ಬಾಲಿವುಡ್ ಖ್ಯಾತ ನಟ ಹಾಗೂ ಬಿಗ್ ಬಿ  ಅಮಿತಾಬ್ ಬಚ್ಚನ್ ಅವರ ಮನೆಯಿಂದಲೇ ಪ್ರೊಮೊ ವಿಡಿಯೊವನ್ನು ಚಿತ್ರೀಕರಿಸಲಾಗಿದ್ದು ಅದನ್ನು ಡಿಜಿಟಲ್ ಮೂಲಕ ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಚಿತ್ರೀಕರಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇದ್ಯಾವ ಚಿತ್ರಕರಣ ಅಂತ ಕುತೂಹಲಾನಾ?

ಹೌದು ಇದು ಕೌನ್ ಬನೇಗಾ ಕರೋಡ ಪತಿ ಎನ್ನುವ ಕಿರುತೆರೆಯ ರಿಯಾಲಿಟಿ ಶೋ ಮತ್ತೆ ಆರಂಭವಾಗುವ ಸೂಚನೆ. ಅಮಿತಾಭ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗ ಕರೋಡ್​ ಪತಿ ಕಿರುತೆರೆಯ ಕಾರ್ಯಕ್ರಮ 12ನೇ ಕಂತಿಗೆ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ಕೌನ್ ಬನೇಗಾ ಕರೋಡಪತಿ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಚಿತ್ರೀಕರಣ ಡಿಜಿಟಲೀಕರಣ ಮೂಲಕ ನಡೆಯಲಿದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದವರನ್ನು ಎರಡನೇ ಹಂತದಲ್ಲಿ ಟೆಲಿಫೋನ್ ಮೂಲಕ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಮೂರನೇ ಹಂತದ ಪ್ರಕ್ರಿಯೆ ಆನ್ ಲೈನ್ ಆಡಿಷನ್ ಮೂಲಕ ನಡೆಯಲಿದೆ. ಅಂತಿಮ ಸುತ್ತು ವೈಯಕ್ತಿಕ ಸಂದರ್ಶನವಾಗಿರಲಿದೆ, ಅದನ್ನು ವಿಡಿಯೊ ಕಾಲ್ ಮೂಲಕ ನಡೆಸಲಾಗುತ್ತದೆ.ಇಡೀ ಆಯ್ಕೆ ಪ್ರಕ್ರಿಯೆಯನ್ನು ಸ್ವತಂತ್ರ ಆಡಿಟ್ ಕೇಂದ್ರ ತಪಾಸಣೆ ಮಾಡಲಿದೆ.

ಸೋನಿ ಎಂಟರ್ಟೈನ್ ಮೆಂಟ್ ಟೆಲಿವಿಷನ್ ನಲ್ಲಿ ಮೇ 9ರಿಂದ ಮೇ 22ರವರೆಗೆ  ಸ್ಪರ್ಧಿಗಳ ದಾಖಲಾತಿ ನಡೆಯಲಿದೆ. ಪ್ರತಿದಿನ ರಾತ್ರಿ ಅಮಿತಾಬ್ ಬಚ್ಚನ್ ಸೋನಿ ಟಿವಿಯಲ್ಲಿ ಪ್ರಶ್ನೆಗಳನ್ನು ಕೇಳಲಿದ್ದು ವೀಕ್ಷಕರು ಎಸ್ ಎಂಎಸ್ ಅಥವಾ ಸೋನಿ ಲೈವ್ ಮೂಲಕ ಉತ್ತರಿಸಲಿದ್ದಾರೆ.

Leave a Reply

Your email address will not be published. Required fields are marked *

You May Also Like

NEET 2021 :ವೈದ್ಯಕೀಯ ಕಾಲೇಜು ಪ್ರವೇಶ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಒಂದು ತಿಂಗಳ ವಿಳಂಭ ಸಾಧ್ಯತೆ !

ಉತ್ತರಪ್ರಭ ಸುದ್ದಿ ದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2021 ಫಲಿತಾಂಶವನ್ನು ಘೋಷಿಸಿದ…

ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ

ಉತ್ತರಪ್ರಭ ಗದಗ: ಅತಿಥಿ ಉಪನ್ಯಾಸಕರ ಖಾಯಂ ಮತ್ತು ಸೇವಾ  ಭದ್ರತೆಗಾಗಿ  ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ…

ನಿಖಿಲ್ ಕುಮಾರಸ್ವಾಮಿ ವಿವಾಹ: ಪಾಸ್ ನೀಡಿದ ವಾಹನಗಳ ವಿವರಣೆ ಕೇಳಿದ ಕೋರ್ಟ್..!

ದೇಶಾದ್ಯಂತ ಲಾಕ್ ಡೌನ್ ಮದ್ಯೆಯೂ ನಟ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ಇತ್ತಿಚೆಗಷ್ಟೆ ನಡೆದಿತ್ತು. ವಿವಾಹ ಸಂದರ್ಭದಲ್ಲಿ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಪ್ರಬುದ್ಧ ಜಾಣತನದ ನಿಲುವು ಪ್ರಕಟಿಸಲು ಪ್ರಧಾನಿಗೆ ಪತ್ರ

ಲಾಕ್ ಡೌನ್ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಮುಖಂಡ ಟಿ.ಈಶ್ವರ ಬಹಿರಂಗ ಪತ್ರ ಬರೆದಿದ್ದಾರೆ.