ಆಂದ್ರಪ್ರದೇಶ: ಲಾಕ್ ಡೌನ್ ಹಿನ್ನೆಲೆ ಎಲ್ಲ ದೇವಸ್ಥಾನಗಳು ಬಂದ್ ಆಗಿದ್ದವು. ಇದರಿಂದ ಭಕ್ತರಿಗೆ ಒಂದು ಚಿಂತೆಯಾದರೆ, ದೇವಾಲಯಗಳನ್ನು ನಂಬಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿದ್ದವು. ಆದರೆ ಇದೀಗ ದೇವಸ್ಥಾನ ಆರಂಭಕ್ಕೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಹೀಗಾಗಿ ತಿರುಪತಿಯ ತಿಮ್ಮಪ್ಪನ ದರ್ಶನ ಆರಂಭವಾಗಿದೆ.
ಎರಡು ತಿಂಗಳ ನಂತರ ಭಕ್ತರಿಗೆ ತಿಮ್ಮಪ್ಪನ ದರ್ಶನ ಆರಂಭವಾಗಿದ್ದು ಕರೋನಾ ಭೀತಿ ಹಿನ್ನೆಲೆ ಮಾರ್ಚ್ 19 ರಂದು ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಭಕ್ತರ ದರ್ಶನವನ್ನು ಟಿಟಿಡಿ ಆಡಳಿತ ಮಂಡಳಿ ರದ್ದು ಮಾಡಿತ್ತು. ಸುಮಾರು ಎರಡು ತಿಂಗಳ ಕಾಲ ದೇವಾಲಯದಲ್ಲಿ ದೇವರ ಸೇವೆ, ಪೂಜೆ ಕಾರ್ಯಕ್ರಮಗಳನ್ನು ಏಕಾಂತದಲ್ಲಿ ನಡೆಸಲಾಗುತ್ತಿತ್ತು. ಇಂದಿನಿಂದ ಸ್ಥಳೀಯರಿಗೆ ಮಾತ್ರ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಹೊರರಾಜ್ಯಗಳು ಹಾಗೂ ಆಂಧ್ರದ ಹೊರ ಜಿಲ್ಲೆಗಳ ಜನರಿಗೆ ನಿಷೇಧ ಮಾಡಲಾಗಿದೆ. ಪ್ರತಿದಿನ 7 ಸಾವಿರ ಜನರಿಗೆ ಮಾತ್ರ ತಿಮ್ಮಪ್ಪನ ದರ್ಶನ ಭಾಗ್ಯ ಸಿಗಲಿದೆ.

Leave a Reply

Your email address will not be published. Required fields are marked *

You May Also Like

ನರೆಗಲ್ ಗಾರ್ಡನ್ ಕಥೆ: ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ?

ಗದಗ: ಪಟ್ಟಣ ಪಂಚಾಯತಿ ಕಾಂಪೌಂಡ್ ಪಕ್ಕದಲ್ಲಿಯೇ ಉದ್ಯಾನವನ ಇದ್ದರು. ಸಹ ಇಲ್ಲಿನ ಮುಖ್ಯಾಧಿಕಾರಿ , ಸಿಬ್ಬಂದಿಗಳ…

ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದಂತೆ ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯುತ್ತಿದ್ದಾರೆ : ಕಟೀಲ್

ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದ ರೀತಿಯಲ್ಲಿ, ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ. ಸಂಕಷ್ಟದ ಈ ಸಂದರ್ಭದಲ್ಲಿ ರಾಜಕೀಯ ಮಾಡುವ ಹೇಯ ಕೃತ್ಯ ಸಿದ್ದರಾಮಯ್ಯ ನಡೆಸಿದ್ದಾರೆ.

ಈ ವರ್ಷ ಮುಂಗಾರು ಮಳೆ ರಾಜ್ಯವನ್ನು ಯಾವಾಗ ಪ್ರವೇಶಿಸಲಿದೆ ಗೊತ್ತಾ?

ನೈರುತ್ಯ ಮುಂಗಾರು ಮಳೆ ಜೂ. 1ಕ್ಕೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರೊನಾ ಅಲೆಯ ಮಧ್ಯೆ ರಾಜಕೀಯ ಅಲೆಯ ಅಬ್ಬರ

ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳ ವರೆಗೂ ಎಚ್ಚರಿಕೆ ಗಂಟೆಯನ್ನು ಬಾರಿಸಿರುವ ಕರೊನಾ ಎರಡನೆಯ ಅಲೆಯು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆಯಾದರೂ ಫಂಗಸ್‌ನ (ಶಿಲೀಂಧ್ರ) ಕಾಟ ಮಾತ್ರ ಮುಂದುವರಿಯುತ್ತಲೇ ಇದೆ. ಸದ್ಯ ಲಭ್ಯವಿರುವ ಲಿಪೊಸೊಮಲ್ ಆಂಪೊಟೆರಿಸಿನ್ ಬಿ ಔಷಧವನ್ನು ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾದವರಿಗೆ ನೀಡಲಾಗುತ್ತಿದೆ.