ಬೆಂಗಳೂರು: ಈಗಾಗಲೇ ಕೇಂದ್ರ ಸರ್ಕಾರ ಲಾಕ್ ಡೌನ್ 4 ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೆ ಇಂದು ಸಂಪುಟ ಸಭೆ ಕರೆದ ಸಿಎಂ ಹಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗಿ ನಾಳೆಯಿಂದ ರಾಜ್ಯದಲ್ಲಿ ಏನೆಲ್ಲ ಆರಂಭವಾಗಲಿವೆ ಇನ್ನುವ ಹೈಲೇಟ್ಸ್ ಈ ಕೆಳಗೆ ನೀಡಲಾಗಿದೆ.

ನಾಳೆಯಿಂದ ರಾಜ್ಯದಲ್ಲಿ ಏನಿರುತ್ತೆ? – ಏನಿರಲ್ಲ..?

  • ನಾಳೆಯಿಂದ ರಾಜ್ಯದೊಳಗೆ ಬಸ್ ಸಂಚಾರಕ್ಕೆ ಅವಕಾಶ
  • ಅಂತಾರಾಜ್ಯ ಬಸ್ ಓಡಾಟಕ್ಕೆ ಅವಕಾಶ ಇಲ್ಲ
  • ಬಿಎಂಟಿಸಿ ಬಸ್ ಓಡಾಟದ ಬಗ್ಗೆ ಇನ್ನು ಗೊಂದಲ
  • ಬಿಎಂಟಿಸಿ ಬಸ್ ಸಂಚಾರದ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತವಾಗಿಲ್ಲ
  • ಮೇ 31 ರ ವರೆಗೆ ಲಾಕ್ ಡೌನ್ ಮುಂದುವರಿಕೆ
  • ಕಂಟೈನ್ ಮೆಂಟ್ ಝೋನ್ ನಲ್ಲಿ ಕಟ್ಟುನಿಟ್ಟಿನ ಕ್ರಮ
  • ಖಾಸಗಿ ಬಸ್ ಗಳ ಓಡಾಟಕ್ಕೂ ಅವಕಾಶ
  • ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
  • ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ
  • ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿಯಿಂದ ಮಾಸ್ಕ್ ಧರಿಸದವರಿಗೆ ದಂಡ
  • ಆಟೋ, ಟ್ಯಾಕ್ಸಿ ಓಡಾಟಕ್ಕೆ ಅವಕಾಶ
  • ಆಟೋಗಳಲ್ಲಿ ಚಾಲಕರು ಬಿಟ್ಟು ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ
  • ಮಾಲ್, ಸಿನಿಮಾ ಬಿಟ್ಟು ಎಲ್ಲಾ ಚಟುವಟಿಕೆ ಅವಕಾಶ
  • ರಾಜ್ಯದೊಳಗೆ ರೈಲು ಓಡಾಟಕ್ಕೆ ಅವಕಾಶ
  • ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್
  • ಪಾರ್ಕ್ ಗಳಲ್ಲಿ ವಾಯುವಿಹಾರಕ್ಕೆ ಅವಕಾಶ
  • ಬೆಳಗ್ಗೆ 7 ರಿಂದ 9, ಸಂಜೆ 5 ರಿಂದ 7 ಪಾರ್ಕ್ ವಾಯುವಿಹಾರಕ್ಕೆ ಅವಕಾಶ
  • ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿ ಎಲ್ಲಾ ರೀತಿಯ ಪಾರ್ಕ್ ಗಳು ಓಪನ್
  • ಬಸ್ ಪ್ರಯಾಣ ದರ ಹೆಚ್ಚಳ ಇಲ್ಲ
  • ಮಹಾರಾಷ್ಟ್ರ, ಕೇರಳ, ಗುಜರಾತ್, ತಮಿಳುನಾಡಿನಿಂದ ಈಗಾಗಲೇ ಟಿಕೆಟ್ ಬುಕ್ ಆಗಿರುವವರು ಬರಬಹುದು..
  • ರಾತ್ರಿ 7 ರಿಂದ ಬೆಳಗ್ಗೆ 7 ರ ವರೆಗೆ ಸಂಪೂರ್ಣ ಬಂದ್
  • ಕ್ರೀಡಾ ಚಟುವಟಿಕೆಗೆ ಅವಕಾಶ
  • ಬಸ್ ಆಟೋಗಳು ಕಡ್ಡಾಯ ನಿಯಮಗಳನ್ನು ಪಾಲನೆ ಮಾಡಬೇಕು
  • ಜಿಮ್ ಗಳಿಗಿಲ್ಲ ಅನುಮತಿ
  • ವಿವಾಹ ಸಮಾರಂಭಕ್ಕೆ ಷರತ್ತು ಬದ್ಧ ಅನುಮತಿ
  • ಕಂಟೈನ್ ಮೆಂಟ್ ಝೋನ್ ನಲ್ಲಿ ನಿಯಮ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಕೇಸ್
  • ಬೀದಿ ಬದಿ ವ್ಯಾಪಾರಕ್ಕೆ ಅವಕಾಶ
  • ಹೊರ ರಾಜ್ಯಗಳಿಗೆ ಹೋಗುವವರಿಗೆ ಯಾವುದೇ ನಿರ್ಬಂಧ ಇಲ್ಲ
  • ಹೊರ ರಾಜ್ಯದಿಂದ ಬಂದವರಿಗೆ 14 ದಿನ ಸಾಂಸ್ಥಿಕ ಕೊರಂಟೈನ್ ಕಡ್ಡಾಯ
  • ಮೆಟ್ರೋ ಸಂಚಾರ ಮೇ.31 ರವರೆಗೆ ಇರೋದಿಲ್ಲ
  • ಭಾನುವಾರ ಮದ್ಯ ಮಾರಾಟ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್
  • ಆಟೋ, ಓಲಾ, ಊಬರ್, ಟ್ಯಾಕ್ಸಿಗಳು ರಾಜ್ಯಾದ್ಯಂತ ಸಂಚಾರ ಮಾಡಬಹುದು
  • ಡೆಂಟಲ್ ಕ್ಲಿನಿಕ್ ಆರಂಭಕ್ಕೂ ಅನುಮತಿ ನೀಡಿದ್ದೇವೆ
  • ಎಲ್ಲಾ ಜಿಲ್ಲೆಗಳಿಂದ ಬೆಂಗಳೂರಿಗೆ ಬರೋದಕ್ಕೆ ಬಸ್ ವ್ಯವಸ್ಥೆ
Leave a Reply

Your email address will not be published. Required fields are marked *

You May Also Like

ರಷ್ಯಾ ಪ್ರಧಾನಿಯನ್ನೂ ಬಿಡಲಿಲ್ಲ ಕೊರೊನಾ!

ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೂ ಕೊರೊನಾ ಮಹಾಮಾರಿ ಬೆನ್ನು ಹತ್ತಿದೆ ಎಂದು ತಿಳಿದು ಬಂದಿದೆ.

ಗದಗ ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ಆರ್ಭಟ

ಗದಗ:ಭಾನುವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,05,325 ಮಾದರಿ ಸಂಗ್ರಹಿಸಿದ್ದು, 6,78,688 ನಕಾರಾತ್ಮಕವಾಗಿವೆ. ಶನಿವಾರದ 117 ಪ್ರಕರಣ…

ಮೋಹನ್ ಲಿಂಬಿಕಾಯಿ ಅವ್ರಿಗೆ ಆಸಕ್ತಿ ಇದ್ರೆ ಕಾರಕೂನಕಿ ಜವಾಬ್ದಾರಿ ಕೊಡ್ತಾರಂತೆ ದಿಂಗಾಲೇಶ್ವರ ಶ್ರೀಗಳು!

ಹುಬ್ಬಳ್ಳಿ: ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ಧವಾಗಿದೆ. ದಿಂಗಾಲೇಶ್ವರ ಶ್ರೀಗಳಿಗೆ ಯಾವತ್ತು…

ಅಕ್ರಮ ಅಕ್ಕಿ ಸಂಗ್ರಹ ಗೋಡೌನ್ ಮೇಲೆ ದಾಳಿ

ಗದಗ: ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ…