ಲಪ್ಪ ತಳವಾರ ಒತ್ತಾಯಿಸಿದ್ದಾರೆ.
1 comment
ನಿಮ್ಮ ಎಲ್ಲಾ ಸುದ್ದಿಗಳೂ ಉತ್ತಮವಾಗಿ ಪ್ರಸಾರವಾಗುತ್ತಿವೆ ಸರ್…. ಹೀಗೇ ಸಾಗಲಿ….
ಇನ್ನಷ್ಟು ಸಾಧಿಸಲಿ…..
ಶುಭವಾಗಲಿ….