ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಮಾ.23 ರಿಂದ ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಿತ್ತು. ಈಗಾಗಲೇ ಮಾರ್ಚ್ ಹಾಗೂ ಏಪ್ರೀಲ್ ತಿಂಗಳ ಸಂಬಳ ನೀಡಲಾಗಿದೆ. ಆದರೆ ಮೇ ತಿಂಗಳ ಸಂಬಳವೇ ಸಿಬ್ಬಂಧಿಗಳಲ್ಲಿ ಆತಂಕ ಮೂಡಿಸಿದೆ. ಮೇ.18, 2020 ರ ಸಂಬಳವನ್ನು ಮಾತ್ರ ಪರಿಗಣಿಸಿದ್ದು, ಬಾಕಿ ಉಳಿದ ದಿನಗಳ ಸಂಬಳದ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕರು ಆದೇಶಿಸಿದ್ದಾರೆ.

ಆದೇಶದಲ್ಲಿ ಏನಿದೆ..?

  • ದಿನಾಂಕ 18-05-2020 ರಿಂದ ಸಂಸ್ಥೆಯ ವಾಹನ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದರಿಂದ ಈ ದಿನಾಂಕದಿಂದ ವಾಸ್ತವಿಕ ಹಾಜರಾತಿಗನುಗುಣವಾಗಿ ಮೇ.2020ರ ಮಾಹೆಯ ವೇತನಕ್ಕೆ ಪರಿಗಣಿಸುವುದು.
  • ದಿನಾಂಕ 01-05-2020 ರಿಂದ ದಿನಾಂಕ 17-05-2020ರ ವರೆಗಿನ ಅವಧಿಗೆ ಸರ್ಕಾರವೂ ಮುಂದೇ ತೆಗೆದುಕೊಳ್ಳಬಹುದಾದ ತೀರ್ಮಾನಕ್ಕೆ ಒಳಪಟ್ಟಂತೆ ಎಲ್ಲ ಅರ್ಹ ನೌಕರರಿಗೆ ಮೇ.2020ರ ಮಾಹೆಯ ವೇತನಕ್ಕೆ ಪರಿಗಣಿಸುವುದು.
  • ದಿನಾಂಕ 29-02-2020ರ ಪೂರ್ವದಲ್ಲಿ ದಿರ್ಘಾವಧಿ ಗೈರು ಹಾಜರಿಯಲ್ಲಿದ್ದು, ದಿನಾಂಕ 17-05-2020ರ ನಂತರ ಮೇ.2020ರ ಮಾಹೆಯಲ್ಲಿ ಕರ್ತವ್ಯಕ್ಕೆ ಹಾಜರಾದಲ್ಲಿ ಹಾಜರಾದ ನಂತರ ವಾಸ್ತವಿಕ ಹಾಜರಾತಿಗನುಗುಣವಾಗಿ ಮೇ.2020ರ ಮಾಹೆಯ ವೇತನಕ್ಕೆ ಪರಿಗಣಿಸುವುದು.
  • ಮಾರ್ಚ್ 2020ರ ಮಾಹೆಯಲ್ಲಿ ಕೆಲವು ದಿನಗಳ ಕಾಲ ಕರ್ತವ್ಯ ನಿರ್ವಹಿಸಿ ದಿನಾಂಕ 23-03-2020ರಂದು ಇದ್ದಂತೆ ಏಳು ದಿನಗಳಿಗೆ ಮೀರದಂತೆ ದಿರ್ಘಕಾಲದ ಗೈರು ಹಾಜರಿಯಲ್ಲಿಯೇ ಉಳಿದು ದಿನಾಂಕ 18-05-2020ರಿಂದ ದಿನಾಂಕ 31-05-2020ರ ವರೆಗಿನ ಅವಧಿಯಲ್ಲಿಯೂ ಸಹ ಗೈರು ಹಾಜರಿಯಲ್ಲಿ ಮುಂದುವರೆದರೆ ಇಂತಹ ಪ್ರಕರಣಗಳಲ್ಲಿ ಮೇ.2020ರ ಮಾಹೆಯ ವೇತನಕ್ಕೆ ಪರಿಗಣಿಸುವಂತಿಲ್ಲ. ಆದರೆ ದಿನಾಂಕ 18-05-2020 ರಿಂದ 31-05-2020ರ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾದಲ್ಲಿ ದಿನಾಂಕ 01-05-2020 ರಿಂದ ದಿನಾಂಕ 17-05-2020ರ ವರೆಗಿನ ಅವಧಿಗೆ ಮೇಲ್ಕಂಡ ಕ್ರಮ ಸಂಖ್ಯೆ 2ರನ್ವಯ ವೇತನಕ್ಕೆ ಪರಿಗಣಿಸುವುದು. ಉಳಿದಂತೆ ದಿನಾಂಕ 18-05-2020 ರಿಂದ 31-05-2020ರ ವರೆಗಿನ ಅವಧಿಗೆ ವಾಸ್ತವಿಕ ಹಾಜರಾತಿಗನುಗುಣವಾಗಿ ಮೇ.2020ರ ಮಾಹೆಯ ವೇತನ ಪಾವತಿಸುವುದು.
  • ಪ್ರಸ್ತುತ ಅಮಾನತ್ತು ಆದೇಶದಲ್ಲಿ ಮುಂದುವರೆದ ನೌಕರರು ಜೀವನ ನಿರ್ವಹಣಾ ಬತ್ತೆಗೆ ಅರ್ಹರಿರುತ್ತಾರೆ.
  • 01-03-2020 ರಿಂದ 22-03-2020ರ ಅವಧಿಗೆ ಪೂರ್ಣ ಹಾಜರಾತಿ ಎಂದು ಪರಿಗಣಿಸಿ ಈಗಾಗಲೇ ವೇತನ ಪಾವತಿಸಿದ್ದು ಇದನ್ನು ವಾಸ್ತವಿಕ ಹಾಜರಾತಿಗನುಗುಣವಾಗಿ ವೇತನ ಸರಿದೂಗಿಸುವ ಬಗ್ಗೆ ಮುಂದೆ ತಿಳಿಸಲಾಗುವುದು.
ಬಿಎಂಟಿಸಿ ನಿರ್ದೇಶಕರು ಹೊರಡಿಸಿದ ಆದೇಶ ಪ್ರತಿ

ಆದೇಶದ ಬಗ್ಗೆ ಸಿಬ್ಬಂಧಿ ಹೇಳುವುದೇನು..?

  • ಈಗಾಗಲೇ ಲಾಕ್ ಡೌನ್ ಹಿನ್ನೆಲೆ ತಮ್ಮ ಊರುಗಳಿಗೆ ತೆರಳಿದ ಸಿಬ್ಬಂಧಿಗಳು ಮೇ.18ರಿಂದ ಕರ್ತವ್ಯಕ್ಕೆ ಹಾಜರಾಗುವುದು ಒಮ್ಮಿಂದೊಮ್ಮೆಲೆ ಹೇಗೆ ಸಾಧ್ಯ? ಈ ವೃತ್ತಿಯನ್ನೆ ನಂಬಿಕೊಂಡು ನಮ್ಮ ಕುಟುಂಬಗಳಿರುವುದರಿಂದ ಈ ಹಿಂದಿನಂತೆಯೇ ಮೇ ತಿಂಗಳ ಸಂಬಳವನ್ನು ಪರಿಗಣಿಸಬೇಕು.
  • ಒಂದುಕಡೆ ಸರ್ಕಾರವೇ ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರ ರಕ್ಷಣೆಯ ಬಗ್ಗೆ ಮಾತನಾಡುತ್ತದೆ. ಜೊತೆಗೆ ಉದ್ಯೋಗದ ಭದ್ರತೆ ಬಗ್ಗೆಯೂ ಹೇಳುತ್ತದೆ. ಹೀಗಿದ್ದಾಗ್ಯೂ ನಮ್ಮ ವೇತನದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇಷ್ಟು ವಿಳಂಬವೇಕೆ? ತಿಂಗಳ ಸಂಬಳ ಬಂದರೆ ಅನುಕೂಲವಲ್ಲವೇ?
  • ಇಲಾಖೆಯ ಆದೇಶದ ನಾಲ್ಕನೇ ಅಂಶ ಏಳು ದಿನಗಳ ದಿರ್ಘಕಾಲದ ರಜೆಯ ಬಗ್ಗೆ ಪ್ರಾಸ್ತಾಪಿಸಿದೆ. ಆದರೆ ಈ ಬಗ್ಗೆಯೂ ಗೊಂದಲವಿದೆ. ಕಾರಣ ಒಂದು ವೇಳೆ ಸಿಬ್ಬಂಧಿಗಳು ಸೀಲ್ ಡೌನ್ ಏರಿಯಾದಲ್ಲಿದ್ದರೇ? ಅಥವಾ ಕ್ವಾರಂಟೈನ್ ನಲ್ಲಿದ್ದರೆ, ಇಲ್ಲವೇ ಅವರಿಗೆ ಬೆಂಗಳೂರಿಗೆ ಬರಲು ಅನಾನುಕೂಲಗಳಾಗಿದ್ದರೆ ಹೇಗೆ? ಈ ಬಗ್ಗೆ ಸ್ಪಷ್ಟತೆ ಇಲ್ಲ.
  • ಇಲಾಖೆ ಆದೇಶದಲ್ಲಿ ಕೊನೆಯ ಅಂಶದಲ್ಲಿ ಸೂಚಿಸಿರುವಂತೆ ಮಾರ್ಚ್ ತಿಂಗಳ ವೇತನ ನೀಡಿರುವ ಬಗ್ಗೆ ಮತ್ತು ವಾಸ್ತವಿಕ ಹಾಜರಾತಿಗನುಗುಣವಾಗಿ ಸರಿದೂಗಿಸುವ ಬಗ್ಗೆ ಪ್ರಾಸ್ತಾಪಿಸಿದ್ದು ಸಿಬ್ಬಂಧಿಗಳಿಗೆ ವೇತನ ಕಡಿತದ ಭಯ ಕಾಡುತ್ತಿದೆ.

Leave a Reply

Your email address will not be published. Required fields are marked *

You May Also Like

ಸಂಘಟನಾ ಶಕ್ತಿಯಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ

ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯಿಂದ ಧೈರ್ಯ, ಆತ್ಮವಿಶ್ವಾಸ ಹೆಚ್ಚಿ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಮಾಜಿ ಶಾಸಕ ಎಸ್.ಎನ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ಯಾಂಗ್ ರೇಪ್ ಪ್ರಕರಣದ ಉಳಿದ ಆರೋಪಿಗಳು ಕೇರಳದಲ್ಲಿದ್ದಾರೆಂಬ ಮಾಹಿತಿಯಿದೆ- ಬೊಮ್ಮಾಯಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಡಿಯೋ ವೈರಲ್ ಆಗಿತ್ತು, ಕೇಂದ್ರ ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದರು, ನಮ್ಮ ಪೊಲೀಸರು ಅದನ್ನು ಪತ್ತೆ ಹಚ್ಚಿ ಗ್ಯಾಂಗ್ ನ್ನು ಹಿಡಿದಿದ್ದಾರೆ.

ಹಾವೇರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್

ಸವಣೂರಿಗೆ ಬಂದಿದ್ದ ಮೂವರು ಮೂವರಲ್ಲಿ ಇಬ್ಬರಿಗೆ ಕೊರೋನಾ ಸೊಂಕು ಧೃಡವಾದಂತಾಗಿದೆ. ಇನ್ನೊಂದು ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ