ಬೆಂಗಳೂರು: ಸಾಮಾನ್ಯವಾಗಿ ಜಾನಪದ ಕಲೆ ಎಂದರೆ ನಮ್ಮ ಬಹುತೇಕ ಯುವಕರಿಗೆ ಅದರ ಗಂಭೀರತೆಗಿಂತ ಹಾಸ್ಯ ಹಾಗೂ ವಿಡಂಭನಾತ್ಮಕವಾಗಿ ಬಳುತ್ತಿರುವವರೆ ಹೆಚ್ಚು. ಆದರೆ ಇದಕ್ಕೆ ಜಾನಪದ ಬಾಲಾಜಿ ತದ್ವಿರುದ್ಧ. ಕನ್ನಡ ಜಾನಪದ ಪರಿಷತ್ ಸಂಘಟನೆ ಮೂಲಕ ರಾಜ್ಯದ ಜಾನಪದ ಕಲಾವಿದರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಕನ್ನಡ ಜಾನಪದ ಯುವ ಬ್ರಿಗೇಡಿನ ಮೂಲಕ ಯುವ ಜನಾಂಗವನ್ನು ಎಚ್ಚರಿಸುವ ಹಾಗೂ ಅವರನ್ನು ಜಾನಪದ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲೂ ಆಪ್ ಸಹಾಯದಿಂದ ಯುವಕರನ್ನು ಸೇರಿಸಿ ಅವರಿಗೆ ಜಾನಪದ ಕಲೆಯ ಸೊಗಡು ಉಣ ಬಡಿಸುವ ಕಾರ್ಯ ಮಾಡುತ್ತಿದ್ದಾರೆ.

ಇಂದು ಆನ್ಲೈನ್ ಮೂಲಕ ನಡೆಸಿದ ಸಭೆಯಲ್ಲಿ 200 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ ಮೂಲ ಜಾನಪದ ಕಲಾವಿದರು, ಆಸಕ್ತರು ಭಾಗವಹಿಸಿದ್ದರು. ಇದೇ ವೇಳೆ ಯುವಕರಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಮೂಲ ಜಾನಪದ ಕಲಾ ಪ್ರಕಾರಗಳ ಪ್ರದರ್ಶನವನ್ನು ಕೂಡ ಏರ್ಪಡಿಸಿದ್ದರು.

ಹಿರಿಯ ಉಪನ್ಯಾಸಕರು, ವಿದ್ಯಾಂಸರ, ಜನಪರ ಹೋರಾಟಗಾರರನ್ನು ಅತಿಥಿಗಳಾಗಿ ಸೇರಿಸಿಕೊಂಡಿದ್ದರೂ ಒಂದು ಗಂಟೆಗೂ ಅಧಿಕ ಸಮಯದವರೆಗೆ ಸಭೆ ನಡೆಯಿತು.

ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಲಾವಿದರು ಭಾಗವಹಿಸಿ ತಮ್ಮ ಕಲಾಪ್ರದರ್ಶನ ನೀಡಿದರು. ಗದಗ ಜಿಲ್ಲೆಯಿಂದಲೂ ಕೂಡ ಕಲಾವಿದ ಶಿವು ಭಜಂತ್ರಿ ಭಾಗವಹಿಸಿದ್ದರು. ಉತ್ತರ ಕರ್ನಾಟಕ ಮಹಾಸಭಾ ಹಾಗೂ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ರವಿಕಾಂತ ಅಂಗಡಿ ಅತಿಥಿಗಳಾಗಿ ಪಾಲ್ಗೊಂಡು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೇ ಜಾನಪದ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಡಾ.ಬಾಲಾಜಿ ಅವರಂಥ ವ್ಯಕ್ತಿಗಳನ್ನು ಪಕ್ಷ ಬೇಧ ಮರೆತು ಅಕಾಡೆಮಿಗೆ ಅಧಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

1 comment
  1. Dr ಬಾಲಾಜಿ ಸರ್ ಅಂತವರನ್ನ ದೀಪ ಹಚ್ಚಿ ಹುಡಿಕಿದರು ಸಿಗೋದಿಲ್ಲ, ಯಾಕೆಂದರೆ ಅವರ ಸೇವೆ ಅಪಾರ ವಾದುದು, ಜಾನಪದದಲ್ಲಿ, ಝಲಕ್ ಮೂಡಿಸುತ್ತಿರುವ ಬಾಲಾಜಿ ಸರ್ ಹೀಗೆ, ಸುಖವಾಗಿ, ಸಂತೋಷದಿಂದ ಹೀಗೆ ಜಾನಪದವನ್ನ ಮುಂದುವರೆಸಿ.
    ಇಂತಿ ನಿಮ್ಮ, :ಶಿವಯೋಗಿ ಹಾವೇರಿ. ????

Leave a Reply

Your email address will not be published. Required fields are marked *

You May Also Like

ಕೋವೀಡ್ ನಿಂದ ಮೃತಪಟ್ಟ ಕೊರೊನಾ ವಾರಿಯರ್ಸ್ ಕುಟುಂಬಕ್ಕೆ ಪರಿಹಾರ ನೀಡಿ-ಸಿದ್ದರಾಮಯ್ಯ

ಬೆಂಗಳೂರು: ಕೊರೋನಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿಗಳ ತಳ ಮಟ್ಟದ ಸಿಬ್ಬಂದಿಗಳು, ಶಿಕ್ಷಕರು, ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ, ಸಾರಿಗೆ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು, ಪಶುವೈದ್ಯರು ಮುಂತಾದವರು ನೇರವಾಗಿ ಜನರ ಜೊತೆ ಇದ್ದು ಕೆಲಸ ಮಾಡುತ್ತಿದ್ದಾರೆ. ಇವರುಗಳಿಗೆ ವಿಶೇಷ ರಕ್ಷಣೆ ನೀಡಬೇಕಾದದ್ದು ಸರ್ಕಾರದ ಜವಾಬ್ಧಾರಿ ಎಂದು ಮಾಜಿ ಸಿಎಂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಹಿಜಾಬ್ ಪ್ರಕರಣ: ಅರ್ಜಿದಾರರ ಅರ್ಜಿ ವಜಾ

ಬೆಂಗಳೂರು: ಹಿಜಾಬ್ ಪ್ರಕರಣದ ತಿರ್ಪುನ್ನು ಇಡಿ ದೇಶದ ಜನತೆಯ ಚಿತ್ತ ನ್ಯಾಯಾಲಯದತ್ತ ನೆಟ್ಟಿತ್ತು.ಅದರಲ್ಲೂ ಕರ್ನಾಟಕದ ನ್ಯಾಯಾಲಯವು…

ಕಪ್ಪತ್ತಗುಡ್ಡಕ್ಕೆ ಮತ್ತೆ ಕರಿನೆರಳು..?

ಬೆಂಗಳೂರು: ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಮತ್ತು ಅರಣ್ಯ ಖಾತೆ ಸಚಿವ ಆನಂದ್ ಸಿಂಗ್…

ನಟ ಸಲ್ಮಾನ್ ಖಾನ್ ಈ ರೀತಿ ಮಾಡಿದ್ದು ಸತ್ಯವೇ? ಸರಿಯೇ?

ಮುಂಬಯಿ : ಕೊರೊನಾದ ಅಬ್ಬರದ ನಡುವೆ ಬಾಲಿವುಡ್ ನ ಒಂದೊಂದೆ ಮುಖಗಳು ಅನಾವರಣಕ್ಕೆ ಬರುತ್ತಿವೆ. ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ನಂತರ ಅನೇಕ ಸತ್ಯಗಳು ಹೊರ ಬರುತ್ತಿವೆ. ಪಕ್ಷಪಾತ, ಗುಂಪುಗಾರಿಕೆ, ಕೀಳು ರಾಜಕೀಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.