ಕೊರೋನಾ ಕಾವ್ಯ-3

ಆತ್ಮಿಯರೆ,

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಅರುಣಕುಮಾರ ಮ ನರಗುಂದ. ಇವರು ವೃತ್ತಿಯಲ್ಲಿ ಹಿರೇಕೆರೂರಿನಲ್ಲಿ ನ್ಯಾಯಾಂಗ ಇಲಾಖೆಯ ನೌಕರ. ವೃತ್ತಿ ನ್ಯಾಯಾಂಗ ಇಲಾಖೆ ಆದರೆ ಸಾಹಿತ್ಯ ಕೃಷಿ ಇವರ ಪ್ರವೃತ್ತಿ. ಚುಟುಕು ಸಾಹಿತ್ಯ ಪರಿಷತ್ತಿನ ರಾಣೀಬೆನ್ನೂರು ತಾಲೂಕು ಅಧ್ಯಕ್ಷರಾಗಿದ್ದಾರೆ. ಹನಿ ಹನಿ ಇಬ್ಬನಿ ಬಳಗದ ಮೂಲಕವೂ ಇವರು ಹಲವಾರು ಸಾಹಿತ್ತಿಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಮನಸುತ ಎನ್ನವ ಕಥಾಸಂಕಲನ ಹೊರ ತಂದಿದ್ದು, ಮಲ್ಲಿಗೆ, ಕಥಾಸಂಗಮ ಹಲವಾರು ಪತ್ರಿಕೆ ಗಳಲ್ಲಿ ಲೇಖನಗಳು, ಕವನಗಳು ಪ್ರಕಟವಾಗಿವೆ. 6 ಸಂಪಾದಿತ ಕವನ ಸಂಕಲನಗಳು ಹೊರ ಬಂದಿವೆ. 2018 ರಲ್ಲಿ ಮಿರ್ಜಿ ಅಷ್ಣಾಜಿರಾಯ ಕಾವ್ಯಶ್ರೀ ಪ್ರಶಸ್ತಿ ದೊರೆತಿದೆ. ಟಿಂಪೂ ಪುರಾಣ ಎಂಬ ನಾಟಕ ಆಕಾಶವಾಣಿ ಧಾರವಾಡದಲ್ಲಿ ಪ್ರಸಾರವಾಗಿದೆ. ಜೊತೆಗೆ ಇವರು ಹವ್ಯಾಸಿ ಕಲಾವಿದರೂ ಕೂಡ ಹೌದು.

ಮುಜುಕೋ ಪ್ಯಾರ್ ನ ಕರೋನ

ಇತಿಹಾಸದಿಂದಲೂ ಭಾರತದ ಮೇಲೆ

ಬ್ರಿಟಿಷರಿಂದ ದಾಳಿ, ಹಾವಳಿ ನಡೆದೆ ಇತ್ತು

ಅವರನ್ನು ಎದುರಿಸಿ ನಮ್ಮ ದೇಶ,

ಜಲ, ನೆಲವನ್ನು ಉಳಿಸಿದವರು ವೀರಯೋಧರು ||

ಮುಂದುವರೆದು ಸಾಗಿತ್ತು ಸ್ವಾತಂತ್ರ್ಯ ಸಂಗ್ರಾಮ

ಚಳುವಳಿಗಳು, ದಂಗೆಗಳು ಬುಗಿಲೆದ್ದರೂ

ಜಗ್ಗದೆ, ಬಗ್ಗದೆ ಎದುರಿಸಿದ ನಾಯಕರು

ಬ್ರಿಟಿಷರಿಂದ ಭಲಿಷ್ಟ ಭಾರತವ ಸ್ವತಂತ್ರಗೊಳಿಸಿದರು ||

ಅಂದು ಪ್ಲೇಗ್, ಹಂದಿಜ್ವರ, ಹಕ್ಕಿಜ್ವರ

ನಮ್ಮ ಭಾರತಕ್ಕೆ ಬಂದಿದ್ದರೂ ಸಹಾ

ಅವುಗಳನ್ನು ಎದುರಿಸಿ ಬದುಕುಳಿಸಿದ್ದು

ನಮ್ಮ ಯೋಗ, ಧ್ಯಾನ, ಹೋಮ,ಗಿಡ ಮೂಲಿಕೆ ಔಷಧಿಗಳು ||

ಇಂದು ಭಾರತಕ್ಕೆ ಬಂದಿದೆ ಕೊರೊನಾ ಭೀತಿ

ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವದು ಅಪಾಯ

ಒಬ್ಬರಿಗೊಬ್ಬರು ದೂರದಲ್ಲಿರುವುದೇ ಉಪಾಯ

ಕಾರಣ ಎಲ್ಲರು ಮನೆಯಲ್ಲಿರಿ,ಅರೋಗ್ಯವಂತರಾಗಿರಿ

ಎನ್ನುವದೇ ವೇದವಾಕ್ಯ ||

ಹಿಂದಿಭಾಷೆಯಲ್ಲಿ ಒಂದು ಮಾತು ಇತ್ತು

ಮುಜಕೋ ಪ್ಯಾರ್ ಕರೋನಾ

ಆದರೆ ಈಗದಕ್ಕೆ ಬದಲಾದ ಮಾತಿದೆ

ಮುಜಕೋ ಪ್ಯಾರ್ ನ ಕರೋನಾ ||

ಅರುಣಕುಮಾರ ಮ ನರಗುಂದ(ಮನಸುತ), ರಾಣೀಬೆನ್ನೂರು.

Leave a Reply

Your email address will not be published. Required fields are marked *

You May Also Like

ಪೊಲೀಸ್ ಠಾಣೆಯೇ ದೇವಸ್ಥಾನವಿದ್ದಂತೆ : ಪೂಜೆ ಸಲ್ಲಿಸಿ ಗೌರವ

ಪೊಲೀಸರೆ ದೇವರು, ಪೊಲೀಸ್ ಠಾಣೆಯೇ ದೇವಸ್ಥಾನ ಎನ್ನುವ ಕಲ್ಪನೆಯೊಂದಿದೆ ಪೊಲೀಸ್ ಠಾಣೆಗೆ ಪೂಜೆ ಸಲ್ಲಿಸಿ ಈ ಮೂಲಕ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಲಾಯಿತು.

ಬುದ್ದಿ ವಂತಿಕೆಯಿಂದ ಲಾಕ್ ಡೌನ್ ತೆರೆಯಬೇಕು:ರಘುರಾಮ ರಾಜನ್

ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಲಾಕ್ ಡೌನ್ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಬುದ್ಧಿವಂತಿಕೆಯಿಂದ ಲಾಕ್ ಡೌನ್ ತೆರವುಗೊಳಿಸಬೇಕು ಆರ್ಥಿಕ ತಜ್ಞ ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.

ನಾನು ಪತ್ರಕರ್ತೆ ಎಂದು ಸಪ್ಲೈಯರ್ ಥಳಿಸಿದ ಮಹಿಳೆ.!

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಪ್ಲೈಯರ್ಗೆ ಅಪರಿಚಿತ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದ ಘಟನೆ ಹಾವೇರಿ ಜಿಲ್ಲೆಯ…