ನವದೆಹಲಿ : ಬುದ್ಧಿವಂತಿಕೆಯಿಂದ ಲಾಕ್ ಡೌನ್ ತೆರೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆರ್ಥಿಕ ತಜ್ಞ ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ. ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಲಾಕ್ ಡೌನ್ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಬುದ್ಧಿವಂತಿಕೆಯಿಂದ ಲಾಕ್ ಡೌನ್ ತೆರವುಗೊಳಿಸಬೇಕು.

ಈವಗಾಗಲೆ ದೇಶದ ಆರ್ಥಿಕ ಸ್ಥಿತಿ, ಮತ್ತಿತರ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಡಿಯೋ ಮೂಲಕ ಮಾತುಕತೆ ನಡೆಸುತ್ತಿದ್ದಾರೆ. ಈ ವಿಡಿಯೋ ಸರಣಿಯಲ್ಲಿ ಮೊದಲ ಅತಿಥಿಯಾಗಿ ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮಾತನಾಡಿದ್ದಾರೆ. ಬಡವರ ಹೊಟ್ಟೆ ತುಂಬಿಸಲು ದೇಶಕ್ಕೆ ರೂ.65 ಸಾವಿರ ಕೋಟಿ ಅಗತ್ಯವಿದೆ. ಜಿಡಿಪಿ ರೂ. 200 ಲಕ್ಷ ಕೋಟಿಯಾಗಿರುವುದರಿಂದ ಭಾರತ ಅದನ್ನು ಭರಿಸಬಲ್ಲದು. ದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಇಂತಹ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ ಅತ್ಯಂತ ಮುಖ್ಯವಾಗಿದೆ. ಸವಾಲುಗಳು ದೊಡ್ಡದಾದಾಗ ಮನೆಗಳನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಡವರಿಗೆ ಡಿಬಿಟಿ, ಮನ್ರೇಗಾ, ವಯೋವೃದ್ಧರಿಗೆ ಪಿಂಚಣಿ ಹಾಗೂ ಪಿಡಿಎಸ್ ಮೂಲಕ ಹಣ ನೀಡಿ ಬೆಂಬಲಿಸಬೇಕಿದೆ. ಪ್ರಸ್ತತ ಬಡವರ ಹಸಿವು ನೀಗಿಸುವಲ್ಲಿ ದೇಶದ ಸಾಮರ್ಥ್ಯ ಕಡಿಮೆಯಿದ್ದು, ಇಂತಹ ಸಂದರ್ಭದಲ್ಲಿ ಭಾರತ ಅತ್ಯಂದ ಬುದ್ಧಿವಂತಿಕೆಯಿಂದ ಲಾಕ್ ಡೌನ್ ತೆರೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ಸ್ವೀಕಾರ!

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.ಪ್ರತಿಜ್ಞಾ ದಿನ…

ಜುಲೈನಲ್ಲಿ ಪಿಯುಸಿ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಜುಲೈನಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹಾಗೂ…

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್: ಫಿಲ್ಡಿಗಿಳಿದ ಡಿವೈಎಸ್ಪಿ

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್: ಫಿಲ್ಡಿಗಿಳಿದ ಡಿವೈಎಸ್ಪಿ ಗದಗ: ಕೊರೊನಾ ನಿಯಂತ್ರಣ ಹಿನ್ನೆಲೆ ಐದು‌ ದಿನಗಳ ಕಾಲ ಗದಗ ಜಿಲ್ಲೆಯಲ್ಲಿ ಕಠೀಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಶುಕ್ರವಾರ ವಿನಾಕಾರಣ ರಸ್ತೆಗಿಳಿದವರ ಬೈಕ್ ಸೀಜ್ ಮಾಡಲಾಯಿತು. ಸ್ವತ: ಡಿವೈಎಸ್ಪಿ ಫಿಲ್ಡಿಗಿಳಿದು ಬೈಕ್ ಸವಾರರಿಗೆ ತರಾಟೆಗೆ ತೆಗೆದುಕೊಂಡ ದೃಷ್ಯಗಳು ಕಂಡು ಬಂದವು. ರಿಪೋರ್ಟರ್ ಎಂದು ಸುಳ್ಳು ಹೇಳಿದ ವ್ಯಕ್ತಿ, ನಕಲಿ‌ ಪತ್ರಕರ್ತ ಎಂದು ತಿಳಿದ ತಕ್ಷಣ ಬೈಕ್ ವಶಕ್ಕೆ ಪಡೆಯಲಾಯಿತು.