ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್ ಸಂಚಾರ ಆರಂಭವಾಗುವ ಸಾದ್ಯತೆ ಇದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆದಿದೆ.
ಕೆಎಸ್ ಆರ್ ಟಿಸಿ, ಎನ್ ಡಬ್ಲುಕೆಎಸ್ ಆರ್ ಟಿಸಿ ಹಾಗೂ ಈಶಾನ್ಯ ಸಾರಿಗೆಯ ಜೊತೆಗೆ ಬಿಎಂಟಿಸಿ ಬಸ್ ಗಳು ನಾಳೆಯಿಂದಲೇ ಕಾರ್ಯಾರಂಭ ವಾಗಬಹುದು ಎನ್ನಲಾಗಿದೆ. ಆದರೆ ಕೊರೋನಾ ಸೋಂಕಿನ ಕಾರಣ ಕೆಲವು ನಿಯಮಗಳನ್ನು ರೂಪಿಸಿ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಈ ಕುರಿತು ನಿಗಮಗಳು ಮಾರ್ಗೂಸೂಚಿಗಳನ್ನು ಸಿದ್ಧಪಡಿಸಿಕೊಂಡಿವೆ.
ಕೆಲವು ನಿಯಮಗಳು
- ಒಂದು ಬಸ್ ನಲ್ಲಿ 20 ಜನರಿಗೆ ಮಾತ್ರ ಅವಕಾಶ.
- ತ್ರಿಬಲ್ ಸೀಟ್ ನಲ್ಲಿ ಇಬ್ಬರಿಗೆ ಹಾಗೂ ಡಬಲ್ ಸೀಟ್ ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ
- ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಯಲಿದೆ.
- ಅನಾರೋಗ್ಯ ಪೀಡಿತರಾಗಿದ್ದರೆ ಅಂತಹವರಿಗೆ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.
- ಮಾರ್ಗ ಮಧ್ಯೆ ಯಾವುದೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ ಹಾಗೂ ಇಳಿಸುವಂತಿಲ್ಲ.
- ನಿಗಧಿತ ನಿಲ್ದಾಣಗಳಲ್ಲಿ ಮಾತ್ರ ಬಸ್ ಗಳನ್ನು ನಿಲ್ಲಿಸುವಂತಹದ್ದು.
- ಕಡ್ಡಾಯವಾಗಿ ಮಾಸ್ಕ್ ಹಾಗೂ ಗ್ಲೊಸ್ ಗಳನ್ನು ಬಳಸಲು ಸೂಚನೆ
- ಸಾಮಾಜಿಕ ಅಂತರಕ್ಕೆ ಹೆಚ್ಚಿನ ಆದ್ಯತೆ. ಹಾಗೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ.
1 comment
A big relief n hope