ಬೆಂಗಳೂರು: ಈಗಾಗಲೇ ಕೇಂದ್ರ ಸರ್ಕಾರ ಲಾಕ್ ಡೌನ್ 4 ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೆ ಇಂದು ಸಂಪುಟ ಸಭೆ ಕರೆದ ಸಿಎಂ ಹಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗಿ ನಾಳೆಯಿಂದ ರಾಜ್ಯದಲ್ಲಿ ಏನೆಲ್ಲ ಆರಂಭವಾಗಲಿವೆ ಇನ್ನುವ ಹೈಲೇಟ್ಸ್ ಈ ಕೆಳಗೆ ನೀಡಲಾಗಿದೆ.
ನಾಳೆಯಿಂದ ರಾಜ್ಯದಲ್ಲಿ ಏನಿರುತ್ತೆ? – ಏನಿರಲ್ಲ..?
- ನಾಳೆಯಿಂದ ರಾಜ್ಯದೊಳಗೆ ಬಸ್ ಸಂಚಾರಕ್ಕೆ ಅವಕಾಶ
- ಅಂತಾರಾಜ್ಯ ಬಸ್ ಓಡಾಟಕ್ಕೆ ಅವಕಾಶ ಇಲ್ಲ
- ಬಿಎಂಟಿಸಿ ಬಸ್ ಓಡಾಟದ ಬಗ್ಗೆ ಇನ್ನು ಗೊಂದಲ
- ಬಿಎಂಟಿಸಿ ಬಸ್ ಸಂಚಾರದ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತವಾಗಿಲ್ಲ
- ಮೇ 31 ರ ವರೆಗೆ ಲಾಕ್ ಡೌನ್ ಮುಂದುವರಿಕೆ
- ಕಂಟೈನ್ ಮೆಂಟ್ ಝೋನ್ ನಲ್ಲಿ ಕಟ್ಟುನಿಟ್ಟಿನ ಕ್ರಮ
- ಖಾಸಗಿ ಬಸ್ ಗಳ ಓಡಾಟಕ್ಕೂ ಅವಕಾಶ
- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
- ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ
- ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿಯಿಂದ ಮಾಸ್ಕ್ ಧರಿಸದವರಿಗೆ ದಂಡ
- ಆಟೋ, ಟ್ಯಾಕ್ಸಿ ಓಡಾಟಕ್ಕೆ ಅವಕಾಶ
- ಆಟೋಗಳಲ್ಲಿ ಚಾಲಕರು ಬಿಟ್ಟು ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ
- ಮಾಲ್, ಸಿನಿಮಾ ಬಿಟ್ಟು ಎಲ್ಲಾ ಚಟುವಟಿಕೆ ಅವಕಾಶ
- ರಾಜ್ಯದೊಳಗೆ ರೈಲು ಓಡಾಟಕ್ಕೆ ಅವಕಾಶ
- ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್
- ಪಾರ್ಕ್ ಗಳಲ್ಲಿ ವಾಯುವಿಹಾರಕ್ಕೆ ಅವಕಾಶ
- ಬೆಳಗ್ಗೆ 7 ರಿಂದ 9, ಸಂಜೆ 5 ರಿಂದ 7 ಪಾರ್ಕ್ ವಾಯುವಿಹಾರಕ್ಕೆ ಅವಕಾಶ
- ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿ ಎಲ್ಲಾ ರೀತಿಯ ಪಾರ್ಕ್ ಗಳು ಓಪನ್
- ಬಸ್ ಪ್ರಯಾಣ ದರ ಹೆಚ್ಚಳ ಇಲ್ಲ
- ಮಹಾರಾಷ್ಟ್ರ, ಕೇರಳ, ಗುಜರಾತ್, ತಮಿಳುನಾಡಿನಿಂದ ಈಗಾಗಲೇ ಟಿಕೆಟ್ ಬುಕ್ ಆಗಿರುವವರು ಬರಬಹುದು..
- ರಾತ್ರಿ 7 ರಿಂದ ಬೆಳಗ್ಗೆ 7 ರ ವರೆಗೆ ಸಂಪೂರ್ಣ ಬಂದ್
- ಕ್ರೀಡಾ ಚಟುವಟಿಕೆಗೆ ಅವಕಾಶ
- ಬಸ್ ಆಟೋಗಳು ಕಡ್ಡಾಯ ನಿಯಮಗಳನ್ನು ಪಾಲನೆ ಮಾಡಬೇಕು
- ಜಿಮ್ ಗಳಿಗಿಲ್ಲ ಅನುಮತಿ
- ವಿವಾಹ ಸಮಾರಂಭಕ್ಕೆ ಷರತ್ತು ಬದ್ಧ ಅನುಮತಿ
- ಕಂಟೈನ್ ಮೆಂಟ್ ಝೋನ್ ನಲ್ಲಿ ನಿಯಮ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಕೇಸ್
- ಬೀದಿ ಬದಿ ವ್ಯಾಪಾರಕ್ಕೆ ಅವಕಾಶ
- ಹೊರ ರಾಜ್ಯಗಳಿಗೆ ಹೋಗುವವರಿಗೆ ಯಾವುದೇ ನಿರ್ಬಂಧ ಇಲ್ಲ
- ಹೊರ ರಾಜ್ಯದಿಂದ ಬಂದವರಿಗೆ 14 ದಿನ ಸಾಂಸ್ಥಿಕ ಕೊರಂಟೈನ್ ಕಡ್ಡಾಯ
- ಮೆಟ್ರೋ ಸಂಚಾರ ಮೇ.31 ರವರೆಗೆ ಇರೋದಿಲ್ಲ
- ಭಾನುವಾರ ಮದ್ಯ ಮಾರಾಟ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್
- ಆಟೋ, ಓಲಾ, ಊಬರ್, ಟ್ಯಾಕ್ಸಿಗಳು ರಾಜ್ಯಾದ್ಯಂತ ಸಂಚಾರ ಮಾಡಬಹುದು
- ಡೆಂಟಲ್ ಕ್ಲಿನಿಕ್ ಆರಂಭಕ್ಕೂ ಅನುಮತಿ ನೀಡಿದ್ದೇವೆ
- ಎಲ್ಲಾ ಜಿಲ್ಲೆಗಳಿಂದ ಬೆಂಗಳೂರಿಗೆ ಬರೋದಕ್ಕೆ ಬಸ್ ವ್ಯವಸ್ಥೆ