ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ ಎಂದು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಸಿಳಿದರು.
ಕೊರೊನಾ ಸೋಂಕಿಗೆ ಹೊಸ ಚಿಕಿತ್ಸೆಯಾಗಿರುವ ಪ್ಲಾಸ್ಮಾಥೆರಪಿ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದೊಂದು ಹೊಸ ಚಿಕಿತ್ಸೆಯಾಗಿದೆ. ಕೊರೊನ ಪಾಸಿಟಿವ್ ಆಗಿ ಅದರಿಂದ ಗುಣಮುಖರಾಗಿರುವವರಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಕೊರೊನ ಸೋಂಕಿರುವ ವ್ಯಕ್ತಿಗೆ ಚಿಕಿತ್ಸೆ ಮಾಡುವ ವಿಧಾನ ಇದಾಗಿದೆ.

ಬೆಂಗಳೂರಿನ 5 ಜನ ದಾನಿಗಳಿಂದ ಪ್ಲಾಸ್ಮಾ ಪಡೆದುಕೊಳ್ಳಲಾಗಿದೆ. ಈ ಚಿಕಿತ್ಸೆ ಮಾಡುವ ವೇಳೆ ಚಿಕಿತ್ಸೆಗೊಳಗಾಗುವ ರೋಗಿಯ ಒಪ್ಪಿಗೆ ಪಡೆದುಕೊಂಡು ಚಿಕಿತ್ಸೆ ಮಾಡಬೇಕಾಗಿದೆ ಎಂದು ಹೇಳಿದರು.

ಆಂದ್ರಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನ ಪಾಸಿಟಿವ್ ನೊಂದಿಗೆ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದರು. ವೈದ್ಯರು ಇವರಿಗೆ ಕೊನೆಯ ಕ್ಷಣದಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಗಾಗಿ ಇವರಿಂದ ಅನುಮತಿ ಪಡೆದು ಚಿಕಿತ್ಸೆ ಕೈಗೊಂಡರು. ಚಿಕಿತ್ಸೆಯಿಂದ ಚೇತರಿಕೆಯನ್ನು ಕಂಡರು. ದುರಾದೃಷ್ಟ ವಶಾತ್ ಆ ವ್ಯಕ್ತಿ ಹೃದಯಾಘಾತದಿಂದ ಮೃತಪದ್ದಾರೆ. ಅವರು ಮೃತಪಟ್ಟಿರುವುದು ಪ್ಲಾಸ್ಮಾ ಥೆರಪಿಯ ವೈಫಲ್ಯವಲ್ಲ. ಇದು ಪ್ಲಾಸ್ಮಾ ಥೆರಪಿಯ ಸೋಲಲ್ಲ. ಪ್ಲಾಸ್ಮಾ ಥೆರಪಿಯ ಬಗ್ಗೆ ಕೆಲವು ಚಿಕಿತ್ಸೆಗಳಾದ ಬಳಿಕ ಅದರ ಮೇಲೆ ನಾವು ತೀರ್ಪುಕೊಡಬೇಕು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ನೀರಾವರಿ ಹೆಚ್ಚಿನ ಅನುದಾನಕ್ಕೆ ಆಗ್ರಹ ಬೇಡಿಕೆ ಈಡೇರಿಕೆಗಾಗಿ ಉರುಳು ಸೇವೆ

ಆಲಮಟ್ಟಿ; ಜಿಲ್ಲೆಯ ನೀರಾವರಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ…

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ಲಾಡ್ಜ್‌, ಬಾರ್‌ ಹಾಗೂ ಕ್ಲಬ್‌ಗಳಲ್ಲಿ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.

ರಾಜ್ಯದಲ್ಲಿ ಏರುಗತಿಯಲ್ಲಿ ಸೋಂಕು: ಇಂದು 5436 ಪಾಸಿಟಿವ್, ಜಿಲ್ಲಾವಾರ ವಿವರ

ರಾಜ್ಯದಲ್ಲಿಂದು 5536 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 107001 ಕ್ಕೆ ಏರಿಕೆಯಾದಂತಾಗಿದೆ.

ಕೊರೊನಾ ತಂದ ಸಂಕಷ್ಟ – ಉದ್ಯೋಗಸ್ಥರಲ್ಲಿ ಮನೆ ಮಾಡುತ್ತಿದೆ ಒತ್ತಡ!

ನವದೆಹಲಿ : ಕೊರೊನಾ ಹಾವಳಿಯಿಂದ ಇಡೀ ಜಗತ್ತೇ ಇಂದು ಆತಂಕದಲ್ಲಿ ಕಾಲ ಕಳೆಯುತ್ತಿದೆ. ಇದು ಉದ್ಯೋಗದ ಮೇಲೆಯೂ ಪರಿಣಾಮ ಬೀರಿದೆ. ಇದರಿಂದಾಗಿ ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.