ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ ಎಂದು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಸಿಳಿದರು.
ಕೊರೊನಾ ಸೋಂಕಿಗೆ ಹೊಸ ಚಿಕಿತ್ಸೆಯಾಗಿರುವ ಪ್ಲಾಸ್ಮಾಥೆರಪಿ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದೊಂದು ಹೊಸ ಚಿಕಿತ್ಸೆಯಾಗಿದೆ. ಕೊರೊನ ಪಾಸಿಟಿವ್ ಆಗಿ ಅದರಿಂದ ಗುಣಮುಖರಾಗಿರುವವರಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಕೊರೊನ ಸೋಂಕಿರುವ ವ್ಯಕ್ತಿಗೆ ಚಿಕಿತ್ಸೆ ಮಾಡುವ ವಿಧಾನ ಇದಾಗಿದೆ.

ಬೆಂಗಳೂರಿನ 5 ಜನ ದಾನಿಗಳಿಂದ ಪ್ಲಾಸ್ಮಾ ಪಡೆದುಕೊಳ್ಳಲಾಗಿದೆ. ಈ ಚಿಕಿತ್ಸೆ ಮಾಡುವ ವೇಳೆ ಚಿಕಿತ್ಸೆಗೊಳಗಾಗುವ ರೋಗಿಯ ಒಪ್ಪಿಗೆ ಪಡೆದುಕೊಂಡು ಚಿಕಿತ್ಸೆ ಮಾಡಬೇಕಾಗಿದೆ ಎಂದು ಹೇಳಿದರು.

ಆಂದ್ರಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನ ಪಾಸಿಟಿವ್ ನೊಂದಿಗೆ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದರು. ವೈದ್ಯರು ಇವರಿಗೆ ಕೊನೆಯ ಕ್ಷಣದಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಗಾಗಿ ಇವರಿಂದ ಅನುಮತಿ ಪಡೆದು ಚಿಕಿತ್ಸೆ ಕೈಗೊಂಡರು. ಚಿಕಿತ್ಸೆಯಿಂದ ಚೇತರಿಕೆಯನ್ನು ಕಂಡರು. ದುರಾದೃಷ್ಟ ವಶಾತ್ ಆ ವ್ಯಕ್ತಿ ಹೃದಯಾಘಾತದಿಂದ ಮೃತಪದ್ದಾರೆ. ಅವರು ಮೃತಪಟ್ಟಿರುವುದು ಪ್ಲಾಸ್ಮಾ ಥೆರಪಿಯ ವೈಫಲ್ಯವಲ್ಲ. ಇದು ಪ್ಲಾಸ್ಮಾ ಥೆರಪಿಯ ಸೋಲಲ್ಲ. ಪ್ಲಾಸ್ಮಾ ಥೆರಪಿಯ ಬಗ್ಗೆ ಕೆಲವು ಚಿಕಿತ್ಸೆಗಳಾದ ಬಳಿಕ ಅದರ ಮೇಲೆ ನಾವು ತೀರ್ಪುಕೊಡಬೇಕು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಗೆ ಶೇ.40 ರಷ್ಟು ಮಳೆಯ ಕೊರತೆ!: ಬಿತ್ತನೆಯಾಗಿದ್ದು ಶೇ.47 ರಷ್ಟು ಮಾತ್ರ!

ಗದಗ: ಜಿಲ್ಲೆಯಲ್ಲಿ ಈಗಾಗಲೇ ಕೆಲವೆಡೆ ಉತ್ತಮ ಮಳೆಯಾಗಿದ್ದು ಇನ್ನು ಕೆಲವು ಭಾಗದಲ್ಲಿ ಮಳೆಯ ದರ್ಶನವಾಗಿಲ್ಲ. ಮಳೆ…

ಶಾಲೆ ತೆರೆಯದಂತೆ ಪೋಷಕರು, ಶಿಕ್ಷಕರ ಒತ್ತಾಯ!

ದೆಹಲಿಯಲ್ಲಿ ಕೊರೊನಾ ಆತಂಕ ಮೂಡಿಸಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳನ್ನೇ ತೆರೆಯುವುದೇ ಬೇಡ ಎಂದು ಶಿಕ್ಷಕರು ಮತ್ತು ಪೋಷಕರು ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯಕ್ಕೆ ಸಚಿವ ನಿತಿನ್ ಗಡ್ಕರಿ ಸಲಹೆ

ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಪಾಪುಗಳನ್ನು ಬಿಡದ ಪಾಪಿ ಕೊರೊನಾ..!: ಗದಗ, ನರಗುಂದ, ರೋಣ ತಾಲೂಕಿನಲ್ಲಿ ಸೋಂಕು ದೃಢ

ಗದಗ: ಜಿಲ್ಲೆಯ ನರಗುಂದ ಗಾಡಿ ಓಣಿ ನಿವಾಸಿ 39 ವರ್ಷದ ಪುರುಷ (ಪಿ-15320) ಸೋಂಕಿತರ ಸಂಪರ್ಕದಿಂದಾಗಿ…